Subscribe to Updates

    Get the latest creative news from FooBar about art, design and business.

    What's Hot

    ‘ದಾಸವಾಣಿ’ ಹವಲ್ದಾರ್ ತಂಡದವರಿಂದ ದಾಸರ ಕೃತಿಗಳ ಅಮೋಘ ಗಾಯನ ಕಾರ್ಯಕ್ರಮ | ಜೂನ್ 01

    May 31, 2025

    ನಟನ ರಂಗಶಾಲೆಯಲ್ಲಿ ಮಕ್ಕಳ ‘ಅಭಿನಯ ಮತ್ತು ರಂಗ ತರಬೇತಿ’ | ಜೂನ್ 08

    May 31, 2025

    ಶಿರಸಿಯ ರಂಗಧಾಮದಲ್ಲಿ ಸನ್ಮಾನ, ಪ್ರತಿಭಾ ಪುರಸ್ಕಾರ ಮತ್ತು ಯಕ್ಷಗಾನ ಪ್ರದರ್ಶನ | ಜೂನ್ 01

    May 31, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಸಕಲ ವಲಯದ ಆದ್ಯ ಪ್ರವರ್ತಕರಾಗಿ ಗಂಗಾಧರ ಭಟ್ಟರ ಬದುಕು-ಬರಹ ಸ್ತುತ್ಯರ್ಹ: ಬಿ.ರಾಮಮೂರ್ತಿ-ಗಂಗಾಧರ ಭಟ್ ಸಂಸ್ಮರಣೆಯಲ್ಲಿ ಅಭಿಮತ
    Uncategorized

    ಸಕಲ ವಲಯದ ಆದ್ಯ ಪ್ರವರ್ತಕರಾಗಿ ಗಂಗಾಧರ ಭಟ್ಟರ ಬದುಕು-ಬರಹ ಸ್ತುತ್ಯರ್ಹ: ಬಿ.ರಾಮಮೂರ್ತಿ-ಗಂಗಾಧರ ಭಟ್ ಸಂಸ್ಮರಣೆಯಲ್ಲಿ ಅಭಿಮತ

    October 30, 2024Updated:January 7, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಾಸರಗೋಡು:ನವೋದಯದಿಂದ ನವ್ಯದೆಡೆಗೆ ಹೊರಳಿದ ಕನ್ನಡ ಸಾಹಿತ್ಯ ವಲಯದ ಸಂಧಿ ಕಾಲಘಟ್ಟದಲ್ಲಿ ಕಾಸರಗೋಡಿನ ಸಾಹಿತ್ಯ ವಲಯದಲ್ಲಿ ಪ್ರಧಾನ ಭೂಮಿಕೆಯೊದಗಿಸಿದ ಪ್ರಮುಖರಲ್ಲಿ ದಿ. ಎಂ. ಗಂಗಾಧರ ಭಟ್ಟರು ಮಹತ್ತರ ಪಾತ್ರ ವಹಿಸಿದ್ದರು ಎಂದು ಸಾಹಿತಿ, ರಂಗಕರ್ಮಿ ಬಿ. ರಾಮಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.

    ಸಕಲ ವಲಯದ ಆದ್ಯ ಪ್ರವರ್ತಕರಾಗಿ ಗಂಗಾಧರ ಭಟ್ಟರ ಬದುಕು-ಬರಹ ಸ್ತುತ್ಯರ್ಹ: ಬಿ.ರಾಮಮೂರ್ತಿ-ಗಂಗಾಧರ ಭಟ್ ಸಂಸ್ಮರಣೆಯಲ್ಲಿ ಅಭಿಮತ
    ಸಾಮಾಜಿಕ, ಸಾಂಸ್ಕಂತಿಕ ಸಂಘಟನೆಯಾದ ರಂಗಚಿನ್ನಾರಿ ಕಾಸರಗೋಡು ನೇತೃತ್ವದಲ್ಲಿ ದಿನಾಂಕ 28 ಅಕ್ಟೋಬರ್ 2024ರ ಸೋಮವಾರ ಅಪರಾಹ್ನ ಕಾಸರಗೋಡು ಕರಂದಕ್ಕಾಡಿನ ಪದ್ಮಗಿರಿ ಕಲಾ ಕುಟೀರದಲ್ಲಿ ನಡೆದ ಕವಿ, ಕನ್ನಡ ಹೋರಾಟಗಾರ, ಪತ್ರಕರ್ತ, ಅಧ್ಯಾಪಕ ದಿ. ಎಂ. ಗಂಗಾಧರ ಭಟ್ ಅವರ 29ನೇ ಸಂಸ್ಮರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.


    ಸಕಲ ಕಲಾ ಸಾಧಕರಾಗಿ ಶತಾಯುಷ್ಯದಲ್ಲಿ ಮಾಡಬಹುದಾದ ಸಾಧನೆಗಳನ್ನು ಅಲ್ಪ ಅವಧಿಯಲ್ಲೇ ನಿರ್ವಹಿಸಿ ಅಕಾಲದಲ್ಲಿ ಅಗಲಿದ ಗಂಗಾಧರ ಭಟ್ಟರು ಕಾಸರಗೋಡಿನ ಕನ್ನಡ ಚಳವಳಿಯ 1972ರ ಕಾಲಘಟ್ಟದ ಹೊಸ ಹೊರಳುವಿಕೆಯಲ್ಲಿ ನೇತೃತ್ವ ವಹಿಸಿದ್ದವರು. ಇಲ್ಲಿಯ ಸಾಹಿತ್ಯ, ಸಾಂಸ್ಕøತಿಕ, ಭಾಚಾ ಚಳವಳಿಯ ಆದ್ಯ ಪ್ರವರ್ತಕರಲ್ಲೂ ಒಬ್ಬರಾಗಿ ನೆನಪುಗಳನ್ನು ಬಿಟ್ಟುಹೋದ ಮಹಾನ್ ಸಾಧಕ ಎಂದವರು ಬಣ್ಣಿಸಿದರು.

    ರಂಗಚಿನ್ನಾರಿಯ ಸಂಚಾಲಕ ಕಾಸರಗೋಡು ಚಿನ್ನ ಮಾತನಾಡಿ “ಕಾಸರಗೋಡಿನಲ್ಲಿ ಅದೆಷ್ಟೋ ಮಹನೀಯರು ಕನ್ನಡ ನಾ  ಡು, ನುಡಿ ಹಾಗೂ ಸಂಸ್ಕೃತಿಗಾಗಿ ಗೊಡುಗೆ ನೀಡಿದ್ದಾರೆ. ಅವರೆಲ್ಲರನ್ನು ನೆನಪುಮಾಡಿ ಮುಂದಿನ ಜನಾಂಗಕ್ಕೆ ಪರಿಚಯಿಸಿಕೊಡುವುದು ಕೂಡಾ ನಮ್ಮೆಲ್ಲರ ಕರ್ತವ್ಯವಾಗಬೇಕು.” ಎಂದರು.


    ಗಂಗಾಧರ ಭಟ್ಟರ ಗರಡಿಯಲ್ಲಿ ಪಳಗಿದವರಲ್ಲೊಬ್ಬರಾದ ನ್ಯಾಯವಾದಿ. ಎ.ಬಾಲಕೃಷ್ಣ ನಾಯರ್ ಅವರು ದೀಪ ಬೆಳಗಿಸಿ, ಗಂಗಾಧರ ಭಟ್ಟರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿ, ಸಾಹಿತ್ಯ, ಸಂಘಟನೆಗಳ ಹೊರತಾಗಿ ಅಪ್ರತಿಮ ಆಂಗ್ಲ ಶಿಕ್ಷಕರಾಗಿ ಭಟ್ಟರ ಫ್ರೌಢಿಮೆ ಅಗಾಧವಾದುದಾಗಿತ್ತು. ವಿಶ್ವವಿದ್ಯಾನಿಲಯಗಳಲ್ಲಿ ವ್ಯಾಪಕವಾಗಿ ಬೆಳೆಯಬಹುದಾಗಿದ್ದರೂ ನಾಡು-ನುಡಿಯ ಸೆಳೆತದಿಂದ ಅವರಲ್ಲೇ ಉಳಿದು ಇಂದಿಗೂ ನಮ್ಮೊಳಗೆ ಬೆಳಗುವ ಅತ್ಯುಚ್ಛ ನೆನಪುಗಳನ್ನು ಬಿಟ್ಟುಹೋಗಿದ್ದಾರೆ ಎಂದು ನೆನಪಿಸಿದರು.

    ಕವಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಇವರು, ಗಂಗಾಧರ ಭಟ್ಟರ ಬಗೆಗಿನ  ನೆನಪುಗಳಿಂದ ಬರೆದ ಸ್ವರರಚಿತ ಕವನ ವಾಚಿಸಿದರು. ಟಿ.ಶಂಕರನಾರಾಯಣ ಭಟ್, ಸವಿತಾ ಟೀಚರ್, ಜಯನಾರಾಯಣ್ ತಾಯನ್ನೂರು, ಪತ್ರಕರ್ತ ಸುಬ್ಬಣ್ಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ರಂಗಚಿನ್ನಾರಿ ಸಂಚಾಲಕ ಕಾಸರಗೋಡು ಚಿನ್ನಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ರಂಗಚಿನ್ನಾರಿ ನಿರ್ದೇಶಕ ಸತ್ಯನಾರಾಯಣ ಕೆ.ವಂದಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಮಂಗಳೂರಿನ ತುಳು ಭವನದಲ್ಲಿ ಬಂಟ್ವಾಳ ಜಯರಾಮ ಆಚಾರ್ಯರಿಗೆ ಶ್ರದ್ಧಾಂಜಲಿ ಹಾಗೂ ನುಡಿನಮನ
    Next Article ಸಾಧಕರೊಂದಿಗೆ ಸಂಭ್ರಮದಲ್ಲಿ ರಿಂಗಣಿಸಿದ ಕನ್ನಡ ಹಾಡುಗಳು
    roovari

    Add Comment Cancel Reply


    Related Posts

    ಸಂಭ್ರಮದಿಂದ ನಡೆದ ‘ಸಮರ್ಪಣಂ ಕಲೋತ್ಸವ – 2025’

    April 4, 2025

    ಸುಲೋಚನಾ ಪಿ. ಕೆ. ಇವರ ‘ಸತ್ಯದರ್ಶನ’ ಕೃತಿಗೆ ‘ಜಿ. ಪಿ. ರಾಜರತ್ನಂ ಸಂಸ್ಮರಣ ದತ್ತಿ ಪ್ರಶಸ್ತಿ’

    March 22, 2025

    ಜಾಗೃತಿ ಟ್ರಸ್ಟ್ ವತಿಯಿಂದ ‘ಯೋಗಪಥ’ ಕಾದಂಬರಿ ಲೋಕಾರ್ಪಣೆ ಮತ್ತು ಡಾ. ರಾಜಕುಮಾರ್ ಪ್ರಶಸ್ತಿ ಪ್ರದಾನ | ಫೆಬ್ರವರಿ 25

    February 22, 2025

    ಬೆಂಗಳೂರಿನ ಬಿ.ಎಂ.ಶ್ರೀ ಕಲಾಭವನದಲ್ಲಿ ‘ವಾಣಿ ಸ್ಮರಣೆ’ ಒಂದು ಸ್ಮರಣೀಯ ಕಾರ್ಯಕ್ರಮ | ಫೆಬ್ರವರಿ 25

    February 21, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.