Subscribe to Updates

    Get the latest creative news from FooBar about art, design and business.

    What's Hot

    ಗಮಕಕಲಾ ಪ್ರತಿಷ್ಠಾನದ ವಾರ್ಷಿಕ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭ | ಜೂನ್ 07

    June 4, 2025

    ಶುಕೀ ರಾವ್ ಹಾಗೂ ಶಿವಾನಿ ಕೇಂದ್ರ ಸರಕಾರದ ಶಿಷ್ಯವೇತನಕ್ಕೆ ಆಯ್ಕೆ

    June 3, 2025

    ವಿಶೇಷ ಲೇಖನ – ಗಾಯಕ ರತ್ನ ಡಾ. ಬಿ. ದೇವೇಂದ್ರಪ್ಪ

    June 3, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಯಶಸ್ವಿ ಕಲಾವೃಂದದಿಂದ ಗಾನ ಗಾರುಡಿಗ ದಿ. ಕಾಳಿಂಗ ನಾವಡರಿಗೆ ಗಾನ ನಮನ
    Music

    ಯಶಸ್ವಿ ಕಲಾವೃಂದದಿಂದ ಗಾನ ಗಾರುಡಿಗ ದಿ. ಕಾಳಿಂಗ ನಾವಡರಿಗೆ ಗಾನ ನಮನ

    June 2, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ತೆಕ್ಕಟ್ಟೆ : ಯಶಸ್ವೀ ಕಲಾವೃಂದ (ರಿ.) ಕೊಮೆ ತೆಕ್ಕಟ್ಟೆ ಇದರ ಆಶ್ರಯದಲ್ಲಿ ಗಂಪು ಪೈ ಸಾಲಿಗ್ರಾಮ ಸಹಕಾರದಲ್ಲಿ ಕಾಳಿಂಗ ನಾವಡರ ಸಂಸ್ಮರಣೆಯಾಗಿ ‘ಯಕ್ಷ ಗಾನ ನಮನ’ ಕಾರ್ಯಕ್ರಮವು ತೆಕ್ಕಟ್ಟೆ ಹಯಗ್ರೀವದಲ್ಲಿ ದಿನಾಂಕ 31 ಮೇ 2025ರಂದು ನಡೆಯಿತು.

    ಈ ಕಾರ್ಯಕ್ರಮದಲ್ಲಿ ಸಂಸ್ಮರಣಾ ನುಡಿಗಳನ್ನಾಡಿದ ಯಕ್ಷಗುರು ಲಂಬೋದರ ಹೆಗಡೆ ನಿಟ್ಟೂರು “ಕಾಳಿಂಗ ನಾವಡರ ಹೆಸರೇ ಯಕ್ಷ ಪ್ರಪಂಚದಲ್ಲಿ ರೋಮಾಂಚನ. ಸರಿಸಾಟಿಯಿಲ್ಲದ ಕಂಠ ಸಿರಿಯನ್ನು ಹೊಂದಿದ ಕಾಳಿಂಗ ನಾವಡರು ತನ್ನ ಎಳವೆಯಲ್ಲಿಯೇ ಅದ್ಭುತ ಸಾಧನೆಗೈದು ಇಹಲೋಕ ತ್ಯಜಿಸಿ ಅಜರಾಮರರಾದರು. ಗಾನಗಾರುಡಿಗರಾಗಿ ಯಕ್ಷ ಮನಗಳಲ್ಲಿ ಚಿರಸ್ಥಾಯಿಯಾಗಿ ಉಳಿದರು” ಎಂದು ಹೇಳಿದರು.

    ಕೈಲಾಸ ಕಲಾಕ್ಷೇತ್ರದ ಅಧ್ಯಕ್ಷ ಹೆರಿಯ ಮಾಸ್ಟರ್ ಮಾತನ್ನಾಡಿ, ಲಕ್ಷೋಪಲಕ್ಷ ಕಲಾಭಿಮಾನಿಗಳ ಮನ ತಟ್ಟಿದ ಕಾಳಿಂಗ ನಾವಡರು ಯಕ್ಷ ಪರಂಪರೆಯಲ್ಲಿ ಇನ್ನಿಲ್ಲದ ಸಾಧನೆಗೈದವರು. ಇವರ ಸ್ಮರಣೆಯಲ್ಲಿಯೇ ಅನುದಿನವೂ ಯಕ್ಷಾಭಿಮಾನಿಗಳು ಇರುವುದನ್ನು ಅಲ್ಲಗಳೆಯುವಂತಿಲ್ಲ” ಎಂದರು. ರಂಗ ನಿರ್ದೇಶಕ ರೋಹಿತ್ ಎಸ್. ಬೈಕಾಡಿ, ಉದ್ಯಮಿ ಗೋಪಾಲ ಪೂಜಾರಿ ಬಾಳೆಹಿತ್ಲು ಉಪಸ್ಥಿತರಿದ್ದರು.

    ಯುವ ಭಾಗವತರಾದ ರಾಜೇಶ್ ಕೋಡಿ, ಹರೀಶ್ ಕಾವಡಿ, ವಿಶ್ವನಾಥ ಐರೋಡಿ, ಸುಕುಮಾರ ಶೆಟ್ಟಿ, ಲೋಹಿತ್ ಕೊಮೆ, ರಾಹುಲ್ ಕುಂದರ್, ರಾಹುಲ್ ಅಮೀನ್, ಪವನ್ ಆಚಾರ್ ಇವರುಗಳು ‘ಯಕ್ಷ ಗಾನ ನಮನ’ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

    baikady Music roovari yakshagana
    Share. Facebook Twitter Pinterest LinkedIn Tumblr WhatsApp Email
    Previous Articleಮಡಿಕೇರಿಯಲ್ಲಿ ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನೋತ್ಸವ ಮತ್ತು ದತ್ತಿ ಪ್ರಶಸ್ತಿ ಪ್ರದಾನ | ಜೂನ್ 04
    Next Article ಖಿದ್ಮಾ ಫೌಂಡೇಶನ್ ಇದರ ರಾಜ್ಯ ಮಟ್ಟದ ಲೇಖನ ಸ್ಪರ್ಧೆಯ ಫಲಿತಾಂಶ ಪ್ರಕಟ
    roovari

    Add Comment Cancel Reply


    Related Posts

    ಗಮಕಕಲಾ ಪ್ರತಿಷ್ಠಾನದ ವಾರ್ಷಿಕ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭ | ಜೂನ್ 07

    June 4, 2025

    ಶುಕೀ ರಾವ್ ಹಾಗೂ ಶಿವಾನಿ ಕೇಂದ್ರ ಸರಕಾರದ ಶಿಷ್ಯವೇತನಕ್ಕೆ ಆಯ್ಕೆ

    June 3, 2025

    ಕೊಡಗು ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ಪ್ರಕಟ

    June 3, 2025

    ಕೊಂಡೆವೂರಿನಲ್ಲಿ ತುಲುವೆರೆ ಕಲ ಸಂಘಟನೆಯ ಎರಡನೇ ‘ವರ್ಸೋಚ್ಚಯ’

    June 3, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.