Subscribe to Updates

    Get the latest creative news from FooBar about art, design and business.

    What's Hot

    ಆಳ್ವಾಸ್ ರಂಗ ತಂಡಕ್ಕೆ ಕಲಾವಿದರಿಂದ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಜೂನ್ 10

    May 31, 2025

    ಮಂಗಳೂರಿನಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯಿಂದ ‘ನೃತ್ಯ, ಗಾನ ವೈಭವ’

    May 31, 2025

    ಕೊಪ್ಪಳದ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ರಾಜ್ಯಮಟ್ಟದ ಆರತಕ್ಷತೆ ಕವಿಗೋಷ್ಠಿ

    May 31, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಸಹಸ್ರಾರು ಸಾಹಿತ್ಯಿಕ ಹೃದಯಗಳೆದುರು ಸನ್ಮಾನಿತಗೊಂಡ ಅವಿಸ್ಮರಣೀಯ ಅಮೃತ ಘಳಿಗೆ
    Article

    ಸಹಸ್ರಾರು ಸಾಹಿತ್ಯಿಕ ಹೃದಯಗಳೆದುರು ಸನ್ಮಾನಿತಗೊಂಡ ಅವಿಸ್ಮರಣೀಯ ಅಮೃತ ಘಳಿಗೆ

    March 17, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಶ್ರೀಮತಿ ಚಂದ್ರಕಲಾ ಇಟಗಿಮಠ ಇವರ ಸಾರಥ್ಯದ ಕಪ್ಪತ್ತಗಿರಿ ಫೌಂಡೇಶನ್ (ರಿ.) ಕಳಸಾಪುರ ಗದಗ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ದಿನಾಂಕ 09 ಮಾರ್ಚ್ 2025ರಂದು ಬಂಜಾರ ಭವನದಲ್ಲಿ ಆಯೋಜಿಸಿದ್ದ ಅದ್ದೂರಿ ಮಹಿಳಾ ಸಮ್ಮೇಳನದಲ್ಲಿ ಆಹ್ವಾನಿತನಾಗಿ ಪಾಲ್ಗೊಂಡಿದ್ದು, ಸಾಹಿತ್ಯಕ್ಷೇತ್ರದ ಸಾಧನೆಗಾಗಿ ವಿಶೇಷ ಗೌರವ ಸ್ವೀಕರಿಸಿ, ಪುರಸ್ಕೃತನಾಗಿದ್ದು, ಮರೆಯಲಾಗದ ಅಪೂರ್ವ ಅನುಭವ. ಅವರ್ಣನೀಯ ಆನಂದಾನುಭೂತಿಯ ಅನುಭಾವ.

    ದಿವ್ಯಶ್ರೀಗಳ ಸಾನಿಧ್ಯ, ಅತ್ಯಂತ ಗಣ್ಯ-ಮಾನ್ಯರ ಉಪಸ್ಥಿತಿ, ನೂರಾರು ವಿವಿಧ ಕ್ಷೇತ್ರದ ಅಪರೂಪದ ಸಾಧಕರ ಸಮಾಗಮ, ನಾಡಿನ ಮೂಲೆ-ಮೂಲೆಗಳಿಂದ ಆಗಮಿಸಿದ್ದ ಸಹಸ್ರಾರು ಸಾಧಕ-ಸಾಧಕಿಯರು, ಕವಿ-ಕವಯತ್ರಿಯರು, ಲೇಖಕಿಯರು, ಕಲಾವಿದರು, ಸಾಹಿತ್ಯಾಸಕ್ತರ ಭವ್ಯ ಸಮ್ಮಿಲನ.

    ಅತಿಥಿ ಮಹೋದಯರ ಅರ್ಥಪೂರ್ಣ ಭಾಷಣ, ಶ್ರೀಗಳ ದಿವ್ಯಾಶೀರ್ವಚನ, ಸಮ್ಮೇಳನಾಧ್ಯಕ್ಷೆ ಶ್ರೀಮತಿ ರತ್ನಾ ಗಿ. ಬದಿ ಇವರ ಭಾವಪೂರ್ಣ ಮಾತುಗಳು, ವೇದಿಕೆಯ ಅಧ್ಯಕ್ಷತೆ ವಹಿಸಿದ್ದ ಸಮಾರಂಭದ ಮುಖ್ಯ ರೂವಾರಿ ಶ್ರೀಮತಿ ಚಂದ್ರಕಲಾ ಇಟಗಿಮಠ ಇವರ ಸ್ಪೂರ್ತಿದಾಯಕ ನುಡಿಗಳು ಸಮಾರಂಭದ ಮೆರುಗನ್ನು ನೂರ್ಮಡಿಗೊಳಿಸಿತು.

    140 ಕವಯಿತ್ರಿಯರ ’ಭೂಮಿ ತೂಕದಾಕೆ’ ಕೃತಿ ಬಿಡುಗಡೆ, ಕವಯತ್ರಿಯರಿಗೆ ಗೌರವ ಸಮ್ಮಾನ, ವಿವಿಧ ಕ್ಷೇತ್ರದ ನೂರಾರು ಸಾಧಕಿಯರಿಗೆ ಪ್ರಶಸ್ತಿ ಪ್ರಧಾನ, ನೂರಾರು ವಿದ್ಯಾರ್ಥಿನಿಯರಿಗೆ ಪ್ರಶಸ್ತಿ ಪುರಸ್ಕಾರ, ಕವಿಗೋಷ್ಠಿ, ವಿಚಾರ ಸಂಕಿರಣ, ಸಾಂಸ್ಕೃತಿಕ ಕಾರ್ಯಕ್ರಮಗಳು, ಮೆರವಣಿಗೆ, ನಂದಿಧ್ವಜ ಕುಣಿತ, ಜಾನಪದ ಕಲೆಗಳ ಪ್ರದರ್ಶನ, ರುಚಿಕರ ಉಟೋಪಚಾರ ಹೀಗೇ ಇಡೀ ದಿನ ಸ್ತ್ರೀಶಕ್ತಿಯ ಕನ್ನಡದ ಹಬ್ಬ, ವಿಶ್ವ ಮಹಿಳಾದಿನದ ಮಹೋತ್ಸವ.

    ಅಂತರರಾಷ್ಟ್ರೀಯ ಮಹಿಳಾದಿನವನ್ನು ಭರ್ಜರಿಯಾಗಿ ಸಂಪನ್ನಗೊಳಿಸಿ, ಕನ್ನಡದ ನಾರಿಶಕ್ತಿಯ ಭವ್ಯ ಅನಾವರಣಗೊಳಿಸಿ, ಸಮ್ಮೇಳನದ ಅಭೂತಪೂರ್ವ ಯಶಸ್ಸಿಗೆ ಕಾರಣೀಕರ್ತರಾದ ಶ್ರೀಮತಿ ಚಂದ್ರಕಲಾ ಮೇಡಂ ಹಾಗೂ ಅವರ ಸಮಸ್ತ ಬಳಗ ನಿಜಕ್ಕೂ ಅಭಿನಂದನಾರ್ಹರು. ಇಂತಹ ಅದ್ವಿತೀಯ ಸಮಾರಂಭಕ್ಕೆ ಸಾಕ್ಷಿಯಾಗಿ, ಸನ್ಮಾನಿತಗೊಂಡು ಸಂಭ್ರಮಿಸುವ ಸುವರ್ಣಾವಕಾಶ ಕಲ್ಪಿಸಿದ ಶ್ರೀಮತಿ ಚಂದ್ರಕಲಾ ಇಟಗಿಮಠ ಮತ್ತು ಕಪ್ಪತ್ತಗಿರಿ ಫೌಂಡೇಶನ್ನಿನ ಸಕಲ ಪದಾಧಿಕಾರಿಗಳಿಗೂ ನಾನು ಚಿರಋಣಿ.

    ಮುಖಪುಟ, ವಾಟ್ಸಾಪಿನಲ್ಲಿ ನಿತ್ಯವೂ ನನ್ನ ಕವಿತೆಗಳನ್ನೋದಿ ಮೆಚ್ಚಿ, ಹರಸಿ, ಹಾರೈಸುವ, ಅನವರತ ಆಶೀರ್ವದಿಸುವ ನೂರಾರು ಅಕ್ಷರಬಂಧುಗಳ ಮುಖಾಮುಖಿಯಾದದ್ದು, ಅವರ ನಗೆ-ನುಡಿಗಳೊಡನೆ ಜೊತೆಯಾದದ್ದು, ಕ್ಯಾಮೆರಾ ಕಣ್ಣಲ್ಲಿ ಸೆರೆಯಾದದ್ದು, ಮರೆಯಲಾಗದ ಮಧುರ ಅವಿಸ್ಮರಣೀಯ ಅನುಭವ. ಅಕ್ಕರಾಮೃತವಿಟ್ಟು ಅಭಿಮಾನಿಸಿದ ಆ ಎಲ್ಲ ಭಾವಜೀವಿಗಳಿಗೂ ನಾನು ಅಕ್ಷರಶಃ ಆಭಾರಿ.

    – ಎ.ಎನ್. ರಮೇಶ್ ಗುಬ್ಬಿ

    article baikady felicitation Literature roovari
    Share. Facebook Twitter Pinterest LinkedIn Tumblr WhatsApp Email
    Previous Articleಶ್ರೀ ಎಡನೀರು ಕ್ಷೇತ್ರದಲ್ಲಿ ‘ಕನ್ನಡಿಯಲ್ಲಿ ಕನ್ನಡಿಗರು’ ಸರಣಿಯ ಎರಡು ಸಂಚಿಕೆಗಳ ಬಿಡುಗಡೆ ಕಾರ್ಯಕ್ರಮ
    Next Article ಕಾರ್ಕಳದ ಯಕ್ಷ ರಂಗಾಯಣದಲ್ಲಿ “ಕವಿತೆಯ ಮಾತು – ಅಡಿಗರ ನೆನಪು” ಕಾರ್ಯಕ್ರಮ
    roovari

    Add Comment Cancel Reply


    Related Posts

    ಆಳ್ವಾಸ್ ರಂಗ ತಂಡಕ್ಕೆ ಕಲಾವಿದರಿಂದ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಜೂನ್ 10

    May 31, 2025

    ಮಂಗಳೂರಿನಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯಿಂದ ‘ನೃತ್ಯ, ಗಾನ ವೈಭವ’

    May 31, 2025

    ಕೊಪ್ಪಳದ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ರಾಜ್ಯಮಟ್ಟದ ಆರತಕ್ಷತೆ ಕವಿಗೋಷ್ಠಿ

    May 31, 2025

    ‘ದಾಸವಾಣಿ’ ಹವಲ್ದಾರ್ ತಂಡದವರಿಂದ ದಾಸರ ಕೃತಿಗಳ ಅಮೋಘ ಗಾಯನ ಕಾರ್ಯಕ್ರಮ | ಜೂನ್ 01

    May 31, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.