Subscribe to Updates

    Get the latest creative news from FooBar about art, design and business.

    What's Hot

    ಯಕ್ಷ ರಂಗಾಯಣದಲ್ಲಿ ‘ನಾಟಕದ ಮಾತು ಕತೆ’ ಕಥನ-6 | ಅಕ್ಟೋಬರ್ 25

    October 24, 2025

    ನಟಿ ಉಮಾಶ್ರೀ ಗೆ ‘ಶ್ರೀ ಶಿವಕುಮಾರ ಪ್ರಶಸ್ತಿ’

    October 24, 2025

    ಉಡುಪಿಯಲ್ಲಿ ‘ಛತ್ರಪತಿ ಶಿವಾಜಿ’ | ಅಕ್ಟೋಬರ್ 25

    October 24, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕರ್ನಾಟಕ ಗಮಕ ಕಲಾ ಪರಿಷತ್ತಿನ ಪುತ್ತೂರು ಘಟಕದ ವತಿಯಿಂದ ‘ಗಮಕ ವಾಚನ-ವ್ಯಾಖ್ಯಾನ’ ಕಾರ್ಯಕ್ರಮ
    Literature

    ಕರ್ನಾಟಕ ಗಮಕ ಕಲಾ ಪರಿಷತ್ತಿನ ಪುತ್ತೂರು ಘಟಕದ ವತಿಯಿಂದ ‘ಗಮಕ ವಾಚನ-ವ್ಯಾಖ್ಯಾನ’ ಕಾರ್ಯಕ್ರಮ

    August 23, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಪುತ್ತೂರು : ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲೆ, ಪುತ್ತೂರು ತಾಲೂಕು ಘಟಕದ ವತಿಯಿಂದ ದಿನಾಂಕ 22 ಆಗಸ್ಟ್ 2024ರಂದು ‘ಗಮಕ ವಾಚನ- ವ್ಯಾಖ್ಯಾನ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಶ್ರೀಯುತ ಭಾಸ್ಕರ ಬಾರ್ಯರ ಸ್ವಗೃಹ, ಪುತ್ತೂರಿನ ಶಿವಪೇಟೆಯ ‘ಅಗಸ್ತ್ಯ’ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಮಾರವ್ಯಾಸ ಭಾರತ ಇದರಿಂದ ‘ಕರ್ಣ – ಕುಂತಿ ಸಂವಾದ’ ಎಂಬ ಕಥಾ ಭಾಗವನ್ನು ಆಯ್ದುಕೊಳ್ಳಲಾಯಿತು.

    ಅಂಬಿಕಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಶ್ರೀಯುತ ಸತೀಶ್ ಇರ್ದೆ ಇವರು ಗಮಕ ವಾಚನಗೈದರು. ನಿವೃತ್ತ ಅಧ್ಯಾಪಕರಾದ ಶ್ರೀಯುತ ಭಾಸ್ಕರ ಶೆಟ್ಟಿ ಸಾಲ್ಮರ ಇವರು ಗಮಕ ವ್ಯಾಖ್ಯಾನಗೈದರು. ಅಚ್ಚುಕಟ್ಟಾಗಿ ನಡೆದ ಕಾರ್ಯಕ್ರಮವು ನೆರೆದ ಕಲಾಪ್ರಿಯರ ಮನಸ್ಸನ್ನು ಗೆದ್ದಿತು. ಗೌರವಾಧ್ಯಕ್ಷರಾದ ಭಾಸ್ಕರ ಬಾರ್ಯರು ಸರ್ವರನ್ನು ಸ್ವಾಗತಿಸಿ, ಅಧ್ಯಕ್ಷರಾದ ನಿವೃತ್ತ ಪ್ರಾಂಶುಪಾಲ ಪ್ರೊ. ವೇದವ್ಯಾಸ ರಾಮಕುಂಜ ಧನ್ಯವಾದ ಸಮರ್ಪಿಸಿದರು. ಕಿರುಕಾಣಿಕೆ ನೀಡಿ, ಶಾಲು ಹೊದಿಸಿ ಕಲಾವಿದರನ್ನು ಗೌರವಿಸಲಾಯಿತು. ಕಾರ್ಯದರ್ಶಿ ಶಂಕರಿ ಶರ್ಮ, ಸದಸ್ಯರಾದ ಪ್ರೇಮಾ ನೂರಿತ್ತಾಯ, ಮಹಾಲಿಂಗ ಭಟ್, ಜಯಂತಿ ಹೆಬ್ಬಾರ್, ಜಯಲಕ್ಷ್ಮಿ ವಿ. ಭಟ್, ಭಾರತಿ ರೈ ಅರಿಯಡ್ಕ ಹಾಗೂ ಮನೆ ಮಂದಿಯ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮವು ಸಂಪನ್ನಗೊಂಡಿತು.

    Share. Facebook Twitter Pinterest LinkedIn Tumblr WhatsApp Email
    Previous Article‘ಸಾಲುದೀಪ’ ಅಭಿನಂದನಾ ನುಡಿ ಬೆಳಕು ಕಾರ್ಯಕ್ರಮ | ಆಗಸ್ಟ್ 24
    Next Article ಜ್ಞಾನಸೌಧ ಸಭಾಂಗಣದಲ್ಲಿ ‘ಶ್ರಾವಣ ಸಮ್ಮೇಳನ 2024’ | ಆಗಸ್ಟ್ 25
    roovari

    Comments are closed.

    Related Posts

    ಮಂಗಳೂರು ತುಳು ಭವನದಲ್ಲಿ ಶ್ರದ್ಧಾಂಜಲಿ ಸಭೆ ಹಾಗೂ ನುಡಿ ನಮನ ಸಲ್ಲಿಕೆ | ಅಕ್ಟೋಬರ್ 25

    October 24, 2025

    ಸ್ವರಚಿನ್ನಾರಿಯಿಂದ ಪ್ರತಿಭಾನ್ವಿತ ಕರೋಕೆ ಗಾಯಕರ ಸಮ್ಮಿಲನ ‘ಅಂತರ್ಧ್ವನಿ -10’ | ಅಕ್ಟೋಬರ್ 26

    October 24, 2025

    ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣ ಸಭಾಂಗಣದಲ್ಲಿ ‘ಭರತಮುನಿ ಜಯಂತ್ಯುತ್ಸವ’ | ಅಕ್ಟೋಬರ್ 26

    October 24, 2025

    ಕೋಟದಲ್ಲಿ ಕಾರಂತ ಪುರಸ್ಕಾರ ಪ್ರದಾನ ಸಮಾರಂಭ

    October 24, 2025

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.