ಮಡಿಕೇರಿ : ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾಜನರಾದ ಮಡಿಕೇರಿಯ ಲೇಖಕಿ ದೀಪಾಭಾಸ್ತಿಯವರನ್ನು ಅವರ ನಿವಾಸದಲ್ಲಿ ದಿನಾಂಕ 30 ಮೇ 2025ರಂದು ಸನ್ಮಾನಿಸಲಾಯಿತು.
ಲೇಖಕಿಯನ್ನು ಕಾಫಿ ಹಾರದ ಮೂಲಕ ಸನ್ಮಾನಿಸಿದ ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂಥರ್ ಗೌಡ ಮಾತನಾಡಿ “ಲೇಖಕಿ ದೀಪಾಭಾಸ್ತಿಯವರ ಸಾಹಿತ್ಯ ಸಾಧನೆ ಕೊಡಗಿನ ಜನತೆಗೇ ಹೆಮ್ಮೆ ತಂದಿದ್ದು, ಭವಿಷ್ಯದಲ್ಲಿಯೂ ಲೇಖತಿಯ ಯಾವುದೇ ಸಾಹಿತ್ಯ ಪರ ಚಟುವಟಿಕೆಗಳಿಗೆ ಸರ್ಕಾರದ ವತಿಯಿಂದ ಅಗತ್ಯ ನೆರವು ನೀಡಲಾಗುವುದು. ಬೂಕರ್ ಪ್ರಶಸ್ತಿಯು ಅನುವಾದ ಸಾಹಿತ್ಯದ ನಿಜವಾದ ಶಕ್ತಿಯನ್ನು ನಿರೂಪಿಸಿದೆ. ಬೂಕರ್ ಪ್ರಶಸ್ತಿಯಂಥ ಜಗತ್ತಿನಲ್ಲಿ ಸಾಹಿತ್ಯಕ್ಕಾಗಿನ ಶ್ರೇಷ್ಠ ಪ್ರಶಸ್ತಿಯನ್ನು ಮಡಿಕೇರಿಯ ಲೇಖಕಿ ಪಡೆದುಕೊಳ್ಳುವ ಮೂಲಕ ಕೊಡಗು, ಕರ್ನಾಟಕ ಮಾತ್ರವಲ್ಲದೇ ಭಾರತವೇ ಮಡಿಕೇರಿಯತ್ತ ಗಮನ ಹರಿಸುವಂತೆ ದೀಪಾಭಾಸ್ತಿ ಮಾಡಿದ್ದಾರೆ. ಈ ಸಾಹಿತ್ಯ ಸಾಧನೆ ಜಗತ್ತಿನ ಸಾಹಿತ್ಯ ಲೋಕದ ಇತಿಹಾಸದಲ್ಲಿ ಅಚ್ಚಳಿಯದೇ ದಾಖಲಾಗಿದೆ. ಬಾನುಮುಪ್ತಾಕ್ ಅವರ ‘ಎದೆಯ ಹಣತೆ’ ಕೃತಿಯನ್ನು ‘ಹಾರ್ಟ್ ಲ್ಯಾಂಗ್’ ಎಂಬ ಆಂಗ್ಲ ಭಾಷಾ ಕೃತಿಗೆ ಅನುವಾದಿಸಲು ಪಟ್ಟಿರಬಹುದಾದ ಶ್ರಮ ಊಹೆಗೂ ನಿಲುಕದ್ದು, ಮಡಿಕೇರಿಯ ಪರಿಸರದ ನಡುವಿನ ಮನೆಯಲ್ಲಿಯೇ ಇಂಥ ಪ್ರಯತ್ನವನ್ನು ದೀಪಾಭಾಸ್ತಿ ಮಾಡಿರುವುದು ಹೆಮ್ಮೆ ಪಡುವ ವಿಚಾರ, ಮಡಿಕೇರಿಯ ನಿಸರ್ಗ ಕೂಡ ಇಂಥ ಸಾಹಿತ್ಯಕ್ಕೆ ಸ್ಪೂರ್ತಿಯಾಗಿರುವುದು ಗಮನಾರ್ಹ. ಸಾಹಿತ್ಯ ಲೋಕದಲ್ಲಿ ಅನುವಾದಿತ ಕೃತಿಯ ನಿಜವಾದ ಶಕ್ತಿಯೇನೆಂದು ‘ಹಾರ್ಟ್ ಲ್ಯಾಂಪ್’ ನಿರೂಪಿಸಿದೆ. ವಿದ್ಯಾರ್ಥಿಗಳು ಮತ್ತು ಯುವಪೀಳಿಗೆಗೆ ದೀಪಾಭಾಸ್ತಿ ಆದರ್ಶವಾಗಿದ್ದು ಈ ನಿಟ್ಟಿನಲ್ಲಿ ಕೊಡಗಿನ ವಿವಿಧ ಶಿಕ್ಷಣ ಸಂಸ್ಥೆಗಳ ಆಸಕ್ತ ವಿದ್ಯಾರ್ಥಿಗಳೊಂದಿಗೆ ಲೇಖಕಿಯ ಸಂವಾದ ಏರ್ಪಡಿಸಿ, ಸಾಹಿತ್ಯ, ಲೇಖನ ಬರೆಯುವ ನಿಟ್ಟಿನಲ್ಲಿ ಪ್ರೋತ್ಸಾಹ ನೀಡುವ ಪ್ರಯತ್ನ ಮಾಡಲಾಗುವುದು. ದೀಪಾಭಾಸ್ತಿಯ ಬರವಣಿಗೆಗೆ ಬಾಲ್ಯದಿಂದಲೇ ಪ್ರೋತ್ಸಾಹ ನೀಡಿದ ಪೋಷಕರೂ ಅಭಿನಂದನೆಗೆ ಅರ್ಹರು. ಬೆಂಗಳೂರಿನಲ್ಲಿ ಸೋಮವಾರ ಆಯೋಜಿತ ಸರ್ಕಾರದಿಂದ ಅಭಿನಂದನಾ ಕಾರ್ಯಕ್ರಮದಲ್ಲಿ ಮಡಿಕೇರಿ ಶಾಸಕನಾಗಿ ತಾನೂ ಪಾಲ್ಗೊಂಡು ದೀಪಾಭಾಸ್ತಿ ಮತ್ತು ಭಾನುಮುಸ್ತಾಕ್ ಅವರಿಗೆ ಗೌರವ ಸಲ್ಲಿಸುತ್ತೇನೆ.” ಎಂದರು.
ಈ ಸಂದರ್ಭ ಮಾತನಾಡಿದ ದೀಪಾಭಾಸ್ತಿ “ತಾನು ಭಾನುಮುಸ್ತಾಕ್ ಅವರು ಬರೆದ ‘ಎದೆಯ ಹಣತೆ’ ಸೇರಿದಂತೆ ಇತರ ಕೃತಿಗಳಲ್ಲಿನ 12 ಆಯ್ದ ಕಥೆಗಳನ್ನು ‘ಹಾರ್ಟ್ ಲ್ಯಾಂಪ್’ ಮೂಲಕ ಅನುವಾಸಿದ್ದು, ಬೂಕರ್ ಪ್ರಶಸ್ತಿಯು ಅನುವಾದಕ್ಕಾಗಿ ಬಂದದ್ದು ಸಂತೋಷ ತಂದಿದೆ. ಸುಮಾರು 3 ವರ್ಷಗಳ ಅವಿರತ ಶ್ರಮ ಈ ಸಾಧನೆಯ ಹಿಂದಿದೆ. ಸದ್ಯದಲ್ಲಿಯೇ ಲಂಡನ್ ಗೆ ಮತ್ತೆ ತೆರಳಿ ಅಲ್ಲಿಂದ ಜಗತ್ತಿನ ಬೇರೆ ಬೇರೆ ದೇಶಗಳಿಗೆ ಸಂಚರಿಸಿ ಅಲ್ಲಿ ‘ಹಾರ್ಟ್ ಲ್ಯಾಂವ್’ ಕೃತಿಯ ಸಂವಾದ ಕಾರ್ಯಕ್ರಮ ನಡೆಯಲಿದೆ. ಮಡಿಕೇರಿಯ ನಿಸರ್ಗ ರಮಣೀಯತೆಯಿಂದಾಗಿ ಪತಿಯೊಂದಿಗೆ ತಾನು ಬೆಂಗಳೂರಿನಿಂದ ಇಲ್ಲಿಗೇ ಬಂದು ನೆಲಸಿದ್ದೇನೆ. ಕೊಡಗಿನ ಪ್ರಕೃತ್ತಿ ಸಿರಿ ಲೇಖಕರಿಗೆ ನಿಜವಾದ ಸ್ಪೂರ್ತಿಯಾಗಿದೆ. ಹೆಗ್ಗೋಡುವಿನ ಸಮುಧ್ಯತಾ ವೆಂಕಟರಾಮು ಅವರ ‘ಇದೇ ಅಂದರೆ ಇದೆ. ಇಲ್ಲ ಅಂದರೆ ಇಲ್ಲ’ ಎಂಬ ಕೃತಿಯನ್ನು ಈಗ ಇಂಗ್ಲೀಷ್ ಗೆ ಅನುದಾದಿಸುತ್ತಿದ್ದೇನೆ. ಜತೆಗೇ ಸ್ವಂತ ಕೃತಿ ಕೂಡ ಪ್ರಕಟವಾಗಬೇಕಾಗಿದೆ. ಬಾನುಮುಸ್ತಾಕ್ ಅವರು ಬರೆದಿರುವ 6 ಕಥಾ ಸಂಕಲನಗಳಾದ ‘ಹೆಜ್ಜೆ ಮೂಡಿದ ಹಾದಿ’, ‘ಬೆಂಕಿ ಮಳೆ’, ‘ಎದೆಯ ಹಣತೆ’, ‘ಸಫೀರ’, ‘ಬಡವರ ಮಗಳು ಹೆಣ್ಣಲ್ಲ’, ‘ಹೆಣ್ಣು ಹದ್ದಿನ ಸ್ವಯಂವರ’ಗಳಿಗಲ್ಲಿನ ಆಯ್ದ 12 ಕಥೆಗಳಾದ ‘ಶಿಷ್ಟ ಮಾಲನ ಕಲ್ಲು ಚಪ್ಪಡಿ’, ‘ಬೆಂಕಿ ಮಳೆ’,’ ಕರಿನಾಗರಗಳು’, ‘ಹೃದಯ ತೀಪು’೯, ‘ಕೆಂಪುಲುಂಗಿ’, ‘ಎದೆಯ ಹಣತೆ’, ‘ಹೈಹೀಲ್ಡ್ ಸೂ’, ‘ಮೆಲುದನಿಗಳು’, ‘ಸ್ವಗಳವೆಂದರೆ’, ‘ಕಪಾನ್’, ‘ಅರಬ್ಬಿ ಮೇಷ್ಟ್ರು ಮತ್ತು ಗೋಬಿಮಂಚೂರಿ’, ‘ಒಮ್ಮೆ ಹೆಣ್ಣಾಗು ಪ್ರಭುವೇ’ಗಳನ್ನು ಸೇರಿಸಿ ‘ಹಾರ್ಟ್ ಲ್ಯಾಂಪ್’ ಕೃತಿ ಪ್ರಕಟವಾಗಿದೆ. ‘ಹಾರ್ಟ್ ಲ್ಯಾಂಪ್’ ಖಂಡಿತವಾಗಿಯೂ ‘ಎದೆಯ ಹಣತೆ’ಯ ಪೂರ್ಣ ಕಥೆಗಳನ್ನು ಒಳಗೊಂಡಿಲ್ಲ. ಬದಲಿಗೆ ‘ಎದೆಯ ಹಣತೆ’ ಕಥಾ ಸಂಕಲನದ 3 ಕಥೆ ಮಾತ್ರ ‘ಹಾರ್ಟ್ ಲ್ಯಾಂಪ್’ ನಲ್ಲಿದೆ.”ಎಂದರು. ದೀಪಾಭಾಸ್ತಿ ಪತಿ ಚೆಟೀರ ನಾಣಯ್ಯ, ಪೋಷಕರಾದ ಪ್ರಕಾಶ್ ಭಾಸ್ತಿ, ಸುಧಾಬಾಸ್ತಿ, ಪತ್ರಕರ್ತ ಅನಿಲ್ ಹೆಚ್.ಟಿ. ಈ ಹಾಜರಿದ್ದರು.
Subscribe to Updates
Get the latest creative news from FooBar about art, design and business.
Previous Article‘ವಿಭಾ’ ಸಾಹಿತ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ
Next Article ಕೊಂಡೆವೂರಿನಲ್ಲಿ ತುಲುವೆರೆ ಕಲ ಸಂಘಟನೆಯ ಎರಡನೇ ‘ವರ್ಸೋಚ್ಚಯ’