Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಗಮಕ ವಿದುಷಿ ಶಾಂತಾ ಕೌತಾಳ ಇವರಿಗೆ ಸನ್ಮಾನ ಸಮಾರಂಭ
    Literature

    ಗಮಕ ವಿದುಷಿ ಶಾಂತಾ ಕೌತಾಳ ಇವರಿಗೆ ಸನ್ಮಾನ ಸಮಾರಂಭ

    July 19, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email
    ವಿಜಯಪುರ : ಕರ್ನಾಟಕ ಗಮಕ ಕಲಾ ಪರಿಷತ್ತಿನ ವಿಜಯಪುರ ಜಿಲ್ಲಾ ಶಾಖೆ, ಪಿ. ಡಿ. ಜೆ. ಶಾಲೆ ಹಾಗೂ ಕರ್ನಾಟಕ ರಾಜ್ಯ ಗಮಕ ಕಲಾ ಪರಿಷತ್ತು ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ‘ಕುಮಾರವ್ಯಾಸ ಪ್ರಶಸ್ತಿ’ ಪುರಸ್ಕೃತ ಗಮಕ ಕಲಾವಿದೆ ಶ್ರೀಮತಿ ಶಾಂತಾ ಕೌತಾಳ ಇವರಿಗೆ ಸನ್ಮಾನ ಹಾಗೂ ಗಮಕ ವಾಚನ ಸಮಾರಂಭವು ದಿನಾಂಕ 12-07-2024ರಂದು ವಿಜಯಪುರದ ಪಿ. ಡಿ. ಜೆ. ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.
    ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪಿ. ಡಿ. ಜೆ. ಪದವಿ ಪೂರ್ವ ಕಾಲೇಜಿನ ಪ್ರಿನ್ಸಿಪಾಲರಾದ ಶ್ರೀಮತಿ ದೇವಕಿ ಕೆ. ಕುಲಕರ್ಣಿ ಮಾತನಾಡಿ “ಗಮಕ ಕಾರ್ಯಕ್ರಮದಿಂದ ವಿದ್ಯಾರ್ಥಿಗಳ ನೀತಿಮಟ್ಟ ಹೆಚ್ಚುತ್ತದೆ.” ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಶ್ರೀನಿವಾಸ ಬಾಳಾಜಿ ಕುಲಕರ್ಣಿ, ಗಮಕ ಪರಿಷತ್ ಅಧ್ಯಕ್ಷ ಶ್ರೀ ಬಿ.ಎಂ.ಪಾಟೀಲ, ಗಮಕಿಗಳಾದ ಶ್ರೀಮತಿ ಭೂದೇವಿ ಕುಲಕರ್ಣಿ, ಪುಷ್ಪಾ ಕುಲಕರ್ಣಿ, ಕಲ್ಯಾಣರಾವ್ ದೇಶಪಾಂಡೆ ಉಪಸ್ಥಿತರಿದ್ದರು.
    ಕಾಲೇಜಿನ ವಿದ್ಯಾರ್ಥಿನಿಯರ ಭಗವದ್ಗೀತೆಯ ಪಠಣದೊಂದಿಗೆ ಸಮಾರಂಭವು ಆರಂಭಗೊಂಡಿತು. ಗಮಕ ಪರಿಷತ್ತಿನ ಸದಸ್ಯರಾದ ಶ್ರೀ ಎಸ್. ಎಂ. ಜೇವರ್ಗಿ ಸಭಿಕರನ್ನು ಸ್ವಾಗತಿಸಿದರು.  ಬಿ. ಎಂ. ಪಾಟೀಲ್ ಇವರು ಕರ್ನಾಟಕ ಗಮಕ ಪರಿಷತ್ತಿನ ಬೆಳವಣಿಗೆಯನ್ನು ಸಭಿಕರಿಗೆ ತಿಳಿಸಿದರು.
    ಕಾರ್ಯಕ್ರಮದ ಆರಂಭದಲ್ಲಿ ಗಮಕ ಕಾರ್ಯಕ್ರಮ ನಡೆಯಿತು.  ಗಮಕಿಗಳಾದ ಪುಷ್ಪಾ ಮತ್ತು ಭೂದೇವಿ ಇವರು ತೊರವೆ ರಾಮಾಯಣದ ಅಯೋಧ್ಯಾಕಾಂಡದ `ಭರತನ ಸೋದರ ಪ್ರೇಮ’ ಪ್ರಸಂಗದ ಆಯ್ದ ಪದ್ಯಗಳ ಕಾವ್ಯವಾಚನ ಮಾಡಿದರು.  ವ್ಯಾಖ್ಯಾನಕಾರರಾದ ಶ್ರೀ ಕಲ್ಯಾಣರಾವ್ ದೇಶಪಾಂಡೆಯವರು ವಿದ್ಯಾರ್ಥಿಗಳಿಗೆ ತಿಳಿಯುವಂತೆ ಭರತ ಹಾಗೂ ರಾಮರ ಆದರ್ಶ ಸೋದರ ಪ್ರೇಮ ಹಾಗೂ ಮಾನವೀಯ ಗುಣಗಳ ವಿವರಣೆ ನೀಡಿದರು. ಅತಿಥಿಗಳಾಗಿ ಆಗಮಿಸಿದ ಶ್ರೀನಿವಾಸ ಕುಲಕರ್ಣಿಯವರು ಗದುಗಿನ ಭಾರತದ ವಿರಾಟ ಪರ್ವದ ಆಯ್ದ ಪದ್ಯಗಳ ಗಮಕ ವಾಚನ-ವ್ಯಾಖ್ಯಾನ ಮಾಡಿದರು.  ನಂತರ ಸಭೆಯಲ್ಲಿ ಹಿರಿಯ ಗಮಕ ಕಲಾವಿದೆ ಶಾಂತಾ ಕೌತಾಳರನ್ನು ಗಮಕ ಪರಿಷತ್ತಿನ ಪರವಾಗಿ ಪ್ರಶಸ್ತಿ ಲೇಖನ ಸಹಿತವಾಗಿ ಸನ್ಮಾನಿಸಲಾಯಿತು.
    ಸಮಾರಂಭದಲ್ಲಿ ಗಮಕ ಪರಿಷತ್ತಿನ ಸದಸ್ಯರಾದ ಶ್ರೀ ಪರಮಾನಂದ ಪೂಜಾರಿ, ಶಿವಾಜಿ ಮೋರೆ, ಬಿ. ಕೆ. ಗೋಟ್ಯಾಳ, ಮೋಹನ್ ಕೌತಾಳ್, ಶ್ರೀಲಕ್ಷ್ಮೀ ಕೌತಾಳ್, ಪ್ರಮಿಳಾ ದೇಶಪಾಂಡೆ, ಅನಂತ್ ದಾನಿ, ವಿಜಯೀಂದ್ರ ಪಾಟೀಲ್, ಶಿವು ಪಾಟೀಲ್, ರಾಘವೇಂದ್ರ ದೇಶಪಾಂಡೆ ಹಾಗೂ ಕಾಲೇಜು ಪ್ರಾಧ್ಯಾಪಕ ವರ್ಗದವರು ಭಾಗವಹಿಸಿದ್ದರು.

    Share. Facebook Twitter Pinterest LinkedIn Tumblr WhatsApp Email
    Previous Articleಪುತ್ತೂರಿನಲ್ಲಿ ‘ಪತ್ರಿಕಾ ದಿನಾಚರಣೆ, ಸನ್ಮಾನ ಹಾಗೂ ಉಪನ್ಯಾಸ’ | ಜುಲೈ 20
    Next Article ಧರ್ಮಸ್ಥಳದಲ್ಲಿ 53ನೇ ವರ್ಷದ ‘ಪುರಾಣ ಕಾವ್ಯ ವಾಚನ – ಪ್ರವಚನ’ ಉದ್ಘಾಟನೆ
    roovari

    Add Comment Cancel Reply


    Related Posts

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025

    ಖ್ಯಾತ ಸಾಹಿತಿ ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯ ನಿಧನ

    May 8, 2025

    ಆಳ್ವಾಸ್‌ನ ಶಿವರಾಮ ಕಾರಂತ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ

    May 7, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.