Subscribe to Updates

    Get the latest creative news from FooBar about art, design and business.

    What's Hot

    ಪರಿಚಯ ಲೇಖನ | ಯಕ್ಷರಂಗದ ಕ್ರಿಯಾಶೀಲ ಪ್ರತಿಭೆ – ಸುಜನ್ ಕುಮಾರ್ ಅಳಿಕೆ

    May 25, 2025

    ವಿಶೇಷ ಲೇಖನ | ಸುಗಮ ಸಂಗೀತದ ಸರದಾರ ‘ಯಶವಂತ ಹಳಿಬಂಡಿ’

    May 25, 2025

    ಶ್ರೀ ಕ್ಷೇತ್ರ ಪಂಚಲಿಂಗದಲ್ಲಿ ಕಿರು ನಾಟಕ, ನೃತ್ಯ ನಮನ ಮತ್ತು ಯಕ್ಷಗಾನ ಪ್ರದರ್ಶನ | ಮೇ 25 ಮತ್ತು 26

    May 24, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಬಾಗಲಕೋಟೆಯಲ್ಲಿ ‘ಜನಪದ ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಮ್ಮೇಳನ – 2025’ | ಜನವರಿ 25
    Awards

    ಬಾಗಲಕೋಟೆಯಲ್ಲಿ ‘ಜನಪದ ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಮ್ಮೇಳನ – 2025’ | ಜನವರಿ 25

    January 23, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬಾಗಲಕೋಟೆ : ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘ (ರಿ.) ಕಮತಗಿ ಮತ್ತು ವಚನ ವೈಭವ ಮಹಿಳಾ ಜಾನಪದ ಸಾಂಸ್ಕೃತಿಕ ಕಲಾ ಸಂಘ (ರಿ.) ಬಾಗಲಕೋಟೆ ಇವುಗಳ ಸಹಯೋಗದಲ್ಲಿ ‘ಜನಪದ ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಮ್ಮೇಳನ – 2025’ವನ್ನು ದಿನಾಂಕ 25 ಜನವರಿ 2025ರಂದು ಮಧ್ಯಾಹ್ನ 2-00 ಗಂಟೆಗೆ ಬಾಗಲಕೋಟೆಯ ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ. ಈ ಸಮ್ಮೇಳನದಲ್ಲಿ ಪುಸ್ತಕ ಬಿಡುಗಡೆ, ಕಲಾ ಪ್ರದರ್ಶನ, ವಿಶೇಷ ಉಪನ್ಯಾಸ, ಕವಿಗೋಷ್ಠಿ ಮತ್ತು ವಿವಿಧ ಕ್ಷೇತ್ರದಲ್ಲಿ ಸೇವೆಗೈದ ಸಾಧಕರಿಗೆ ಪ್ರಶಸ್ತಿ ಪ್ರದಾನ ನಡೆಯಲಿದ್ದು, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಜನಪದ ಕಲಾವಿದೆ ಶ್ರೀಮತಿ ಗುರಮ್ಮ ಸಂಕಿನಮಠ ಇವರು ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದಾರೆ.

    ಶ್ರೀ ಗುರು ಚನ್ನಬಸವೇಶ್ವರ ಹಿರೇಮಠ ಕಮತಗಿಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಹಿರಿಯ ಜನಪದ ಗಾಯಕರಾದ ಶ್ರೀ ಗುರುರಾಜ್ ಹೊಸಕೋಟೆ ಇವರು ಈ ಸಮ್ಮೇಳನವನ್ನು ಉದ್ಘಟಿಸಲಿರುವರು. ಶ್ರೀಮತಿ ಜಯಶ್ರೀ ಭಂಡಾರಿಯವರ ‘ಸಂಸ್ಕೃತಿಯ ಚಿಂತಕರು’ ಲೇಖನಗಳ ಸಂಕಲನ, ಶ್ರೀ ಹುಸೇನ್ ಪತ್ತೆಖಾನ್ ಇವರ ‘ಬಾಳ ಶಾಣ್ಯಾಕಿ’ ಕವನ ಸಂಕಲನ ಮತ್ತು ಶ್ರೀ ಶಿವಾನಂದ ಆದಾಪೂರ ಇವರ ಮೌನ ಕ್ರಾಂತಿ’ ಕವನ ಸಂಕಲನ ಕೃತಿಗಳು ಲೋಕಾರ್ಪಣೆಗೊಳ್ಳಲಿವೆ. ‘ಜನಪದ ಸಾಹಿತ್ಯದಲ್ಲಿ ಮಹಿಳೆ’ ಎಂಬ ವಿಷಯದ ಬಗ್ಗೆ ಸಾಹಿತಿ ಶ್ರೀಮತಿ ದಾಕ್ಷಯಣಿ ಮಂಡಿ ಇವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಹಿರಿಯ ಸಾಹಿತಿ ಡಾ. ಪ್ರಕಾಶ ಗ. ಖಾಡೆ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕವಿಗೋಷ್ಠಿಯಲ್ಲಿ ಸುನೀಲ ಪಾಟೀಲ, ಕವಿತಾ ಹಿರೇಮಠ, ವಿಕ್ರಮ್ ಬಸನಗೌಡ, ಸವಿತಾ ಪಾಟೀಲ, ರೇಖಾ ಗೂಗಿ, ಹೆಚ್.ಎಸ್. ಕಾಳೆ, ರಾಜೇಶ್ವರಿ ಸೂಳಿಕೇರಿ, ಶಿವಾನಂದ ಆದಾಪೂರ, ರಾಜು ಯಾದವ, ಮಹಾಂತೇಶ ಕರಬಶೆಟ್ಟರ, ಬಾಲಾಜಿ ಮಂಕಣಿ, ಅನಿತಾ ಪಾಟೀಲ, ರಾಜಶೇಖರ ಯಲ್ಲಣ್ಣವರ ಮುಂತಾದ ಕವಿಗಳು ಭಾಗವಹಿಸಲಿದ್ದಾರೆ. ಶ್ರೀ ಜ್ಞಾನಸಿಂಧು ಕಲಾ ತಂಡ ಗುಳೇದಗುಡ್ಡ, ಶ್ರೀ ವೀರಭದ್ರೇಶ್ವರ ಸಾಂಬಾಳ ವಾದ್ಯ ಕಮತಗಿ, ಶ್ರೀ ರಾಮಾನಂದ ಭಜನಾ ಮಂಡಳಿ ಕಗಲಗೊಂಬ, ಶ್ರೀ ಬಸವೇಶ್ವರ ಕರಡಿ ಮಜಲು ತಿಮಸಾಗರ, ಸೊಬಾನೇ ಪದ ಅವ್ವನ ಬಳಗ ಕಮತಗಿ, ಶ್ರೀ ಬಸವರಾಜ ಸಿಂದಗಿಮಠ ಮತ್ತು ಕು. ವೈಷ್ಣವಿ ಗೂಳಿ ತಂಡ, ಜೈ ಸೇವಾಲಾಲ್ ಕಲಾ ತಂಡ ಹಾನಾಪುರ ಎಸ್.ಪಿ. ತಾಂಡಾ ಮತ್ತು ಭರತನಾಟ್ಯ ಕು. ಶ್ರೇಯಾ ಚಿನ್ನಕರ ಕು. ಸತ್ವಿಕಾ ಗೂಗಿ ಮುಂತಾದ ಕಲಾ ತಂಡಗಳಿಂದ ಕಲಾ ಪ್ರದರ್ಶನ ನಡೆಯಲಿದೆ.

    award Book release dance felicitation folk Literature Music
    Share. Facebook Twitter Pinterest LinkedIn Tumblr WhatsApp Email
    Previous Articleಚುಟುಕು ಕವಿಗೋಷ್ಠಿಗೆ ಕಾಸರಗೋಡು ಜಿಲ್ಲೆಯ ಕವಿಗಳಿಗೆ ಆಹ್ವಾನ
    Next Article ವಿಶೇಷ ಲೇಖನ | ತ್ರಿಭಾಷಾ ಪಂಡಿತ ರಾಳ್ಳಪಲ್ಲಿ ಅನಂತಕೃಷ್ಣ ಶರ್ಮ
    roovari

    Add Comment Cancel Reply


    Related Posts

    ವಿಶೇಷ ಲೇಖನ | ಸುಗಮ ಸಂಗೀತದ ಸರದಾರ ‘ಯಶವಂತ ಹಳಿಬಂಡಿ’

    May 25, 2025

    ಶ್ರೀ ಕ್ಷೇತ್ರ ಪಂಚಲಿಂಗದಲ್ಲಿ ಕಿರು ನಾಟಕ, ನೃತ್ಯ ನಮನ ಮತ್ತು ಯಕ್ಷಗಾನ ಪ್ರದರ್ಶನ | ಮೇ 25 ಮತ್ತು 26

    May 24, 2025

    ಪುಸ್ತಕ ವಿಮರ್ಶೆ | ‘ವ್ಯಥೆ ಕಥೆ’ ಕನ್ನಡದ ವಿಶಿಷ್ಟವಾದ ಕಿರು ಕಾದಂಬರಿ

    May 24, 2025

    ‘ಭಾಷಾಂತರ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಜೂನ್ 20

    May 24, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.