ಬೆಂಗಳೂರು : ಹಿರಿಯ ಬರಹಗಾರ್ತಿ, ಕನ್ನಡದ ಅತ್ಯತ್ತಮ ಸ್ತ್ರೀ ಚಿಂತಕಿ, ಪತ್ರಕರ್ತೆ, ‘ಎಡಕಲ್ಲು ಗುಡ್ಡದ ಮೇಲೆ’,’ ಹುಲಿಯ ಹಾಲಿನ ಮೇವು’, ‘ಗಿರಿಕನ್ಯೆ’, ‘ಬಯಲುದಾರಿ’ಯಂತಹ ಕಾದಂಬರಿಗಳನ್ನು ನೀಡಿದ ಖ್ಯಾತ ಕಾದಂಬರಿಕಾರ ಭಾರತೀಸುತ ಅವರ ಪುತ್ರಿ ಕುಸುಮಾ ಶಾನಭಾಗ ದಿನಾಂಕ 22 ಜೂನ್ 2025ರಂದು ನಿಧನರಾದರು. ಇವರಿಗೆ 78 ವರ್ಷ ವಯಸ್ಸಾಗಿತ್ತು.
ಪ್ರಜಾವಾಣಿ ದಿನಪತ್ರಿಕೆ ಉದ್ಯೋಗಿಯಾಗಿ ಕೆಲಸ ಮಾಡಿ ಸ್ವಯಂ ನಿವೃತ್ತಿ ಪಡೆದಿರುವ ಇವರು ಲೈಂಗಿಕ ಕಾರ್ಯಕರ್ತರ ಕುರಿತು ಸುಮಾರು ಹತ್ತು ವರ್ಷಗಳಿಗೂ ಹೆಚ್ಚುಕಾಲ ಅಧ್ಯಯನ ನಡೆಸಿದ್ದಾರೆ.
‘ನೆನಪುಗಳ ಬೆನ್ನೇರಿ’ ಎಂಬ ಕಥಾಸಂಕಲನ, ʻಮಣ್ಣಿಂದ ಎದ್ದವರು’ ಎಂಬ ವಿಶಿಷ್ಟ ಕಾದಂಬರಿ, ʻಕಾಯದ ಕಾರ್ಪಣ್ಯ’ ಲೈಂಗಿಕ ಕಾರ್ಯಕರ್ತೆಯರ ಕುರಿತ ಕಥನ ಪ್ರಕಟವಾಗಿದೆ. ಇವರ ಬರಹಗಳು ‘ಕೆಂಡಸಂಪಿಗೆ’ಯಲ್ಲಿ ಓದುಗರ ಮೆಚ್ಚುಗೆಗೆ ಪಾತ್ರವಾಗಿತ್ತು.
Subscribe to Updates
Get the latest creative news from FooBar about art, design and business.
Previous Article ಲೋಕಾರ್ಪಣೆಗೊಂಡ ‘ತತ್ತ್ವಭಾಗವತಮ್’ ನಾಲ್ಕು ಕೃತಿಗಳು