Subscribe to Updates

    Get the latest creative news from FooBar about art, design and business.

    What's Hot

    ಸಮಾರೋಪಗೊಂಡ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ

    May 17, 2025

    ಉಡುಪಿಯ ಬ್ರಾಹ್ಮಿ ಸಭಾಭವನದಲ್ಲಿ ಜಾನಪದ ನೃತ್ಯ ಸ್ಪರ್ಧೆ ‘ನೃತ್ಯ ಸಂಭ್ರಮ-2025’ | ಮೇ 18

    May 17, 2025

    ಡಾ. ಹಂಪನಾ ‘ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರ್ ಪ್ರಶಸ್ತಿ’ಗೆ ಆಯ್ಕೆ

    May 17, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕಲಬುರ್ಗಿಯಲ್ಲಿ ಗಜಲ್ ಸಮ್ಮೇಳನ
    Literature

    ಕಲಬುರ್ಗಿಯಲ್ಲಿ ಗಜಲ್ ಸಮ್ಮೇಳನ

    August 28, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಲಬುರ್ಗಿ : ವಿಶ್ವ ವಿದ್ಯಾಲಯ ಮತ್ತು ಗಜಲ್ ಎಕಾಡೆಮಿಗಳ ಸಹಯೋಗದಲ್ಲಿ ಪ್ರಥಮ ಅಂತರಾಷ್ಟ್ರೀಯ ಗಜಲ್ ಸಮ್ಮೇಳನವು ದಿನಾಂಕ 25 ಆಗಸ್ಟ್ 2024ರಂದು ಕಲಬುರ್ಗಿಯಲ್ಲಿ ನಡೆಯಿತು.
    ಖ್ಯಾತ ಗಜಲ್ ಸಾಹಿತಿ ಪ್ರಭಾವತಿ ದೇಸಾಯಿ ಇವರ ಸರ್ವಾಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ‘ಗಜಲ್ ನಡೆದು ಬಂದ ಹಾದಿ’ ಎಂಬ ಗೋಷ್ಠಿಗೆ ಚಾಲನೆ ನೀಡದ ಮಂಗಳೂರಿನ ಕಣಚೂರು ಹಾಗೂ ಮಂಗಳಾ ಆಸ್ಪತ್ರೆಯ ವೈದ್ಯ ಹಾಗೂ ಬರಹಗಾರ ಡಾ. ಸುರೇಶ ನೆಗಳಗುಳಿಯವರು ಮಾತನಾಡಿ “ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣ ಪರ್ಷ್ಯಾದ ಗಜಲ್ ಇತ್ತಣ ಕರ್ನಾಟಕಕ್ಕೂ…… ಎಂಬ ಹಾಗೆ ಪರ್ಷಿಯಾದಿಂದ ಕರ್ನಾಟಕಕ್ಕೆ ಗಜಲ್ ನಡೆದು ಬಂದ ದಾರಿಯಾಯಿತು. ಹೊಸತನ್ನು ಹೊಸೆವ ಆಸಕ್ತಿ ಗಜಲ್ ಬೆಳವಣಿಗೆಗೆ ಕಾರಣ. ಭಾರತದ ಹೆಸರಾಂತ ಗಜಲ್ಕಾರರ ಬಗೆಗೆ ಹೇಳುತ್ತಾ ಕರ್ನಾಟಕ ಇಂದು ಅತಿ ಹೆಚ್ವು ಗಜಲ್ ಬರಹಗಾರರನ್ನು ಹೊಂದಿದೆ. ಭಾವನೆಗೆ ನಿಯಮಾವಳಿಗಳ ಮೂಲಕ ಕೊಡುವ ಚೌಕಟ್ಟು ಗಜಲ್ ಗೆ ಮೂಲ ಸ್ತಂಭ” ಎಂದು ಹೇಳಿದರು.

    ಖ್ಯಾತ ಕವಿ ಅಲ್ಲಾಗಿರಿ ರಾಜರ ಅಧ್ಯಕ್ಷತೆಯಲ್ಲಿ ನಡೆದ ಈ ಗೋಷ್ಠಿಯಲ್ಲಿ ಶ್ರೀದೇವಿ ಕೆರೆಮನೆ, ಯಾಕೊಳ್ಳಿ ಹಾಗೂ ಅರುಣಾ ನರೇಂದ್ರರವರು ಪ್ರಬುದ್ಧ ಪ್ರಬಂಧ ಮಂಡಿಸಿದರು. ಸಂಘಟಕ ಮಹೀಪಾಲ ರೆಡ್ಡಿ, ಹೈತೋ ಗಜಲ್ ಎಕಾಡೆಮಿ ಅಧ್ಯಕ್ಷ ರಂಗಸ್ವಾಮಿ, ರತ್ನ ರಾಯ ಮಲ್ಲ, ಸಿದ್ಧರಾಮ ಹೊನಕಲ್, ಹಾ.ಮ. ಸತೀಶ ಮತ್ತು ಆಕಾಶವಾಣಿಯ ಸದಾನಂದ ಪೆರ್ಲ, ಡಾ. ಹಸೀನಾ ಶಿವಮೊಗ್ಗ , ನೂರ್ ಮಹಮ್ಮದ್, ನಂರುಶಿ ಮತ್ತು ಅನೇಕ ಖ್ಯಾತನಾಮರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ನೂರು ಕವಿಗಳ ರಚಿತ ಗಜಲ್ ಸಂಕಲನ ಬಿಡುಗಡೆ ಈ ಸಂದರ್ಭದ ವಿಶೇಷತೆಗಳಲ್ಲೊಂದು. ನಟ ನಿರೂಪಕ ಗಾಯಕ ಶ್ರೀನಿವಾಸ ಪ್ರಭು ಪ್ರಮುಖ ಆಕರ್ಷಣೆಯಾಗಿದ್ದರು.

    Share. Facebook Twitter Pinterest LinkedIn Tumblr WhatsApp Email
    Previous Articleಅರಿಯಡ್ಕದ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ಯಕ್ಷಗಾನ ತಾಳಮದ್ದಳೆ
    Next Article ಕೊಡವೂರಿನ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮ | ಸೆಪ್ಟೆಂಬರ್ 2, 9, 16, 23 ಮತ್ತು 30
    roovari

    Comments are closed.

    Related Posts

    ಸಮಾರೋಪಗೊಂಡ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ

    May 17, 2025

    ಡಾ. ಹಂಪನಾ ‘ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರ್ ಪ್ರಶಸ್ತಿ’ಗೆ ಆಯ್ಕೆ

    May 17, 2025

    ಡಿ.ಎಸ್. ಕರ್ಕಿ ‘ಕಾವ್ಯ ಪ್ರಶಸ್ತಿ’ಗೆ ಕವನ ಸಂಕಲನ ಆಹ್ವಾನ

    May 17, 2025

    ಸಿಂಧನೂರು ಸತ್ಯಾ ಗಾರ್ಡನ್ ನಲ್ಲಿ 11ನೇ ‘ಮೇ ಸಾಹಿತ್ಯ ಮೇಳ’ | ಮೇ 17 ಮತ್ತು 18

    May 16, 2025

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.

    Notifications