Subscribe to Updates

    Get the latest creative news from FooBar about art, design and business.

    What's Hot

    ವಿಶೇಷ ಲೇಖನ – ಚಿಂತನಶೀಲ, ಸ್ತ್ರೀವಾದಿ ಸಾಹಿತಿ ಡಾ. ಎಸ್. ವಿ. ಪ್ರಭಾವತಿ

    July 25, 2025

    ‘ಅಂತರಂಗ ಬಹಿರಂಗ’ ದಿಂದ ಒಂದೇದಿನ 2 ನಾಟಕಗಳ ಪ್ರದರ್ಶನ | ಜುಲೈ 27

    July 25, 2025

    ‘ಕನ್ನಡ ನುಡಿ ರತ್ನ’ ರಾಜ್ಯ ಮಟ್ಟದ ಕವನ ಸಂಕಲನಕ್ಕೆ ಕವನಗಳ ಆಹ್ವಾನ

    July 25, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಬೇಂದ್ರೆ ನೆಲದಲ್ಲಿ ‘ಗಂಗಾವತರಣ ‘
    Article

    ಬೇಂದ್ರೆ ನೆಲದಲ್ಲಿ ‘ಗಂಗಾವತರಣ ‘

    December 30, 2024Updated:January 7, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಧಾರವಾಡ : ಧಾರವಾಡದ ನೆಲದ ಸತ್ವವನ್ನು ಹೀರಿ ಧಾರವಾಡದಲ್ಲಿಯೇ ಹುಟ್ಟಿ ಬೆಳೆದ ವರಕವಿ ಬೇಂದ್ರೆ ಅವರು ಜನಮಾನಸ ಕವಿ, ದಿನನಿತ್ಯದ ಆಡು ಮಾತಿನಲ್ಲಿ ಜೀವನದರ್ಶನದ ಒಳನೋಟಗಳನ್ನು ನೀಡುವ ಸಾವಿರಾರು ಕವಿತೆಗಳನ್ನು ಬರೆದು ಇಂದಿಗೂ ಹಳ್ಳಿಗರ ಮುಗ್ಧ ಮನಸ್ಸು ಹಾಗೂ ಪ್ರಜ್ಞಾವಂತ ನಾಗರಿಕರ ನರ ನಾಡಿಗಳಲ್ಲಿ ಚೈತನ್ಯ ತುಂಬುವಂತೆ ಮಾಡಿದ್ದಾರೆ.

    ‘ಗಂಗಾವತರಣ’ ವರಕವಿ ಬೇಂದ್ರೆಯವರ ಬದುಕು ಬರಹಗಳನ್ನು ಆಧರಿಸಿ ಬರೆದ ನಾಟಕ, ಬೆಂಗಳೂರಿನ ರಂಗ ಸೌರಭ ತಂಡದವರು ಈ ನಾಟಕವನ್ನು ಧಾರವಾಡದ ಸೃಜನಾರಂಗ ಮಂದಿರದಲ್ಲಿ ದಿನಾಂಕ 26 ಡಿಸೆಂಬರ್ 2024ರ ಸಂಜೆ ಹೃದಯಂಗಮವಾಗಿ ಪ್ರಸ್ತುತಪಡಿಸಿದರು. ಬೇಂದ್ರೆ ಅವರ ಬದುಕಿನ ಹಲವು ಪುಟಗಳನ್ನು ತೆರೆಯುತ್ತ, ಅವರ ಉದಾತ್ತ ಜೀವನದ ತಾದಾತ್ಮತೆಯನ್ನು ತೋರುವ ಹಲವು ಹಾಡುಗಳಿಂದ ಹಾಗೂ ನೃತ್ಯ ರೂಪಕಗಳಿಂದ ಜನಮನವನ್ನು ರಂಜಿಸಿದರು.

    ಆಧುನಿಕ ಜೀವನದ ಶುಷ್ಕ ಆಡಂಬರಕ್ಕೆ ಮನಸೋತ ಇಂದಿನ ಪೀಳಿಗೆಯವರ ತೊಳಲಾಟವನ್ನು ಸಮರ್ಥವಾಗಿ ಬಿಂಬಿಸಿ ಬೇಂದ್ರೆಯವರ ಆತ್ಮ ಸಾಕ್ಷಾತ್ಕಾರದ ನೆಲೆಯಲ್ಲಿ ಜೀವನ ದರ್ಶನ ಮೂಡಿಸಿದ ಪರಿ ಅದ್ಭುತವಾಗಿತ್ತು.

    ಲೇಖಕ ಹಾಗೂ ನಿರ್ದೇಶಕರಾದ ಶ್ರೀ ರಾಜೇಂದ್ರ ಕಾರಂತರು ಬೇಂದ್ರೆಯವರ ಆತ್ಮ ರೂಪದಲ್ಲಿ ಸಮರ್ಥ ಅಭಿನಯವನ್ನು ನೀಡಿ ಸೂಕ್ತ ವಾತಾವರಣ ನಿರ್ಮಿಸುವಲ್ಲಿ ಯಶಸ್ವಿಯಾದರು. ಹಿನ್ನೆಲೆ ಸಂಗೀತಗಾರರು ಬೇಂದ್ರೆ ಅವರ ಹಾಡುಗಳನ್ನು ಸೂಕ್ತ ಕ್ರಮದಲ್ಲಿ ಉಪಯೋಗಿಸಿಕೊಂಡು ನೃತ್ಯ ರೂಪಕಗಳ ಮೂಲಕ ಭಾವನಾತ್ಮಕ ವಾತಾವರಣ ನಿರ್ಮಾಣದಲ್ಲಿ ಯಶಸ್ವಿಯಾದರು.

    ಬೇಂದ್ರೆಯವರ ಮೊಮ್ಮಗಳು ಶ್ರೀಮತಿ ಪುನರ್ವಸು ಬೇಂದ್ರೆಯವರು, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಧಾರವಾಡ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಶ್ರೀ ಈರೇಶ ಅಂಚಟಗೇರಿ, ಶ್ರೀ ಕೃಷ್ಣ ಕುಲಕರ್ಣಿ, ಕೆನರಾ ಬ್ಯಾಂಕ್ ಇದರ ನಿವೃತ್ತ ಹಿರಿಯ ಅಧಿಕಾರಿ ಹಾಗೂ ವರಕವಿ ಬೇಂದ್ರೆಯವರ ಏಕವ್ಯಕ್ತಿ ಪ್ರದರ್ಶನದ ಮೂಲಕ ಜನರ ಮನೆ ಮಾತಾಗಿರುವ ಶ್ರೀ ಅನಂತ ದೇಶಪಾಂಡೆ ಪ್ರದರ್ಶನದ ಬಳಿಕ ಗಂಗಾವತರಣ ನಾಟಕದ ಸರ್ವ ಕಲಾವಿದರನ್ನು ಹಾಗೂ ನಿರ್ದೇಶಕರನ್ನು ಅಭಿನಂದಿಸಿ, ಧಾರವಾಡ ಜನತೆಯ ಪರವಾಗಿ ಬೇಂದ್ರೆಯವರ ಹುಟ್ಟು ನೆಲದಲ್ಲಿಯೇ ಉತ್ತಮ ನಾಟಕ ನೀಡಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು. ಸಂಘಟಕ ಶ್ರೀ ಹರ್ಷ ಡಂಬಳ ಇವರು ಈ ನಾಟಕಕ್ಕೆ ಪ್ರಾಯೋಜಕತ್ವ ನೀಡಿದ ಸಂಘ ಸಂಸ್ಥೆಗಳನ್ನು ಹಾಗೂ ವೈಯಕ್ತಿಕ ದಾನಿಗಳನ್ನು ಅಭಿನಂದಿಸಿ ಸ್ಮರಿಸಿದರು.

    ಕಳೆದ ಹಲವಾರು ವರ್ಷಗಳಿಂದ ದೇಶಾದ್ಯಂತ ಪ್ರದರ್ಶನಗೊಂಡ ಈ ಅಪರೂಪದ ನಾಟಕವನ್ನು ಧಾರವಾಡದಲ್ಲಿ ಸಂಘಟಿಸಿದ ‘ಸ್ನೇಹ ಪ್ರತಿಷ್ಠಾನ’, ‘ಜಿ. ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್’ ಹಾಗೂ ‘ಶ್ರೀ ಅಣ್ಣಾಜಿರಾವ್ ಶಿರೂರ್ ರಂಗಮಂದಿರ ಪ್ರತಿಷ್ಠಾನ’ದವರು ಅಭಿನಂದನೀಯರಾಗಿದ್ದಾರೆ.

    Share. Facebook Twitter Pinterest LinkedIn Tumblr WhatsApp Email
    Previous Articleಬೆಂಗಳೂರಿನಲ್ಲಿ ‘ಅಭಿನಯ ಹಾಗೂ ನಾಟಕ ನಿರ್ಮಾಣ ಕಾರ್ಯಾಗಾರ’ | ಜನವರಿ 04
    Next Article ಫರಂಗಿಪೇಟೆಯ ಸೇವಾಂಜಲಿ ಸಭಾಗೃಹದಲ್ಲಿ ‘ವರ್ಣಾಂಜಲಿ 2024’ ಚಿತ್ರಕಲಾ ಸ್ಪರ್ಧೆ
    roovari

    Add Comment Cancel Reply


    Related Posts

    ವಿಶೇಷ ಲೇಖನ – ಚಿಂತನಶೀಲ, ಸ್ತ್ರೀವಾದಿ ಸಾಹಿತಿ ಡಾ. ಎಸ್. ವಿ. ಪ್ರಭಾವತಿ

    July 25, 2025

    ‘ಅಂತರಂಗ ಬಹಿರಂಗ’ ದಿಂದ ಒಂದೇದಿನ 2 ನಾಟಕಗಳ ಪ್ರದರ್ಶನ | ಜುಲೈ 27

    July 25, 2025

    ಕರ್ನಾಟಕ ನಾಟಕ ಆಕಾಡಮಿಯ ಪ್ರಶಸ್ತಿ ಪ್ರಕಟ

    July 25, 2025

    ಕಿನ್ನರ ಮೇಳ ರಂಗಶಾಲೆಯಿಂದ ‘ರಂಗಶಿಕ್ಷಣ ತರಗತಿ’ | ಆಗಸ್ಟ್ 2025– ಮಾರ್ಚ್ 2026

    July 25, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.