Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ‘ಅಣ್ಣನ ನೆನಪು’ ಸಾಕ್ಷ್ಯ ನಾಟಕ | ಮೇ 19

    May 14, 2025

    ಪುಸ್ತಕ ವಿಮರ್ಶೆ | ‘ನೀಲು ಮಾತು ಮೀರಿದ ಮಿಂಚು’ ಲಂಕೇಶ್ ಕಾವ್ಯದ ರೂಹುಗಳು

    May 14, 2025

    ಬೆಂಗಳೂರಿನ ವಿವಿಧೆಡೆ ಹಾಗೂ ಮೈಸೂರಿನಲ್ಲಿ ಯಕ್ಷಗಾನ ಪ್ರದರ್ಶನ | ಮೇ 17ರಿಂದ 22

    May 14, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ‘ಗಂಗಾಧರ ಬೆಳ್ಳಾರೆ ಮಾತಿನ ಬೆಳಕು’ ಕಾರ್ಯಾಗಾರ ಹಾಗೂ ಲೇಖನ ಸ್ಪರ್ಧೆ | ಜುಲೈ 21
    Competition

    ‘ಗಂಗಾಧರ ಬೆಳ್ಳಾರೆ ಮಾತಿನ ಬೆಳಕು’ ಕಾರ್ಯಾಗಾರ ಹಾಗೂ ಲೇಖನ ಸ್ಪರ್ಧೆ | ಜುಲೈ 21

    June 26, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಪುತ್ತೂರು : ವರ್ತನಾ ವಿಶ್ಲೇಷಕ, ಆಪ್ತ ಸಲಹೆಗಾರ, ಸಾಹಿತಿಗಳಾದ ದಿವಂಗತ ಗಂಗಾಧರ ಬೆಳ್ಳಾರೆ ಅವರನ್ನು ನೆನಪಿಸುವ ಸಲುವಾಗಿ ದಿನಾಂಕ 21-07-2024ರ ಆದಿತ್ಯವಾರದಂದು ನಾಡಿನ ಖ್ಯಾತ ವರ್ತನಾ ವಿಶ್ಲೇಷಕರು, ಆಪ್ತ ಸಲಹೆಗಾರರು, ಚಿಂತಕರಿಂದ ‘ಗಂಗಾಧರ ಬೆಳ್ಳಾರೆ ಮಾತಿನ ಬೆಳಕು’ ಎಂಬ ಒಂದು ದಿನದ ಕಾರ್ಯಾಗಾರವನ್ನು ಪುತ್ತೂರಿನಲ್ಲಿ ಹಮ್ಮಿಕೊಳ್ಳಲಾಗಿದೆ.

    ಈ ಒಂದು ದಿನದ ಕಾರ್ಯಾಗಾರದಲ್ಲಿ ಗಂಗಾಧರ ಬೆಳ್ಳಾರೆ ಅವರ ಮಾತಿನ ಹಾಗೂ ಬರಹದ ಅಭಿಮಾನಿಗಳು, ಅವರ ಶಿಷ್ಯ ವರ್ಗ, ಅವರಿಂದ ಉಪಕೃತರಾದವರು ಭಾಗವಹಿಸಬಹುದಾಗಿದೆ. ಪ್ರವೇಶ ಉಚಿತ, ನೊಂದಣಿ ಖಡ್ಡಾಯವಾಗಿದೆ. ಕಾರ್ಯಾಗಾರದಲ್ಲಿ ಭಾಗವಹಿಸಲಿಚ್ಚಿಸುವವರು ತಮ್ಮ ಹೆಸರು ಮತ್ತು ವಿಳಾಸವನ್ನು 15-07-2024 ಮೊದಲಾಗಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಇವರ ದೂರವಾಣಿ ಸಂಖ್ಯೆ 9844401295ಗೆ ವಾಟ್ಸಪ್ ಮೂಲಕ ಕಳುಹಿಸತಕ್ಕದ್ದು.

    ಈ ಕಾರ್ಯಾಗಾರವನ್ನು ಅರ್ಥಪೂರ್ಣವನ್ನಾಗಿಸುವ ನಿಟ್ಟಿನಲ್ಲಿ ‘ನನ್ನ ಜೀವನದಲ್ಲಿ ಗಂಗಾಧರ ಬೆಳ್ಳಾರೆ ಮಾತಿನ ಪರಿಣಾಮ’ ಎಂಬ ವಿಚಾರದಲ್ಲಿ ಲೇಖನ ಸ್ಪರ್ಧೆ ಏರ್ಪಡಿಸಲಾಗಿದೆ.

    ಸ್ಪರ್ಧಾ ನಿಯಮಗಳು :
    1. ಲೇಖನ 750 ಪದ ಮೀರಬಾರದು.
    2. ಲೇಖನವನ್ನು ಕನ್ನಡದಲ್ಲಿ ಟೈಪ್ ಮಾಡಿ ವಾಟ್ಸಪ್ ಮೂಲಕವೇ ಕಳಿಸತಕ್ಕದ್ದು.
    3. ಲೇಖನದ ವಸ್ತು ವಿಚಾರ ಗಂಗಾಧರ ಬೆಳ್ಳಾರೆಯವರ ವರ್ತನಾ ವಿಶ್ಲೇಷಣಾ ಕಾರ್ಯಾಗಾರದಿಂದ ತಮಗಾದ ಪರಿಣಾಮದ ಕುರಿತು, ಅವರ ಕೃತಿಯನ್ನು ಓದಿ ತಮಗಾಗಿರುವ ಪರಿಣಾಮದ ಕುರಿತು, ಅವರ ಒಡನಾಟದಿಂದ ತಮಗಾಗಿರುವ ಪರಿಣಾಮದ ಕುರಿತು, ಅವರ ವಿಚಾರವನ್ನು ಇತರರಿಂದ ತಿಳಿದು ತಮಗಾದ ಪರಿಣಾಮದ ಕುರಿತು ಬರೆಯಬಹುದಾಗಿದೆ.
    4. ಲೇಖನವು ಗಂಗಾಧರ ಬೆಳ್ಳಾರೆ ಅವರ ವಿಚಾರ ಹೊರತುಪಡಿಸಿ ಅನ್ಯ ಮನೋವೈಜ್ಞಾನಿಕ ಅಥವಾ ವರ್ತನಾ ವಿಶ್ಲೇಷಣಾ ವಿಚಾರಗಳಿಗೆ ಅವಕಾಶ ಇಲ್ಲ.
    5. ಉತ್ತಮ ಲೇಖನಕ್ಕೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಪ್ರೋತ್ಸಾಹಕ ಪುಸ್ತಕ ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು.
    6. ಉತ್ತಮ ಲೇಖನವನ್ನು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಂತರ್ಜಾಲ ತಾಣದಲ್ಲಿ ಪ್ರಕಟಿಸಲಾಗುವುದು.
    7. ಲೇಖನ ತಲುಪಲು ಅಂತಿಮ ದಿನಾಂಕ 15-07-2024.
    8. ಲೇಖನವನ್ನು 9844401295 ಗೆ ವಾಟ್ಸಪ್ಪ್ ಮಾಡಬೇಕು.
    9. ವಿಶ್ವದ ಯಾವುದೇ ಮೂಲೆಯಲ್ಲಿರುವ ಗಂಗಾಧರ ಬೆಳ್ಳಾರೆ ಅವರ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
    10. ಬಹುಮಾನವನ್ನು 21-07-2024ರಂದು ಪುತ್ತೂರಿನಲ್ಲಿ ನಡೆಯುವ ಕಾರ್ಯಾಗಾರದಲ್ಲಿ ನೀಡಿ ಗೌರವಿಸಲಾಗುವುದು.

    ಗಂಗಾಧರ ಬೆಳ್ಳಾರೆ ಅವರ ಮಾತಿನಿಂದ ಮತ್ತು ಬರಹ ಓದಿ ಪ್ರೇರಿತರಾದ, ಮನೋವೈಜ್ಞಾನಿಕ ವಿಚಾರದಿಂದ ಜೀವನದಲ್ಲಿ ಬದಲಾವಣೆ ಕಂಡವರು, ಅವರ ಅಭಿಮಾನಿ ವರ್ಗ ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ.

    Share. Facebook Twitter Pinterest LinkedIn Tumblr WhatsApp Email
    Previous Articleಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟಿನಿಂದ ಉಚಿತ ಯಕ್ಷಗಾನ ತರಬೇತಿ ಕಾರ್ಯಾಗಾರ
    Next Article ಕನ್ನಡ ಭವನ ಗ್ರಂಥಾಲಯದಲ್ಲಿ ವಾಚನ ವಾರಾಚರಣೆ ಸಮಾರೋಪ ಸಮಾರಂಭ
    roovari

    Add Comment Cancel Reply


    Related Posts

    ಪುಸ್ತಕ ವಿಮರ್ಶೆ | ‘ನೀಲು ಮಾತು ಮೀರಿದ ಮಿಂಚು’ ಲಂಕೇಶ್ ಕಾವ್ಯದ ರೂಹುಗಳು

    May 14, 2025

    ಸಂವಾಹಿನಿ ಹಳೆ ವಿದ್ಯಾರ್ಥಿ ಸಂಘದ ಅಡಿಯಲ್ಲಿ ‘ಯಾದೇ’ ಸಂಭ್ರಮಾಚರಣೆ

    May 13, 2025

    ಕೊಡಗು ಪತ್ರಿಕಾ ಭವನದಲ್ಲಿ ದಿ. ಬಿ.ಎಸ್. ಗೋಪಾಲಕೃಷ್ಣರವರ ಸ್ಮರಣಾರ್ಥ ದತ್ತಿನಿಧಿ ಪ್ರಶಸ್ತಿ ಪ್ರದಾನ | ಮೇ 15

    May 13, 2025

    ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ನಲ್ವತ್ತೈದನೇ ಉಪನ್ಯಾಸ

    May 13, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.