Subscribe to Updates

    Get the latest creative news from FooBar about art, design and business.

    What's Hot

    ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಾರ್ಯಕಾರಿ ಸಮಿತಿಯ ಸಂಘ ಸಂಸ್ಥೆಗಳ ಪ್ರತಿನಿಧಿಯಾಗಿ ಸೈಯ್ಯದ ನಜೀರೊದ್ದಿನ ಮುತವಲ್ಲಿ ನಾಮ ನಿರ್ದೇಶನ

    August 11, 2025

    ಕಾಸರಗೋಡಿನಲ್ಲಿ “ಗುರುದಕ್ಷಿಣೆ” ಯಕ್ಷಗಾನ ತಾಳಮದ್ದಳೆ

    August 11, 2025

    ಕೊಡವೂರು ಶ್ರೀ ದೇವಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

    August 11, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಬೆಂಗಳೂರಿನ ಮಹಾದೇವ ದೇಸಾಯಿ ಸಭಾಂಗಣದಲ್ಲಿ ಪ್ರೊ. ಎಚ್.ಟಿ. ಪೋತೆಯವರಿಗೆ ಅಭಿನಂದನೆ | ಫೆಬ್ರವರಿ 22
    Book Release

    ಬೆಂಗಳೂರಿನ ಮಹಾದೇವ ದೇಸಾಯಿ ಸಭಾಂಗಣದಲ್ಲಿ ಪ್ರೊ. ಎಚ್.ಟಿ. ಪೋತೆಯವರಿಗೆ ಅಭಿನಂದನೆ | ಫೆಬ್ರವರಿ 22

    February 21, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಸಪ್ನ ಬುಕ್ ಹೌಸ್ ಬೆಂಗಳೂರು, ಗಾಂಧಿ ಸ್ಮಾರಕ ನಿಧಿ ಬೆಂಗಳೂರು ಮತ್ತು ದಲಿತ ಸಾಹಿತ್ಯ ಪರಿಷತ್ತು ಗದಗ ಇವುಗಳ ಸಂಯುಕ್ತಾಶ್ರಯದಲ್ಲಿ ವಿಚಾರ ಸಂಕಿರಣ, ಸಾಕ್ಷ್ಯಚಿತ್ರ, ಕಥಾ ಆಲಾಪ, ಐದು ಕೃತಿಗಳ ಜನಾರ್ಪಣೆ ಮತ್ತು ಅಭಿನಂದನೆ ಕಾರ್ಯಕ್ರಮವನ್ನು ದಿನಾಂಕ 22 ಫೆಬ್ರವರಿ 2025ರಂದು ಬೆಳಗ್ಗೆ 10-30 ಗಂಟೆಗೆ ಬೆಂಗಳೂರು, ಕುಮಾರಪಾರ್ಕ್ ಪೂರ್ವ, ಗಾಂಧಿ ನಗರ, ಎರಡನೆಯ ಮಹಡಿ, ಮಹಾದೇವ ದೇಸಾಯಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 10-00 ಗಂಟೆಗೆ ಡಾ. ಅಪ್ಪಗೆರೆ ತಿಮ್ಮರಾಜು ಮತ್ತು ತಂಡದವರಿಂದ ‘ಜನಪದ ಗೀತಗಾಯನ’ ಪ್ರಸ್ತುತಗೊಳ್ಳಲಿದೆ.

    ಉನ್ನತ ಶಿಕ್ಷಣ ಪರಿಷತ್ತು ಇದರ ಉಪಾಧ್ಯಕ್ಷರಾದ ಪ್ರೊ. ಎಸ್.ಆರ್. ನಿರಂಜನ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದು, ಬೆಂಗಳೂರು ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ನಾಡೋಜ ಡಾ. ವೂಡೇ ಪಿ. ಕೃಷ್ಣ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಕವಿ ಹಾಗೂ ಸಂಸ್ಕೃತಿ ಚಿಂತಕರಾದ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಇವರು ಆಶಯ ಭಾಷಣ ಮಾಡಲಿರುವರು. ಪ್ರೊ. ಪಿ.ಕೆ. ಖಂಡೋಬಾ, ಪ್ರೊ. ವ್ಹಿ.ಜಿ. ಪೂಜಾರ, ಪ್ರೊ. ಡಿ.ಬಿ. ನಾಯಕ, ಪ್ರೊ. ಬಸವರಾಜ ಸಬರದ ಮತ್ತು ಪ್ರೊ. ದೊಡ್ಡಣ್ಣ ಬಜಂತ್ರಿ ಇವರಿಗೆ ಗುರು ವಂದನೆ ಹಾಗೂ ಡಾ. ಬಸವರಾಜ ಕೊನೇಕ್, ಶ್ರೀ ಪ್ರಕಾಶ ಕಂಬತ್ತಳ್ಳಿ, ಶ್ರೀ ಗುರುಮೂರ್ತಿ ಮತ್ತು ಶ್ರೀ ಕೃಷ್ಣಮೂರ್ತಿ ಇವರುಗಳಿಗೆ ಸನ್ಮಾನ ಮಾಡಲಾಗುವುದು. ಗೋಷ್ಠಿ 01ರಲ್ಲಿ ಪ್ರೊ. ಚಿತ್ತಯ್ಯ ಪೂಜಾರ ಇವರಿಂದ ‘ಪೋತೆಯವರ ಕಥನ ಸಾಹಿತ್ಯ’, ಪ್ರೊ. ಎಚ್.ಜಿ. ಶ್ರೀಧರ ಇವರಿಂದ ‘ಪೋತೆಯವರ ಸಂಸ್ಕೃತಿ ಕಥನ’, ಪ್ರೊ. ಚಲುವರಾಜು ಇವರಿಂದ ‘ಪೋತೆಯವರ ವ್ಯಕ್ತಿ ಕಥನ’ ವಿಷಯ ಬಗ್ಗೆ ವಿಚಾರ ಸಂಕಿರಣ ಹಾಗೂ ಗೋಷ್ಠಿ 02ರಲ್ಲಿ ಮಹಿಷಾ ರೆಡ್ಡಿ ಮುನ್ನೂರ, ಡಾ. ಲಕ್ಷ್ಮೀಶಂಕರ ಜೋಶಿ ಹಾಗೂ ಸೌಖ್ಯಶ್ರೀ ಕುಲಕರ್ಣಿ ಇವರಿಂದ ‘ಕಥಾ ಆಲಾಪ’ ಜರಗಲಿದೆ. ಸಂಜೆ 3-30 ಗಂಟೆಗೆ ಐದು ಕೃತಿಗಳ ಜನಾರ್ಪಣೆ ಮತ್ತು ಕಲಬುರಗಿಯ ಗುಲಬರ್ಗಾ ವಿಶ್ವ ವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಪ್ರೊ. ಎಚ್.ಟಿ. ಪೋತೆಯವರಿಗೆ ಅಭಿನಂದನೆ ಕಾರ್ಯಕ್ರಮ ನಡೆಯಲಿದೆ.

    Book release felicitation folk Literature Music
    Share. Facebook Twitter Pinterest LinkedIn Tumblr WhatsApp Email
    Previous Articleಕಾಸರಗೋಡಿನ ಕುಂಬಳೆಯಲ್ಲಿ ‘ದೊಂದಿ ಬೆಳಕಿನ ಯಕ್ಷಗಾನ’ ಪ್ರದರ್ಶನ | ಫೆಬ್ರವರಿ 22
    Next Article ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಪ್ರೊ. ಅ.ರಾ.ಮಿತ್ರರ ಕೃತಿ ಅವಲೋಕನ, ಅನಾವರಣ ಮತ್ತು ಅಭಿನಂದನ ಸಮಾರಂಭ | ಫೆಬ್ರವರಿ 23
    roovari

    Add Comment Cancel Reply


    Related Posts

    ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಾರ್ಯಕಾರಿ ಸಮಿತಿಯ ಸಂಘ ಸಂಸ್ಥೆಗಳ ಪ್ರತಿನಿಧಿಯಾಗಿ ಸೈಯ್ಯದ ನಜೀರೊದ್ದಿನ ಮುತವಲ್ಲಿ ನಾಮ ನಿರ್ದೇಶನ

    August 11, 2025

    ಕಾಸರಗೋಡಿನಲ್ಲಿ ‘ಮಂದಾರ ರಾಮಾಯಣ’ ಸುಗಿವು- ದುನಿವು

    August 11, 2025

    ಹಿರಿಯ ಸಾಹಿತಿ ಶಾಂತಮ್ಮ ನಿಧನ

    August 11, 2025

    ಕನ್ನಡ ಜಾನಪದ ಪರಿಷತ್ತು ಕೇರಳ ರಾಜ್ಯ ಅಧ್ಯಕ್ಷರಾಗಿ ಡಾ. ವಾಮನ್ ರಾವ್ ಆಯ್ಕೆ

    August 11, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.