Subscribe to Updates

    Get the latest creative news from FooBar about art, design and business.

    What's Hot

    ಕಟೀಲಿನಲ್ಲಿ ‘ತುಳುನಾಡು ಮತ್ತು ಕಳರಿ’ ವಿಚಾರಗೋಷ್ಠಿ ಮತ್ತು ಚರ್ಚಾಗೋಷ್ಠಿ | ಮೇ 24

    May 10, 2025

    ಕಲಾಕುಲ್ ಕೊಂಕಣಿ ನಾಟಕ ರೆಪರ್ಟರಿಗೆ ಅರ್ಜಿ ಆಹ್ವಾನ

    May 10, 2025

    ಮಾಣಿಕ್ಯ ಪ್ರಕಾಶನದ 2025ನೇ ಸಾಲಿನ ರಾಜ್ಯಮಟ್ಟದ ವಿವಿಧ ದತ್ತಿ ಪ್ರಶಸ್ತಿಗಳಿಗೆ ಕೃತಿಗಳ ಆಹ್ವಾನ

    May 10, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮೂಡುಬಿದಿರೆಯ ಕನ್ನಡ ಭವನದಲ್ಲಿ ತುಳು ನಾಟಕದ ಪ್ರಥಮ ಪ್ರದರ್ಶನ
    Drama

    ಮೂಡುಬಿದಿರೆಯ ಕನ್ನಡ ಭವನದಲ್ಲಿ ತುಳು ನಾಟಕದ ಪ್ರಥಮ ಪ್ರದರ್ಶನ

    August 10, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮೂಡುಬಿದಿರೆ : ಕನ್ನಡ ಭವನದಲ್ಲಿ ‘ಕುರಲ್ ಕಲಾವಿದೆರ್ ಬೆದ್ರ’ ಅಭಿನಯದ ಪ್ರಸಾದ್ ಆಳ್ವ ಸಾರಥ್ಯದ ‘ಯೇರ್’ ತುಳು ನಾಟಕದ ಪ್ರಥಮ ಪ್ರದರ್ಶನದ ಉದ್ಘಾಟನಾ ಸಮಾರಂಭವು ದಿನಾಂಕ 04 ಆಗಸ್ಟ್ 2024ರಂದು ನಡೆಯಿತು.

    ಈ ಸಮಾರಂಭವನ್ನು ಉದ್ಘಾಟಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಎಂ. ಮೋಹನ ಆಳ್ವ ಇವರು ಮಾತನಾಡಿ “ತುಳು ನಾಟಕ, ಸಿನಿಮಾ, ಯಕ್ಷಗಾನ ಸೇರಿದಂತೆ ಜಿಲ್ಲೆಯ ವೈವಿಧ್ಯ ಕಲಾ ಪ್ರಕಾರಗಳಿಂದ ತುಳು ಭಾಷೆಯ ಮೇಲಿನ ಗೌರವ ಹೆಚ್ಚಿದೆ. 1933ರಲ್ಲಿ ಪ್ರದರ್ಶನಗೊಂಡ ‘ಮದ್ಮೆ’ ತುಳು ನಾಟಕದಿಂದ ಆರಂಭಗೊಂಡು ಇತ್ತೀಚಿನವರೆಗೆ ಸಾಕಷ್ಟು ತುಳು ನಾಟಕಗಳು ಜಿಲ್ಲೆಯಲ್ಲಿ ಪ್ರದರ್ಶನಗೊಂಡಿವೆ. ದೊಡ್ಡಣ್ಣ ಶೆಟ್ಟಿ, ಸಂಜೀವ ದಂಡಕೇರಿಯಂತಹ ಪ್ರಬುದ್ಧ ಕಲಾವಿದರ ಪ್ರಯತ್ನದಿಂದ ತುಳು ನಾಟಕಗಳು ಮೇಲ್ದರ್ಜೆಗೇರಿದವು. ವಿಜಯ ಕುಮಾರ್ ಕೊಡಿಯಾಲ್ ಬೈಲು, ದೇವದಾಸ್ ಕಾಪಿಕಾಡು ಇನ್ನಿತರ ಕಲಾವಿದರು, ವಿವಿಧ ನಾಟಕ ತಂಡಗಳು ತುಳು ನಾಟಕಗಳಿಗೆ ಹೊಸ ರೂಪ ಕೊಟ್ಟು ಬೆಳೆಸಿರುವುದು ತುಳು ನಾಡಿಗೆ ಹೆಮ್ಮೆ” ಎಂದು ಹೇಳಿದರು.

    ಉದ್ಯಮಿ ಶ್ರೀಪತಿ ಭಟ್‌ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಚೌಟರ ಅರಮನೆಯ ಕುಲದೀಪ್ ಎಂ., ಮೂಡ ಅಧ್ಯಕ್ಷ ಹರ್ಷವರ್ಧನ ಪಡಿವಾಳ್, ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಕೃಷ್ಣರಾಜ ಹೆಗ್ಡೆ, ಎಂ.ಸಿ.ಎಸ್. ಸೊಸೈಟಿ ಸಿ.ಇ.ಒ. ಚಂದ್ರಶೇಖ‌ರ್, ರಕ್ಷಿತ್ ಜೈನ್, ಬ್ಯಾಂಕ್ ಉದ್ಯೋಗಿ ಜನಾರ್ದನ ಶೇರಿಗಾರ್, ರಂಗಭೂಮಿ ಕಲಾವಿದ ಶಿವಪ್ರಕಾಶ್ ಪೂಂಜಾ ಹರೇಕಳ, ನಡ್ಯೋಡಿ ದೈವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ದಿಲೀಪ್‌ ಕುಮಾ‌ರ್ ಶೆಟ್ಟಿ ಉಪಸ್ಥಿತರಿದ್ದರು. ಗಣೇಶ್ ಬಿ. ಅಳಿಯೂರು ಸ್ವಾಗತಿಸಿ, ಶ್ರೀನಿಧಿ ಶೆಟ್ಟಿ ನಿರೂಪಿಸಿ, ತಂಡದ ವ್ಯವಸ್ಥಾಪಕಿ ಬಾಲಿಕ ಜೈನ್ ವಂದಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಮೈಕೋ ಶಿವಣ್ಣ ನೆನಪಿನಲ್ಲಿ ರಂಗ ಗೌರವ, ಸಂಗೀತ, ನಾಟಕ, ಪುಸ್ತಕ ಲೋಕಾರ್ಪಣೆ | ಆಗಸ್ಟ್ 15
    Next Article ಸುರತ್ಕಲ್ ನಲ್ಲಿ ‘ಉದಯರಾಗ – 54’ | ಆಗಸ್ಟ್ 15
    roovari

    Comments are closed.

    Related Posts

    ಕಟೀಲಿನಲ್ಲಿ ‘ತುಳುನಾಡು ಮತ್ತು ಕಳರಿ’ ವಿಚಾರಗೋಷ್ಠಿ ಮತ್ತು ಚರ್ಚಾಗೋಷ್ಠಿ | ಮೇ 24

    May 10, 2025

    ಕಲಾಕುಲ್ ಕೊಂಕಣಿ ನಾಟಕ ರೆಪರ್ಟರಿಗೆ ಅರ್ಜಿ ಆಹ್ವಾನ

    May 10, 2025

    ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ‘ಸಿರಿಪರ್ಬ- 2025’ ತುಳು ಸಾಂಸ್ಕೃತಿಕ ಉತ್ಸವ

    May 10, 2025

    ‘ಗೌರಿ ಸುಂದರ್ ವಾರ್ಷಿಕ ಪ್ರಶಸ್ತಿ’ ಪ್ರದಾನ ಹಾಗೂ ಪುಸ್ತಕ ಲೋಕಾರ್ಪಣೆ ಸಮಾರಂಭ | ಮೇ 11

    May 8, 2025

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.