Subscribe to Updates

    Get the latest creative news from FooBar about art, design and business.

    What's Hot

    ವಿಶೇಷ ಲೇಖನ | ನಿಘಂಟು ತಜ್ಞ ಪ್ರೊ. ಜಿ. ವೆಂಕಟಸುಬ್ಬಯ್ಯ

    August 23, 2025

    ‘ಪ್ರೊ. ಜಿ. ವೆಂಕಟಸುಬ್ಬಯ್ಯ ಭಾಷಾ ಸಮ್ಮಾನ್‌ ಪುರಸ್ಕಾರ’ ಪ್ರಕಟ

    August 23, 2025

    ‘ಬೆರಗು’ ಪ್ರಶಸ್ತಿಗೆ ಹಸ್ತಪ್ರತಿ ಆಹ್ವಾನ | ಕೊನೆಯ ದಿನಾಂಕ ಸೆಪ್ಟೆಂಬರ್ 25

    August 23, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ‘ಯಕ್ಷತ್ರಿವೇಣಿ’ ಕಾರ್ಯಕ್ರಮದಲ್ಲಿ ಸುರೇಂದ್ರ ಮಲ್ಲಿ ಗುರುಪುರ ಇವರಿಗೆ ಸನ್ಮಾನ
    Felicitation

    ‘ಯಕ್ಷತ್ರಿವೇಣಿ’ ಕಾರ್ಯಕ್ರಮದಲ್ಲಿ ಸುರೇಂದ್ರ ಮಲ್ಲಿ ಗುರುಪುರ ಇವರಿಗೆ ಸನ್ಮಾನ

    March 6, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಅಲೆವೂರಾಯ ಪ್ರತಿಷ್ಠಾನವು ಕೀರ್ತಿಶೇಷ ವರ್ಕಾಡಿ ಲಕ್ಷ್ಮೀನಾರಾಯಣ ಅಲೆವೂರಾಯರ ಹೆಸರಿನಲ್ಲಿ ನಡೆಸುತ್ತಾ ಬಂದಿರುವ ‘ಯಕ್ಷತ್ರಿವೇಣಿ’ ಕಾರ್ಯಕ್ರಮದ ಎರಡನೇ ದಿನದ ಕಾರ್ಯಕ್ರಮವು ದಿನಾಂಕ 23 ಫೆಬ್ರವರಿ 2025 ರಂದು ಮಂಗಳೂರಿನ ಮಂಗಳಾದೇವಿ ದೇವಸ್ಥಾನದ ಆವರಣದಲ್ಲಿ ನಡೆಯಿತು.

    ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಬೆಂಕಿನಾಥೇಶ್ವರ ಮೇಳದ ಸಂಚಾಲಕ ಸುರೇಂದ್ರ ಮಲ್ಲಿ ಗುರುಪುರ ಮಾತನಾಡಿ “ಯಕ್ಷಗಾನದಿಂದ ನಾನು ತುಂಬಾ ಅನುಭವ ಪಡೆದಿದ್ದೇನೆ. ಗಣ್ಯಮಾನ್ಯರ ಜೊತೆ ಕಲಾವಿದನಾಗಿ ಮಾನ್ಯತೆ ಪಡೆದಿದ್ದೇನೆ. ಜೊತೆಗೆ ಕಲೆಯ ಉಳಿಕೆಗಾಗಿ ಮೇಳ ನಡೆಸುತ್ತಾ ಸಾಕಷ್ಟು ನೋವು-ನಲಿವುಗಳನ್ನು ಹೊಂದಿದ್ದೇನೆ. ಆದರೂ ಸಹ ಕಲಾವಿದರ ಸಹಕಾರದಿಂದ ನೋವಿನಲ್ಲೂ ನಲಿವನ್ನು ಕಂಡಿದ್ದೇನೆ. ಅದರಲ್ಲಿ ಸಾರ್ಥಕತೆ ಇದೆ ಇಂದಿನ ಅಲೆವೂರಾಯ ಪ್ರತಿಷ್ಠಾನದ ಸನ್ಮಾನವನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆ” ಎಂದು ಹೇಳಿದರು. ದೇವಳದ ಶ್ರೀನಿವಾಸ ಐತಾಳ ಶುಭಕೋರಿದರು.

    ತುಳು ಕೂಟ ಕುಡ್ಲ ಇದರ ಅಧ್ಯಕ್ಷೆಯಾದ ಹೇಮಾ ದಾಮೋದರ ನಿಸರ್ಗ ಮಾತನಾಡಿ “ಯಕ್ಷಗಾನವು ಸರ್ವರನ್ನೂ ತೊಡಗಿಸಿಕೊಳ್ಳುವ ಕಲೆ. ಇಂದು ಮಕ್ಕಳು, ಸ್ರೀ ಹಾಗೂ ಪುರುಷ ಎನ್ನುವ ಭೇದವಿಲ್ಲದೇ ತಮ್ಮ ಕಲಾಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ. ಈ ಪ್ರತಿಷ್ಠಾನದಿಂದ ಇನ್ನೂ ಹೆಚ್ಚಿನ ಸೇವೆ ನಡೆಯಲಿ” ಎಂದು ಹೇಳಿದರು.ಸುಧಾಕರ ರಾವ್, ಪೇಜಾವರ ಸ್ವಾಗತಿಸಿ, ರವಿ ಅಲೆವೂರಾಯ ನಿರ್ವಹಿಸಿ, ಮಧುಸೂದನ್ ಅಲೆವೂರಾಯ ವಂದಿಸಿದರು. ಬಳಿಕ ಖ್ಯಾತಕಲಾವಿದರ ಕೂಡುವಿಕೆಯಿಂದ ‘ರಾಮಾವತಾರ’ ಎಂಬ ಬಯಲಾಟ ಜರಗಿತು

    felicitation yakshagana
    Share. Facebook Twitter Pinterest LinkedIn Tumblr WhatsApp Email
    Previous Articleರಕ್ಷಿದಿಯಲ್ಲಿ ‘ಎಸ್.ಕೆ. ಕರೀಂಖಾನ್ ಸೌಹಾರ್ದ ಪ್ರಶಸ್ತಿ’ ಹಾಗೂ ‘ಅಮೃತ ಕಾವ್ಯ ಪ್ರಶಸ್ತಿ’ ಪ್ರದಾನ ಸಮಾರಂಭ | ಮಾರ್ಚ್ 08
    Next Article ಸಂಗೀತ ಕಛೇರಿ ವಿಮರ್ಶೆ | ತರುಣ ಕಲಾವಿದರಿಂದ ಉತ್ಸಾಹಭರಿತ ಸಂಗೀತ
    roovari

    Add Comment Cancel Reply


    Related Posts

    ವಂಡ್ಸೆಯ ಉಪಾಧ್ಯಾಯರ ಗದ್ದೆಯಲ್ಲಿ ‘ಯಕ್ಷ ಹೆಜ್ಜೆ’ | ಆಗಸ್ಟ್ 24

    August 23, 2025

    ಅತ್ತಾವರ ಚಕ್ರಪಾಣಿ ಗೋಪಿನಾಥ ದೇವಸ್ಥಾನದ ಕಲಾ ಮಂಟಪದಲ್ಲಿ ‘ಅಭಿನಂದನಾ ಕಾರ್ಯಕ್ರಮ’ | ಆಗಸ್ಟ್ 24

    August 23, 2025

    ಉಡುಪಿಯಲ್ಲಿ ‘ಸಂಗಮ’ ಸಮೂಹ ಚಿತ್ರಕಲೆ ಪ್ರದರ್ಶನ ಹಾಗೂ ಗುರುವಂದನೆ | ಆಗಸ್ಟ್ 23ರಿಂದ 31

    August 22, 2025

    ಶ್ರೀ ಭಗವತೀ ಯಕ್ಷಕಲಾ ಬಳಗದಿಂದ ಯಕ್ಷಗಾನಾರ್ಪಣೆ

    August 22, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.