Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಖ್ಯಾತ ಕಲಾವಿದ ರಾಮದಾಸ್ ಕಾಮತ್ ಶೇವಗೂರ್‌ ನಿಧನ
    Artist

    ಖ್ಯಾತ ಕಲಾವಿದ ರಾಮದಾಸ್ ಕಾಮತ್ ಶೇವಗೂರ್‌ ನಿಧನ

    January 20, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಖ್ಯಾತ ಕಲಾವಿದ, ಶೇವಗೂರ್‌ ಫೈನ್ ಆರ್ಟ್ಸ್ ಖ್ಯಾತಿಯ ರಾಮದಾಸ್ ಕಾಮತ್ ಶೇವಗೂರ್‌ ದಿನಾಂಕ 15 ಜನವರಿ 2025 ರಂದು ನಿಧನರಾದರು ಇವರಿಗೆ 78 ವರ್ಷ ವಯಸ್ಸಾಗಿತ್ತು. ಇವರ ಪತ್ನಿ ಕೊಂಕಣಿ ಕಿರು ಕಥೆಗಳ ಹೆಸರಾಂತ ಲೇಖಕಿ ಸಂಧ್ಯಾ ಶೇವಗೂರ್‌ 2011ರಲ್ಲಿ ನಿಧನ ಹೊಂದಿದ್ದರು.
    ಮಂಗಳೂರಿನ ಪ್ರಸಿದ್ದ ಶೇವಗೂರ್ ಕಲಾವಿದರ ಕುಟುಂಬದ ರಾಮದಾಸ್ ಅಗ್ರಗಣ್ಯ ಗ್ರಾಫಿಕ್ ಡಿಸೈನರ್ ಮತ್ತು ಭಾವಚಿತ್ರ ಕಲಾವಿದ ಎಲ್. ಕೆ. ಶೇವಗೂರ್‌ ಅವರ ಪುತ್ರರಾಗಿದ್ದಾರೆ. ಮುಂಬಯಿಯ ಪ್ರತಿಷ್ಠಿತ ಜೆ. ಜೆ. ಸ್ಕೂಲ್ ಆಫ್ ಆರ್ಟ್‌ನಲ್ಲಿ ಕಲಾ ಶಿಕ್ಷಣವನ್ನು ಪಡೆದ ಇವರು ತಂದೆಯ ನಿಧನಾನಂತರ ಶೇವಗೂರ್ ಫೈನ್ ಆರ್ಟ್ಸ್ ನಲ್ಲಿ ತಂದೆಯ ಪರಂಪರೆಯನ್ನು ಮುಂದುವರಿಸಿದರು.
    ಭಾವಚಿತ್ರ ರಚನೆಯಲ್ಲಿ, ಅದರಲ್ಲೂ ವಿಶೇಷವಾಗಿ ತೈಲವರ್ಣ ಚಿತ್ರದಲ್ಲಿ ರಾಮದಾಸ್ ಪ್ರಾವೀಣ್ಯ ಹೊಂದಿದ್ದರು. ಕರಾವಳಿಯಾದ್ಯಂತ ಹಲವಾರು ಶಿಕ್ಷಣ ಸಂಸ್ಥೆಗಳು ಮತ್ತು ಇತರ ಸಂಸ್ಥೆಗಳ ಗೋಡೆಗಳನ್ನು ಇವರ ಜೀವ ಸದೃಶ ಭಾವಚಿತ್ರಗಳು ಅಲಂಕರಿಸಿವೆ. ವಿಶ್ವ ಕೊಂಕಣಿ ಕೇಂದ್ರದ ಹಾಲ್ ಆಫ್ ಫೇಮ್‌ನಲ್ಲಿ ಕಾಣಸಿಗುವ ಅನೇಕ ಗಣ್ಯವ್ಯಕ್ತಿಗಳ ಭಾವಚಿತ್ರಗಳು ಇವರ ಕುಂಚದಿಂದ ಮೂಡಿದವುಗಳಾಗಿವೆ. ಐದು ದಶಕಗಳಲ್ಲಿ ವ್ಯಾಪಿಸಿರುವ ಇವರ ಸಮೃದ್ಧ ವೃತ್ತಿ ಜೀವನದ ಉದ್ದಕ್ಕೂ ಇವರು ಸಾವಿರಾರು ಭಾವಚಿತ್ರಗಳನ್ನು ಚಿತ್ರಿಸಿದ್ದರು. ವ್ಯಕ್ತಿಯ ಸಂಪೂರ್ಣ ವ್ಯಕ್ತಿತ್ವವನ್ನು-ಸತ್ವ ಮತ್ತು ಆತ್ಮವನ್ನು-ನಿಖರವಾಗಿ ಸೆರೆ ಹಿಡಿಯುವಲ್ಲಿ ಹೆಸರುವಾಸಿಯಾಗಿದ್ದರು. ಇವರು ಪುತ್ರ, ಪುತ್ರಿ ಹಾಗೂ ಅಪಾರ ಸಂಖ್ಯೆಯ ಚಿತ್ರಕಲಾಭಿಮಾನಿಗಳನ್ನು ಅಗಲಿದ್ದಾರೆ.

    artist
    Share. Facebook Twitter Pinterest LinkedIn Tumblr WhatsApp Email
    Previous Articleತೆಕ್ಕಟ್ಟೆಯ ಹಯಗ್ರೀವದಲ್ಲಿ ‘ದೊಂದಿ ಬೆಳಕಿನ ಹಾಗೂ ಮಂದ ಬೆಳಕಿನ ಯಕ್ಷಗಾನ’ ಮತ್ತು ‘ಗಾನ ವೈಭವ’
    Next Article ಲೋಕಾರ್ಪಣೆಗೊಂಡ ‘ಅವಿಭಜಿತ ದಕ್ಷಿಣ ಕನ್ನಡದ ಮಹಿಳಾ ಚಿಂತನೆ’ ಕೃತಿ
    roovari

    Add Comment Cancel Reply


    Related Posts

    ಪರಿಚಯ ಲೇಖನ | ‘ಬೆಳೆಯುವ ಯಕ್ಷಸಿರಿ’ ಸಚಿನ್ ಶೆಟ್ಟಿ ನಾಗರಕೊಡಿಗೆ

    May 6, 2025

    ಪುಸ್ತಕ ವಿಮರ್ಶೆ – “ಸುಜ್ಞಾನದ ರೆಕ್ಕೆ ಹಚ್ಚಿ ಗಗನಕ್ಕೆ ಹಾರುವ ಹಕ್ಕಿ”

    April 30, 2025

    ನೃತ್ಯ ವಿಮರ್ಶೆ – ಕೆನೆಗಟ್ಟಿದ ಭಕ್ತಿಭಾವದ ‘ನವವಿಧ ಭಕ್ತಿ’ ನೃತ್ಯರೂಪಕ

    April 23, 2025

    ಪರಿಚಯ ಲೇಖನ | ‘ಪ್ರತಿಭಾ ಸಂಪನ್ನ ಕಲಾಪಟು’ ಸನತ್ಕುಮಾರ್ ಆಚಾರ್ಯ

    April 5, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.