ಬೆಂಗಳೂರು : ಸಪ್ತಕ ಬೆಂಗಳೂರು ಇದರ ವತಿಯಿಂದ ‘ಗಾಯನ ಸನ್ಮಾನ ವಂದನ’ ಕಾರ್ಯಕ್ರಮವನ್ನು ದಿನಾಂಕ 21 ಜೂನ್ 2025ರಂದು ಸಂಜೆ 5-00 ಗಂಟೆಗೆ ಬೆಂಗಳೂರಿನ ಸೇವಾ ಸದನದಲ್ಲಿ ಆಯೋಜಿಸಲಾಗಿದೆ.
ಶ್ರೀಮತಿ ಅರ್ಚನ ಶೆಣೈ ಇವರ ಹಾಡುಗಾರಿಕೆಗೆ ಯೋಗೀಶ್ ಭಟ್ ತಬಲಾ ಮತ್ತು ವಿಘ್ನೇಶ್ ಭಾಗವತ್ ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ. ತಬಲಾ ವಾದಕ ಜಿ.ಜಿ. ಹೆಗಡೆ ಇವರನ್ನು ಸನ್ಮಾನಿಸಲಾಗುವುದು. ಡಾ. ಗಜಾನನ್ ಸಭಾಹಿತ್ ಇವರಿಂದ ಕೊಳಲು ಹಾಗೂ ಶ್ರೀಮತಿ ಸುಮಾ ಹೆಗ್ಡೆ ಇವರಿಂದ ಸಂತೂರ್ ದ್ವಂದ್ವ ವಾದನಕ್ಕೆ ಗುರುಮೂರ್ತಿ ವೈದ್ಯ ತಬಲಾ ಸಾಥ್ ನೀಡಲಿದ್ದಾರೆ.