ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ಪಾಕ್ಷಿಕ ತಾಳಮದ್ದಳೆಯ ಪ್ರಯುಕ್ತ ‘ಕರ್ಣಾವಸಾನ’ ಎಂಬ ಆಖ್ಯಾನವು ದಿನಾಂಕ 29 ಮಾರ್ಚ್ 2025ರಂದು ಶ್ರೀ ಆಂಜನೇಯ ಮಂತ್ರಾಲಯದಲ್ಲಿ ನಡೆಯಿತು.
ಹಿಮ್ಮೇಳದಲ್ಲಿ ಯಲ್.ಯನ್. ಭಟ್, ಸತೀಶ್ ಇರ್ದೆ, ಆನಂದ ಸವಣೂರು ಭಾಗವತರುಗಳಾಗಿ ಚೆಂಡೆ ಮದ್ದಳೆಯಲ್ಲಿ ಅಚ್ಯುತ ಪಾಂಗಣ್ಣಾಯ ಕೋಡಿಬೈಲು ಮತ್ತು ಮಾಸ್ಟರ್ ಅನಿಶ್ ಕೃಷ್ಣ ಪುಣಚ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀಕೃಷ್ಣ (ಭಾಸ್ಕರ್ ಬಾರ್ಯ), ಕರ್ಣ (ಗುಂಡ್ಯಡ್ಕ ಈಶ್ವರ ಭಟ್), ಅರ್ಜುನ (ಗುಡ್ಡಪ್ಪ ಬಲ್ಯ), ವೃದ್ಧ ವಿಪ್ರ (ಮಾಂಬಾಡಿ ವೇಣುಗೋಪಾಲ ಭಟ್) ಸಹಕರಿಸಿದರು. ಟಿ. ರಂಗನಾಥ ರಾವ್ ಸ್ವಾಗತಿಸಿ, ವಂದಿಸಿದರು. ಹರ್ಷ ಎ.ಯಸ್. ಪುಣಚ ಸಹಕರಿಸಿದರು.