Subscribe to Updates

    Get the latest creative news from FooBar about art, design and business.

    What's Hot

    ಕೊಲ್ಯದ ನಾಟ್ಯನಿಕೇತನದಲ್ಲಿ ‘ನಾಟ್ಯಮೋಹನ ನವತ್ಯುತ್ಸವ’ – 18 | ಜೂನ್ 18

    June 17, 2025

    ವಿಶೇಷ ಲೇಖನ – ಶಿಕ್ಷಣ ತಜ್ಞ, ಸಂಸ್ಕೃತಿ ಚಿಂತಕ ಡಾ. ಜಿ. ರಾಮಕೃಷ್ಣ  

    June 17, 2025

    ‘ಪೆನ್ ಟು ಪ್ರೀಮಿಯರ್’ನಿಂದ ಮಹಿಳೆಯರಿಗಾಗಿ ಸಣ್ಣ ಕಥೆಗಳ ಸ್ಪರ್ಧೆ | ಆಗಸ್ಟ್ 31 ಕೊನೆಯ ದಿನ

    June 17, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಗಡಿನಾಡ ಕನ್ನಡಿಗರ ದರ್ಪಣ ಕಾರ್ಯಕ್ರಮ
    Dance

    ಗಡಿನಾಡ ಕನ್ನಡಿಗರ ದರ್ಪಣ ಕಾರ್ಯಕ್ರಮ

    May 24, 2023Updated:August 19, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಾಸರಗೋಡು : ಜೋನ್ ಡಿ ಸೋಜಾ ಅವರ ಸಂಪಾದಕೀಯದ ಪೊಸಡಿಗುಂಪೆ ಮಾಸ ಪತ್ರಿಕೆಯ ಐದನೇ ವಾರ್ಷಿಕೋತ್ಸವದ ಪ್ರಯುಕ್ತ ಗಡಿನಾಡ ಕನ್ನಡಿಗರ ದರ್ಪಣ ಕಾರ್ಯಕ್ರಮವು ದಿನಾಂಕ 20-05-2023ರಂದು ಶ್ರೀ ದುರ್ಗಾಪರಮೇಶ್ವರಿ ಹೈಸ್ಕೂಲ್ ಧರ್ಮತ್ತಡ್ಕದಲ್ಲಿ ಬಹಳ ಅರ್ಥಪೂರ್ಣವಾಗಿ ನಡೆಯಿತು. ಶ್ರೀ ಸದಾಶಿವ ಮುಖ್ಯೋಪಾಧ್ಯಾಯರು ಬಿ ಪಿ ಪಿ ಎ ಎಲ್ ಪಿ ಶಾಲೆ ಪೆರ್ಮುದೆ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶ್ರೀ ರಾಮಚಂದ್ರ ಭಟ್ ಪ್ರಾಂಶುಪಾಲರು ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕಂಡರಿ ಶಾಲೆ ಧರ್ಮತ್ತಡ್ಕ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಡಾ. ವಾಣಿಶ್ರೀ ಕಾಸರಗೋಡು (ವೈದ್ಯರು, ಸಾಹಿತಿಗಳು, ಸಂಘಟಕರು), ಶ್ರೀ ಮಹಾಲಿಂಗ ಭಟ್ ಮುಖ್ಯೋಪಾಧ್ಯಾಯರು ಎ.ಯು.ಪಿ. ಶಾಲೆ ಧರ್ಮತ್ತಡ್ಕ, ಶ್ರೀ ಶಾರದಾ ತನಯ ಬಾಯಾರು ಭಾಗವಹಿಸಿದ್ದರು. ಎಡ್ವಕೇಟ್ ಥಾಮಸ್ ಡಿಸೋಜಾ ಸೀತಾಂಗೋಳಿ, ಶ್ರೀ ಪಿ. ರಾಮಚಂದ್ರ ಭಟ್ ಧರ್ಮತ್ತಡ್ಕ, ಶುಭಾಶಾಂಸನೆಗೈದರು.

    ಈ ಸಮಾರಂಭದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ.) ಕಾಸರಗೋಡು ಸಂಸ್ಥೆಯಿಂದ ಸಾಹಿತ್ಯ ಗಾನ ನೃತ್ಯ ವೈಭವವು ಸುಮಾರು ಮೂರು ಘಂಟೆಗಳ ಕಾಲ ವೈವಿಧ್ಯಮಯವಾಗಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಡಾ. ವಾಣಿಶ್ರೀ ಕಾಸರಗೋಡು ಅವರು ಕಾವ್ಯ ವಾಚನದ ಜೊತೆಗೆ ಸಮಗ್ರ ಕಾರ್ಯಕ್ರಮದ ನಿರೂಪಣೆ ಮಾಡಿದರು. ಗುರುರಾಜ್ ಕಾಸರಗೋಡು, ತನ್ವಿ ಶೆಟ್ಟಿ ಪಾಣಾಜೆ, ಸನುಷಾ ಸುನಿಲ್, ಚುಕ್ಕಿ ವಿಟ್ಲ, ಅವನಿ ಎಂ.ಎಸ್. ಸುಳ್ಯ, ಪ್ರಥಮ್ಯ ಯು.ವೈ. ನೆಲ್ಯಾಡಿ, ಸನುಷಾ ಸುಧಾಕರನ್, ಐಶ್ವರ್ಯ ಆರ್. ಪೂಜಾರಿ, ಹವೀಶ್ ಆರ್. ಪೂಜಾರಿ, ಶ್ವೇತಾ ಯು.ವೈ. ನೆಲ್ಯಾಡಿ, ಅಹನಾ ಎಸ್. ರಾವ್, ಸಿ.ಕೆ. ಮಾಸ್ಟರ್ ಸುಳ್ಯ, ಆಸ್ತಾ ಶೆಟ್ಟಿ ಕಾಸರಗೋಡು, ಹೃತಿಕಾ, ಇಶಾನ್, ಆಧ್ಯಾ, ಕೌಶಿಕಾ, ಆರಾದ್ಯ, ಸುವಿನ್ಯ ಎಡನೀರು, ವರ್ಷಾ ಶೆಟ್ಟಿ ಬಂಬ್ರಾಣ, ಸಾನ್ವಿತಾ ಎ.ಎನ್., ಧನ್ವಿ ಬಿ.ಕೆ, ಜೀಕ್ಷಾ, ವಿಷ್ಣು ಸುಧಾಕರನ್, ಉಷಾ ಸುಧಾಕರನ್, ಕೃಪೇಶ್ ಎಂ.ಆರ್, ಭಾನ್ವಿ ಕುಲಾಲ್ ಮುಂತಾದ ಸಂಸ್ಥೆಯ ಸುಮಾರು 35ಕ್ಕೂ ಅಧಿಕ ಕಲಾವಿದರು ತಮ್ಮ ಪ್ರತಿಭೆಯಿಂದ ನೆರೆದಿರುವ ಪ್ರೇಕ್ಷಕರನ್ನು ರಂಜಿಸಿದರು.

    ಪೊಸಡಿಗುಂಪೆ ಮಾಸಪತ್ರಿಕೆಯ ವತಿಯಿಂದ ಭಾಗವಹಿಸಿದ ಎಲ್ಲಾ ಕಲಾವಿದರಿಗೆ ಗೌರವ ಸ್ಮರಣಿಕೆ ನೀಡಿ ಪುರಸ್ಕರಿಸಲಾಯಿತು. ಸಂಸ್ಥೆಯ ಅಧ್ಯಕ್ಷರು ಡಾ.ವಾಣಿಶ್ರೀ ಕಾಸರಗೋಡು ಹಾಗೂ ಕಾರ್ಯದರ್ಶಿ ಗುರುರಾಜ್ ಕಾಸರಗೋಡು ಇವರನ್ನು ಜೋನ್ ಡಿಸೋಜಾ ಅವರು ಶಾಲು ಹೊದೆಸಿ ಸ್ಮರಣಿಕೆ ನೀಡಿ ಗೌರವಿಸಿದರು. ವಿ.ಬಿ.ಕುಲಮರ್ವ ಖ್ಯಾತ ಕವಿಗಳು ಇವರ ಸಾರಥ್ಯದಲ್ಲಿ ಸುಮಾರು 20 ಕವಿಗಳ ಕವನ ವಾಚನದ ಕವಿಗೋಷ್ಠಿ ಜರುಗಿತು. ಈ ಶುಭ ಸಮಾರಂಭದಲ್ಲಿ ಹಲವಾರು ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಆಸಕ್ತ ಗಾಯಕರಿಂದ ಕರೋಕೆ ಗಾಯನ ನಡೆಯಿತು.

    Share. Facebook Twitter Pinterest LinkedIn Tumblr WhatsApp Email
    Previous Articleರಂಗಮಂಡಲ – ಸಿವಗಂಗ ಟ್ರಸ್ಟಿನಿಂದ ‘ಮ್ಯಾಳ ಕಲಿಯೋಣ ಬಾರ’
    Next Article ಪರಿಚಯ ಲೇಖನ | “ದಿವ್ಯ ಗಾನಶ್ರೀ” – ದಿವ್ಯಶ್ರೀ ಭಟ್ ಪುತ್ತಿಗೆ
    roovari

    Add Comment Cancel Reply


    Related Posts

    ವಿಶೇಷ ಲೇಖನ – ಶಿಕ್ಷಣ ತಜ್ಞ, ಸಂಸ್ಕೃತಿ ಚಿಂತಕ ಡಾ. ಜಿ. ರಾಮಕೃಷ್ಣ  

    June 17, 2025

    ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ (ರಿ.) ಕಾಸರಗೋಡು ಇದರ ಗೌರವ ಸಲಹೆಗಾರರಾಗಿ ದೀಪಕ್ ಪೆರ್ಮುದೆ ಆಯ್ಕೆ

    June 17, 2025

    ಬೆಂಗಳೂರು ದೂರದರ್ಶನ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದ ‘ಕೆ.ಎಂ.ಎ. ದಫ್ ಮುಟ್ಟ್’ ತಂಡ ಹಾಗೂ ಪ್ರದರ್ಶನ

    June 17, 2025

    ಡಾ. ಸದಾನಂದ ಪೆರ್ಲಗೆ ನಾಡೋಜ ಡಾ.ಕಯ್ಯಾರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

    June 17, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.