Subscribe to Updates

    Get the latest creative news from FooBar about art, design and business.

    What's Hot

    ಕುರಾಡಿ ಸೀತಾರಾಮ ಅಡಿಗ ಕಾವ್ಯ ಪ್ರಶಸ್ತಿ – 2025ಕ್ಕೆ ಶಶಿ ತರೀಕೆರೆ ಆಯ್ಕೆ

    October 31, 2025

    ವಿಶ್ವ ಕೊಂಕಣಿ ಕೇಂದ್ರದಲ್ಲಿ ವಿಶ್ವ ಕೊಂಕಣಿ ವಾರ್ಷಿಕ ಪುರಸ್ಕಾರ ಪ್ರದಾನ ಸಮಾರಂಭ |ನವೆಂಬರ್ 01

    October 31, 2025

    ಕ.ಸಾ.ಪ.ದಿಂದ ವಿನೂತನ ಕಾರ್ಯಕ್ರಮ ‘ಮಾಸದ ಸಂವಾದ ಸರಣಿ’ಯ ಮೊದಲ ಎಸಳು

    October 31, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕ.ಸಾ.ಪ.ದಿಂದ ವಿನೂತನ ಕಾರ್ಯಕ್ರಮ ‘ಮಾಸದ ಸಂವಾದ ಸರಣಿ’ಯ ಮೊದಲ ಎಸಳು
    Literature

    ಕ.ಸಾ.ಪ.ದಿಂದ ವಿನೂತನ ಕಾರ್ಯಕ್ರಮ ‘ಮಾಸದ ಸಂವಾದ ಸರಣಿ’ಯ ಮೊದಲ ಎಸಳು

    October 31, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಸಮಿತಿಯಿಂದ ವಿನೂತನ ಕಾರ್ಯಕ್ರಮ ‘ಮಾಸದ ಸಂವಾದ ಸರಣಿ’ ಕಾರ್ಯಕ್ರಮದ ಮೊದಲ ಎಸಳು ದಿನಾಂಕ 29 ಅಕ್ಟೋಬರ್ 2025ರಂದು ಶಾರದಾ ಕಾಲೇಜಿನಲ್ಲಿ ನಡೆಯಿತು.

    ಕ.ಸಾ.ಪ. ಮಂಗಳೂರು ತಾಲೂಕು ಸಮಿತಿಯ ಪದಾಧಿಕಾರಿಯಾದ, ದಕ್ಷಿಣ ಕನ್ನಡದ ಸಾಂಸ್ಕೃತಿಕ ಜಗತ್ತಿಗೆ ಚಿರಪರಿಚಿತೆ, ಶಿಕ್ಷಕಿ, ‘ರೂವಾರಿ’ ಅಂತರ್ಜಾಲ ಪತ್ರಿಕೆಯ ನಿರ್ದೇಶಕಿ, ಸಾಧಕಿ ಶ್ರೀಮತಿ ರತ್ನಾವತಿ ಜೆ. ಬೈಕಾಡಿಯವರೊಂದಿಗೆ ಸಂವಾದವನ್ನು ಏರ್ಪಡಿಸಲಾಗಿತ್ತು. ಅವರ ಸಾಧಕ‌ ಜೀವನ ಗಾಥೆಯ ಅನಾವರಣವನ್ನು ಪರಿಷತ್ತಿನ ಮಹಿಳಾ ಪ್ರತಿನಿಧಿ ಡಾ. ಮೀನಾಕ್ಷಿ ರಾಮಚಂದ್ರ ಮಾಡಿಕೊಟ್ಟರು. ರತ್ನಾವತಿಯವರ ಬದುಕಿಗೆ ಪೂರ್ಣ ಅರ್ಥವನ್ನು ನೀಡಿ ಶೈಕ್ಷಣಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಬೆಳೆಸಿದ ಅವರ ಪತಿ ಜನಾರ್ದನ ಬೈಕಾಡಿಯವರ ನಿಸ್ಪೃಹ ಬದುಕಿನ ಪರಿಚಯವನ್ನೂ ನೀಡಿ, ಓರ್ವ ಸಾಧಕ ಪುರುಷನ ಹಿಂದೆ ಓರ್ವ ಮಹಿಳೆ ಇರುತ್ತಾಳೆ. ಆದರೆ ಇಲ್ಲಿ ರತ್ನಾವತಿಯವರಂತಹ ಸಾಧಕಿ ಮಹಿಳೆಯ ಹಿಂದೆ ಇದ್ದವರು ಅವರ ಪತಿ ಶ್ರೀ ಜನಾರ್ದನ ಬೈಕಾಡಿಯವರು‌. ಅವರಿಬ್ಬರ ದಾಂಪತ್ಯವೆಂದರೆ ಬಹಳ ಅಪರೂಪವೆನಿಸಿದ ಆದರ್ಶ ದಾಂಪತ್ಯ ಎಂದು ಹೇಳಿದರು.

    ಶ್ರೀಮತಿ ರತ್ನಾವತಿ ಜೆ. ಬೈಕಾಡಿ ತಮ್ಮ ಬದುಕಿನ ಹಳೆಯ ಪುಟಗಳನ್ನು ತಿರುವಿ ಹಾಕಿ, ತಾವು ದಾಟಿ ಬಂದ ಕಷ್ಟದ ಬದುಕನ್ನು ಸ್ಮರಣೆ ಮಾಡಿಕೊಂಡರು. ತಮ್ಮನ್ನು ಪರಿಷತ್ತು ಈ ತೆರನಾಗಿ ಸಮಾಜಕ್ಕೆ ಪರಿಚಯಿಸಿದುದಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು. ಅನಂತರ ಅವರೊಂದಿಗೆ ಸಂವಾದವನ್ನು ನಡೆಸಲಾಯಿತು. ರತ್ನಾವತಿಯವರ ನೇತೃತ್ವದ ‘ಇಂಚರ’ ತಂಡದವರು ಭಾವಗೀತೆಗಳನ್ನು ಹಾಡಿದರು.‌ ಕ.ಸಾ.ಪ. ಕೇಂದ್ರ ಸಮಿತಿಯ‌ ಡಾ. ಮಾಧವ ಎಂ.ಕೆ‌.ಯವರು ಕ.ಸಾ.ಪ. ಮಂಗಳೂರು ಘಟಕ ಹಮ್ಮಿಕೊಳ್ಳುತ್ತಿರುವಂತಹ ಕಾರ್ಯಕ್ರಮಗಳನ್ನು ಶ್ಲಾಘಿಸಿ ರತ್ನಾವತಿಯವರ ಸಾಧನೆಗಳಿಗೆ ಮೆಚ್ಚುಗೆ ಸೂಚಿಸಿ ಶುಭ ಹಾರೈಸಿದರು. ಕ.ಸಾ.ಪ. ಮಂಗಳೂರು ಸಮಿತಿಯ‌ ಡಾ. ಮಂಜುನಾಥ ರೇವಣಕರರು ಅಧ್ಯಕ್ಷತೆ ವಹಿಸಿದ್ದರು. ಕ.ಸಾ.ಪ. ಜಿಲ್ಲಾ ಸಮಿತಿಯ ಡಾ. ಅರುಣಾ ನಾಗರಾಜ್, ಶ್ರೀ ಸನತ್ ಕುಮಾರ್ ಜೈನ್, ಮಂಗಳೂರು ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ. ಮುರಲಿಮೋಹನ ಚೂಂತಾರು, ಪದಾಧಿಕಾರಿಗಳಾದ ಶ್ರೀ ಬೆನೆಟ್ ಅಮ್ಮನ್ನ, ಪ್ರಾಧ್ಯಾಪಕ ಶ್ರೀ ರಘು ಇಡ್ಕಿದು, ಶ್ರೀ ಹೊಸಮನಿ ಉಪಸ್ಥಿತರಿದ್ದರು. ಕೋಶಾಧಿಕಾರಿ ಸುಬ್ರಾಯ ಭಟ್ ವಂದಿಸಿ, ಇನ್ನೋರ್ವ ಕಾರ್ಯದರ್ಶಿ ಶ್ರೀ ಗಣೇಶ್ ಪ್ರಸಾದ್ ಜಿ. ನಿರೂಪಣೆ ಮಾಡಿದರು.

    baikady Literature roovari
    Share. Facebook Twitter Pinterest LinkedIn Tumblr WhatsApp Email
    Previous Articleಬೆಳಗಾವಿಯ ಲೋಕಮಾನ್ಯ ರಂಗ ಮಂದಿರದಲ್ಲಿ ‘ನಕ್ಷತ್ರ ಯಾತ್ರಿಕರು’ ನಾಟಕ ಪ್ರದರ್ಶನ | ನವೆಂಬರ್ 02
    Next Article ವಿಶ್ವ ಕೊಂಕಣಿ ಕೇಂದ್ರದಲ್ಲಿ ವಿಶ್ವ ಕೊಂಕಣಿ ವಾರ್ಷಿಕ ಪುರಸ್ಕಾರ ಪ್ರದಾನ ಸಮಾರಂಭ |ನವೆಂಬರ್ 01
    roovari

    Add Comment Cancel Reply


    Related Posts

    ಕುರಾಡಿ ಸೀತಾರಾಮ ಅಡಿಗ ಕಾವ್ಯ ಪ್ರಶಸ್ತಿ – 2025ಕ್ಕೆ ಶಶಿ ತರೀಕೆರೆ ಆಯ್ಕೆ

    October 31, 2025

    ವಿಶ್ವ ಕೊಂಕಣಿ ಕೇಂದ್ರದಲ್ಲಿ ವಿಶ್ವ ಕೊಂಕಣಿ ವಾರ್ಷಿಕ ಪುರಸ್ಕಾರ ಪ್ರದಾನ ಸಮಾರಂಭ |ನವೆಂಬರ್ 01

    October 31, 2025

    ಬೆಳಗಾವಿಯ ಲೋಕಮಾನ್ಯ ರಂಗ ಮಂದಿರದಲ್ಲಿ ‘ನಕ್ಷತ್ರ ಯಾತ್ರಿಕರು’ ನಾಟಕ ಪ್ರದರ್ಶನ | ನವೆಂಬರ್ 02

    October 31, 2025

    ಬಳ್ಳಾರಿಯಲ್ಲಿ ಕವಿಗೋಷ್ಠಿಗೆ ಕವನ ಆಹ್ವಾನ | ಕೊನೆಯ ದಿನಾಂಕ ನವೆಂಬರ್ 05

    October 31, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.