Subscribe to Updates

    Get the latest creative news from FooBar about art, design and business.

    What's Hot

    ಶ್ರೀ ಗಣೇಶ ನೃತ್ಯಾಲಯದಲ್ಲಿ ‘ನೃತ್ಯೋಲ್ಲಾಸ’ ಮಾಸಿಕ ಭರತನಾಟ್ಯ ಕಾರ್ಯಕ್ರಮ

    August 26, 2025

    ಬಂಟ್ವಾಳದ ಏರ್ಯ ಬೀಡುವಿನಲ್ಲಿ ‘ಏರ್ಯ ಲಕ್ಷ್ಮೀನಾರಾಯಣ ಆಳ್ವ ಶತಮಾನೋತ್ಸವ ಸಮಾರಂಭ | ಆಗಸ್ಟ್ 28

    August 26, 2025

    ಕ.ಸಾ.ಪ.ದಿಂದ ಹಿರಿಯ ಸಾಹಿತಿ ಮುಳಿಯ ಗೋಪಾಲಕೃಷ್ಣ ಭಟ್ ಇವರಿಗೆ ಸನ್ಮಾನ | ಆಗಸ್ಟ್ 30

    August 26, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕ.ಸಾ.ಪ. ಮಂಗಳೂರು ತಾಲೂಕು ಘಟಕದಿಂದ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿರವರಿಗೆ ಅಭಿನಂದನೆ
    Literature

    ಕ.ಸಾ.ಪ. ಮಂಗಳೂರು ತಾಲೂಕು ಘಟಕದಿಂದ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿರವರಿಗೆ ಅಭಿನಂದನೆ

    January 19, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕ ಏರ್ಪಡಿಸಿದ ಅಭಿನಂದನಾ ಸಭೆಯು ದಿನಾಂಕ 12-01-2024ರಂದು ಮಂಗಳೂರಿನ ಬಿಜೈಯಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಮಾನ ಸ್ವೀಕರಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಕಾಸರಗೋಡು ಗಡಿನಾಡು ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಇವರು ಮಾತನಾಡುತ್ತಾ “ಕಾಸರಗೋಡಿನ ಮಣ್ಣಿನ ಕಣ ಕಣದಲ್ಲಿ ಕನ್ನಡಮ್ಮನ ಪ್ರೀತಿ ಹರಿಯುತ್ತಿದೆ ಮತ್ತು ಇಲ್ಲಿನ ಎಲ್ಲ ಕನ್ನಡ ಮನಸ್ಸುಗಳು ಒಂದಾಗಿ ತಾಯಿ ಭುವನೇಶ್ವರಿಯ ಸೇವೆಗೈಯುತ್ತಿದ್ದಾರೆ. ಸರಳ ಸಜ್ಜನ, ನುರಿತ ಸಂಘಟಕ ಎಸ್.ವಿ. ಭಟ್ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಹಿರಿಯ ಕಿರಿಯ ಮನಸ್ಸುಗಳೆಲ್ಲ ಸೇರಿಕೊಂಡು ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಅಲ್ಲಿನ ಎಲ್ಲ ಸಂಘಟನೆಗಳೊಂದಿಗೆ ನನಗೆ ನಿಕಟ ಸಂಪರ್ಕ ಇದೆ. ಎಲ್ಲರನ್ನೂ ಜೊತೆಗೂಡಿಸಿಕೊಂಡು ಕನ್ನಡಮ್ಮನ ಸೇವೆಯಲ್ಲಿ ತೊಡಗಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ” ಎಂದು ಹೇಳಿದರು.

    ಕ.ಸಾ.ಪ. ಕೇಂದ್ರ ಮಾರ್ಗದರ್ಶಿ ಸಮಿತಿ ಸದಸ್ಯ ಡಾ. ಮುರಲೀಮೋಹನ್ ಚೂಂತಾರು ಅಭಿನಂದನೆಯ ನುಡಿಗಳನ್ನಾಡಿದರು. ಘಟಕದ ಕೋಶಾಧಿಕಾರಿ ಎನ್. ಸುಬ್ರಾಯ ಭಟ್, ಡಾ. ಜೆ.ಪಿ. ತೊಟ್ಟೆತ್ತೋಡಿಯವರ ಬಗೆಗೆ ಮಾತನಾಡಿದರು. ಘಟಕದ ಅಧ್ಯಕ್ಷ ಡಾ. ಮಂಜುನಾಥ ಎಸ್. ರೇವಣ್ಕರ್ ಅಧ್ಯಕ್ಷತೆ ವಹಿಸಿ, ಸನ್ಮಾನಿಸಿ, ಶುಭ ಹಾರೈಸಿದರು. ಗೌರವ ಕಾರ್ಯದರ್ಶಿ ಗಣೇಶ್ ಪ್ರಸಾದ್ ಜೀ ಧನ್ಯವಾದವಿತ್ತರು. ಸಮಿತಿ ಸದಸ್ಯ ಎಂ.ಟಿ. ಭಟ್, ಮುರಳೀಧರ ಭಾರದ್ವಾಜ್, ಕ.ಸಾ.ಪ. ಸದಸ್ಯರಾದ ಡಾ. ಕಿಶನ್ ರಾವ್ ಬಾಳಿಲ, ಎ.ಎಸ್.ಭಟ್, ಅನಂತ ಶರ್ಮ, ನಿಜಗುಣ ದೊಡ್ಡಮನಿ, ಶಶಿಧರ್, ರಾಜಶ್ರೀ ಮೋಹನ್, ಹಾಗೂ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.

    Share. Facebook Twitter Pinterest LinkedIn Tumblr WhatsApp Email
    Previous Articleವಿವಿ ಯಕ್ಷಗಾನ ಕೇಂದ್ರದಿಂದ ಕುರಿಯ ಮನೆಯಲ್ಲಿ ‘ಯಕ್ಷಾಯಣ’ ದಾಖಲೀಕರಣ‌ ಕಾರ್ಯಕ್ರಮ
    Next Article ಪುಸ್ತಕ ಬಹುಮಾನಕ್ಕೆ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಫೆಬ್ರವರಿ 20
    roovari

    Add Comment Cancel Reply


    Related Posts

    ಬಂಟ್ವಾಳದ ಏರ್ಯ ಬೀಡುವಿನಲ್ಲಿ ‘ಏರ್ಯ ಲಕ್ಷ್ಮೀನಾರಾಯಣ ಆಳ್ವ ಶತಮಾನೋತ್ಸವ ಸಮಾರಂಭ | ಆಗಸ್ಟ್ 28

    August 26, 2025

    ಕ.ಸಾ.ಪ.ದಿಂದ ಹಿರಿಯ ಸಾಹಿತಿ ಮುಳಿಯ ಗೋಪಾಲಕೃಷ್ಣ ಭಟ್ ಇವರಿಗೆ ಸನ್ಮಾನ | ಆಗಸ್ಟ್ 30

    August 26, 2025

    ಮೂಡುಬಿದಿರೆಯಲ್ಲಿ ‘ಕನ್ನಡ ಕಂಪು’ ಕನ್ನಡ ಕಲರವ ಮತ್ತು ಉಪನ್ಯಾಸ | ಆಗಸ್ಟ್ 28

    August 26, 2025

    ಪುತ್ತೂರಿನಲ್ಲಿ ಜನಮನ ಗೆದ್ದ ‘ಸ್ವಾತಂತ್ರ್ಯೋತ್ಸವ ಮಕ್ಕಳ ಕವಿಗೋಷ್ಠಿ’

    August 26, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.