Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ‘ಅಣ್ಣನ ನೆನಪು’ ಸಾಕ್ಷ್ಯ ನಾಟಕ | ಮೇ 19

    May 14, 2025

    ಪುಸ್ತಕ ವಿಮರ್ಶೆ | ‘ನೀಲು ಮಾತು ಮೀರಿದ ಮಿಂಚು’ ಲಂಕೇಶ್ ಕಾವ್ಯದ ರೂಹುಗಳು

    May 14, 2025

    ಬೆಂಗಳೂರಿನ ವಿವಿಧೆಡೆ ಹಾಗೂ ಮೈಸೂರಿನಲ್ಲಿ ಯಕ್ಷಗಾನ ಪ್ರದರ್ಶನ | ಮೇ 17ರಿಂದ 22

    May 14, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ‘ಗಡಿನಾಡ ಸಾಹಿತ್ಯ ದಿಂಡಿಮ-2024’ ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆ, ಉಪನ್ಯಾಸ ಮತ್ತು ಕವಿಗೋಷ್ಠಿ
    Book Release

    ‘ಗಡಿನಾಡ ಸಾಹಿತ್ಯ ದಿಂಡಿಮ-2024’ ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆ, ಉಪನ್ಯಾಸ ಮತ್ತು ಕವಿಗೋಷ್ಠಿ

    March 22, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯ ಮಂಗಳೂರು ಇಲ್ಲಿನ ಕನ್ನಡ ಸಂಘ ಹಾಗೂ ಕನ್ನಡ ವಿಭಾಗದ ಸಹಭಾಗಿತ್ವದಲ್ಲಿ ‘ಗಡಿನಾಡ ಸಾಹಿತ್ಯ ದಿಂಡಿಮ-2024’ ಕಾರ್ಯಕ್ರಮವು ದಿನಾಂಕ 14-03-2024ರಂದು ಸಾನಿಧ್ಯ ಸಭಾಂಗಣದಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ ಲಕ್ಷ್ಮೀ ವಿ. ಭಟ್ ಮಂಜೇಶ್ವರ ರಚಿತ ‘ಅಷ್ಟ ದ್ರವ್ಯ’ ಹಾಗೂ ‘ಝೇಂಕಾರ’ ಕೃತಿಗಳು ಲೋಕಾರ್ಪಣೆಗೊಂಡವು.

    ಡಾ. ಧನಂಜಯ ಕುಂಬ್ಳೆ ‘ಅಷ್ಟ ದ್ರವ್ಯ’ ಕೃತಿಯನ್ನು ಲೋಕಾರ್ಪಣೆಗೈದು ಕೃತಿ ಅವಲೋಕನ ಮಾಡುತ್ತಾ, “ಈ ಕೃತಿಯು ಹೊಸ ಬರಹಗಾರರಿಗೆ ಮಾತ್ರವಲ್ಲದೆ ವಿಶ್ವವಿದ್ಯಾಲಯದ ಸಾಹಿತ್ಯಾಭ್ಯಾಸಿಗಳಿಗೆ ಒಂದು ಉತ್ತಮ ಕೈಪಿಡಿಯಾಗಿದೆ. ಈ ಕೃತಿಯೇ ಒಂದು ಪಠ್ಯಪುಸ್ತಕವಿದ್ದಂತೆ” ಎಂದು ನುಡಿದರು. ಗಡಿನಾಡ ಕನ್ನಡ ಸಾಹಿತ್ಯ ಪರಿಷತ್ ಕೇರಳ ಘಟಕದ ಅಧ್ಯಕ್ಷರಾದ ಡಾಕ್ಟರ್ ಜಯಪ್ರಕಾಶ್ ನಾರಾಯಣ ತೊಟ್ಟಿತ್ತೋಡಿಯವರು ‘ಝೇಂಕಾರ’ ಕೃತಿಯನ್ನು ಲೋಕಾರ್ಪಣೆ ಮಾಡಿ, “ಸಾಹಿತ್ಯ ಕ್ಷೇತ್ರಕ್ಕೆ ಇದೊಂದು ಅತ್ಯಮೂಲ್ಯ ಕೊಡುಗೆ” ಎಂದು ಬಣ್ಣಿಸಿದರು. ಡಾ. ಮೀನಾಕ್ಷಿ ರಾಮಚಂದ್ರ ಇವರು ‘ಝೇಂಕಾರ’ ಕೃತಿ ಅವಲೋಕನ ಮಾಡಿ, “ತ್ರಿಪದಿಗಳು ಮಹಿಳೆಯರ ಗಾಯತ್ರಿ ಎಂಬುದು ಮತ್ತೊಮ್ಮೆ ಲಕ್ಷ್ಮೀಯ ಮೂಲಕ ಸಾಬೀತಾಯಿತು. ಕನ್ನಡ ನೆಲದ ಜನಮಾನಸದಲ್ಲಿ ಹಾಸು ಹೊಕ್ಕಾಗಿ ಬೆಳೆದಿರುವ ಸಾಹಿತ್ಯ ತ್ರಿಪದಿಗಳು ಈ ಕೃತಿಯಲ್ಲಿ ಹಲವು ವೈವಿಧ್ಯ ವಿಚಾರಗಳ ಅನಾವರಣವನ್ನು ಕಾಣಬಹುದು. ಕಾಸರಗೋಡಿನ ಕನ್ನಡಿಗರಲ್ಲಿ ಕನ್ನಡದ ರಕ್ತ ಸ್ವಲ್ಪ ಬಿರುಸಾಗಿಯೇ ಹರಿಯುತ್ತಿದೆ” ಎಂದು ನುಡಿದರು.

    ಬಳಿಕ ಶಿಕ್ಷಣ ತಜ್ಞ ಶ್ರೀ ವಿ.ಬಿ ಕುಳಮರ್ವ ಇವರು ‘ಛಂದೋಬದ್ಧ ಕವಿತೆಗಳು : ಆಧುನಿಕ ಪ್ರಯೋಗ’ ಈ ವಿಷಯದ ಕುರಿತು ಉಪನ್ಯಾಸ ನೀಡಿದರು. ಕೃತಿಯಿಂದ ಆಯ್ದ ಕೆಲವು ಹಾಡುಗಳನ್ನು ಶ್ರೀಮತಿ ಅನುಷಾ ಕೊಲ್ಲರಮಜಲು, ಶ್ರೀಮತಿ ಪ್ರಸನ್ನಾ ಸಿ.ಎಸ್. ಭಟ್ ಕಾಕುಂಜೆ ಹಾಗೂ ದಿವಾಕರ್ ಬಲ್ಲಾಳ ಇವರು ಸುಮಧುರವಾಗಿ ಹಾಡಿದರು. ಸಭಾಧ್ಯಕ್ಷರಾದ ಕಥಾಬಿಂದು ಪ್ರಕಾಶನದ ಶ್ರೀ ಪಿ.ವಿ. ಪ್ರದೀಪ್ ಕುಮಾರ್ ಅವರು ಶುಭಾಶಂಸನೆ ಗೈದರು.

    ಬಳಿಕ ನಡೆದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಶ್ರೀಯುತ ರಾಧಾಕೃಷ್ಣ ಉಳಿಯತಡ್ಕ (ಗಡಿನಾಡ ಚೇತನ ಪ್ರಶಸ್ತಿ ಪುರಸ್ಕೃತರು) ಇವರು ವಹಿಸಿದರು. ಕವಿಗೋಷ್ಠಿಯಲ್ಲಿ ಅನೇಕ ಪ್ರಬುದ್ಧ ಕವಿಗಳು ಭಾಗವಹಿಸಿದ್ದರು. ಡಾಕ್ಟರ್ ಸುರೇಶ ನೆಗಳಗುಳಿ, ಡಾ. ಕೊಳ್ಚಪ್ಪೆ ಗೋವಿಂದ ಭಟ್, ಸತ್ಯವತಿ ಭಟ್ ಕೊಳಚಪ್ಪು, ಗುಣಾಜೆ ರಾಮಚಂದ್ರ ಭಟ್ಟ, ಯೋಗೀಶ್ ರಾವ್ ಚಿಗುರುಪಾದೆ, ಡಾ. ದಿನೇಶ್ ನಾಯಕ್, ಎಡ್ವರ್ಡ್ ಲೋಬೋ, ಪ್ರಮೀಳಾ ಚುಳ್ಳಿಕಾನ, ಪ್ರವೀಣ್ ಅಮ್ಮೆಂಬಳ, ವೆಂಕಟ ಭಟ್ ಎಡನೀರು, ಶ್ರೀ ಗೋಪಾಲಕೃಷ್ಣ ಶಾಸ್ತ್ರಿ, ಸಾವಿತ್ರಿ ರಮೇಶ ಭಟ್ ಮೊದಲಾದವರು ಕವನ ವಾಚನ ಮಾಡಿದರು. ಅನೂಷ ಕೊಲ್ಲರಮಜಲು ಪ್ರಾರ್ಥಿಸಿ, ಲಕ್ಷ್ಮೀ ವಿ. ಭಟ್ ಸ್ವಾಗತಿಸಿ, ಶ್ರೀ ದಿವಾಕರ ಬಲ್ಲಾಳರು ನಿರೂಪಣೆಗೈದರು. ಸಂತ ಅಲೋಶಿಯಸ್ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಮಹಾಲಿಂಗ ಭಟ್ ಕೆ. ಎಲ್ಲಾ ಕಾರ್ಯಕ್ರಮದ ನೇತೃತ್ವವನ್ನು ವಹಿಸಿದ್ದರು.

    Share. Facebook Twitter Pinterest LinkedIn Tumblr WhatsApp Email
    Previous Articleಕಾಂತಾವರ ಕನ್ನಡ ಸಂಘದಿಂದ ಮೂರು ದತ್ತಿ ಪ್ರಶಸ್ತಿಗಳ ಘೋಷಣೆ
    Next Article ‘ಮಲಬಾರ್ ವಿಶ್ವರಂಗ ಪುರಸ್ಕಾರ 2024’ | ಮಾರ್ಚ್ 26
    roovari

    Add Comment Cancel Reply


    Related Posts

    ಪುಸ್ತಕ ವಿಮರ್ಶೆ | ‘ನೀಲು ಮಾತು ಮೀರಿದ ಮಿಂಚು’ ಲಂಕೇಶ್ ಕಾವ್ಯದ ರೂಹುಗಳು

    May 14, 2025

    ಯಕ್ಷಧ್ರುವ ಪಟ್ಲ ಫೌಂಡೇಶನ್ ಯೂರೋಪ್ ಘಟಕದಿಂದ ‘ಭಾರತ್ ಕಲಾ ವೈಭವ’ ಸಾಂಸ್ಕೃತಿಕ ಉತ್ಸವ

    May 14, 2025

    ಸಂವಾಹಿನಿ ಹಳೆ ವಿದ್ಯಾರ್ಥಿ ಸಂಘದ ಅಡಿಯಲ್ಲಿ ‘ಯಾದೇ’ ಸಂಭ್ರಮಾಚರಣೆ

    May 13, 2025

    ಸುರತ್ಕಲ್ಲಿನ ಅನುಪಲ್ಲವಿಯಲ್ಲಿ ‘ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ’ | ಮೇ 17

    May 13, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.