Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನ ವಾಡಿಯಾ ಸಭಾಂಗಣದಲ್ಲಿ ‘ಬೀಚಿ ರಸಾಯನ’ | ಮೇ 30

    May 29, 2025

    ಡಾ. ನಳಿನಿ ಮೂರ್ತಿ ದತ್ತಿ ಪ್ರಶಸ್ತಿಗೆ ಕೃತಿಗಳ ಆಹ್ವಾನ

    May 29, 2025

    ಶ್ರವಣರಂಗ ಸವಣೂರು ವತಿಯಿಂದ ಯಕ್ಷಸಾಧಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಯಕ್ಷಗಾನ ತಾಳಮದ್ದಳೆ

    May 29, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಂಗಳೂರು ಸಾಹಿತ್ಯ ಉತ್ಸವದಲ್ಲಿ ‘ಗೊಂದಲಿಗರ ಪದಗಳು, ಹಾಡು ಮತ್ತು ಕಥೆ’
    Folk

    ಮಂಗಳೂರು ಸಾಹಿತ್ಯ ಉತ್ಸವದಲ್ಲಿ ‘ಗೊಂದಲಿಗರ ಪದಗಳು, ಹಾಡು ಮತ್ತು ಕಥೆ’

    January 13, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಮಂಗಳೂರಿನ ಟಿ. ಎಂ. ಎ. ಪೈ ಇಂಟನ್ಯಾಷನಲ್ ಕನ್ವೆನ್ಶನ್ ಸೆಂಟರ್ ನಲ್ಲಿ ನಡೆದ ಮಂಗಳೂರು ಸಾಹಿತ್ಯ ಉತ್ಸವದ 7ನೇ ಆವೃತ್ತಿಯ ಅಂಗವಾಗಿ ‘ಗೊಂದಲಿಗರ ಪದಗಳು, ಹಾಡು ಮತ್ತು ಕಥೆಯನ್ನು’ ಧಾರವಾಡದ ಪ್ರಸಿದ್ಧ ಜಾನಪದ ಗಾಯಕರಾದ ವಿಠಲ್ ಗೊಂದಲೆ ಮತ್ತು ಭಲಾರಾಮ ಪ್ರಸ್ತುತಪಡಿಸಿದರು. ದಿನಾಂಕ 11 ಜನವರಿ 2025ರಂದು ಅವರು ತಮ್ಮ ಗಾಯನದ ಮೂಲಕ ಧಾರವಾಡದ ಸಾಂಸ್ಕೃತಿಕ ಪರಂಪರೆಯನ್ನು ಪ್ರೇಕ್ಷಕರಿಗೆ ಪರಿಚಯಿಸಿದರು.

    ಈ ಕಾರ್ಯಕ್ರಮವನ್ನು ನಿರ್ವಹಿಸಿದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್‌ ಇದರ ಸಂವಹನ ಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾದ ಶ್ರೀರಾಜ್ ಗುಡಿ ಮಾತನಾಡಿ “ಗೀತೆಗಳ ಸಾಂಸ್ಕೃತಿಕ ಪರಿಪೂರ್ಣತೆ ಹಾಗೂ ಈಗಿನ ಕಾಲದಲ್ಲಿ ನುಡಿಸಂಪ್ರದಾಯಗಳ ಸಂರಕ್ಷಣೆ ಅತ್ಯಗತ್ಯ. ಕುಟುಂಬದ ಆರಾಧ್ಯ ದೇವತೆ ದೇವಿಯಾಗಿರುವ ಸಂದರ್ಭದಲ್ಲಿ ವಿಶೇಷ ಸಂದರ್ಭಗಳಲ್ಲಿ , ಈ ಹಾಡುಗಳನ್ನು ಹಾಡುವ ಸಂಪ್ರದಾಯವಿದೆ. ಇವು ನಂಬಿಕೆಯನ್ನು ಮಾತ್ರವಲ್ಲ, ಸಮಾಜದ ಜೊತೆಗಿನ ನಿಕಟ ಸಂಬಂಧವನ್ನು ಪ್ರತಿಬಿಂಬಿಸುತ್ತವೆ. ಇವರು ಕೇವಲ ವೇದಿಕೆ ಪ್ರದರ್ಶನಕ್ಕಾಗಿ ಅಲ್ಲ, ಅವರ ಶ್ರೀಮಂತ ಜಾನಪದ ಪರಂಪರೆಯ ಉಳಿವಿಗಾಗಿ ತಮ್ಮ ಕಲೆ ಮುಂದುವರಿಸಿಕೊಂಡಿದ್ದಾರೆ” ಎಂದು ಕಲಾವಿದರನ್ನು ಶ್ಲಾಘಿಸಿದರು.
    ವಿಠಲ್ ಗೊಂದಲೆ ಮತ್ತು ಭಲಾರಾಮ ಅವರು ಜನಪದ ಗೀತೆಗಳಾದ ಗೊಂದಲಿಗರ ಪದಗಳಲ್ಲಿ ಹಲವಾರು ಗೀತೆಗಳನ್ನು ಹಾಡಿದರು. ಇವು ಭಕ್ತಿ, ನೈತಿಕ ಮೌಲ್ಯಗಳು ಮತ್ತು ಸಮುದಾಯದ ಜೀವನಪದ್ಧತಿಯ ಕಥೆಗಳನ್ನು ಹೇಳುವ ಪ್ರಮುಖ ಜನಪದ ಗೀತೆಗಳು. ಅವರ ಲಯಬದ್ಧ ಶೈಲಿ ಮತ್ತು ಹಾಡಿನ ಭಾವನಾತ್ಮಕತೆಯ ಮೂಲಕ ಪ್ರೇಕ್ಷಕರಿಗೆ ಧಾರವಾಡದ ಸಂಸ್ಕೃತಿಯ ಜೀವಂತ ಚಿತ್ರಣವನ್ನು ನೀಡಿದರು.
    ವಿಠಲ್ ಗೊಂದಲೆ ಮತ್ತು ಭಲಾರಾಮ ತಮ್ಮ ಹಾಡುಗಳ ಮೂಲಕ ಪ್ರೇಕ್ಷಕರನ್ನು ಮನರಂಜನೆ ಮಾಡುವುದಷ್ಟೇ ಅಲ್ಲ, ಜಾನಪದ ಕಲೆಯ ಆಳವಾದ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಮಹತ್ವವನ್ನು ಪ್ರತಿಬಿಂಬಿಸಿದರು.
    ಜಾನಪದ ಕಲೆಯನ್ನು ಬೆಸೆಯುವ, ಅದನ್ನು ಉಳಿಸುವ ಮತ್ತು ಹೊಸ ಪೀಳಿಗೆಗೆ ಪರಿಚಯಿಸುವ ಕೆಲಸ ನಿರಂತರವಾಗಿರಬೇಕು. ಎಂಬ ಮನದಾಳದ ಸಂದೇಶದೊಂದಿಗೆ ಕಾರ್ಯಕ್ರಮ ಅಂತ್ಯವಾಯಿತು.

    folk Music song story
    Share. Facebook Twitter Pinterest LinkedIn Tumblr WhatsApp Email
    Previous Articleವಿಶೇಷ ಲೇಖನ – ಚಾರಿತ್ರಿಕ ನಾಟಕಗಳ ಪಿತಾಮಹ ಸಂಸ
    Next Article ಪತ್ರಿಕೋದ್ಯಮ ಮತ್ತು ಸಾಹಿತ್ಯ – ಒಂದು ಹರಟೆ
    roovari

    Add Comment Cancel Reply


    Related Posts

    ಮಂಗಳೂರು ಪುರಭವನದಲ್ಲಿ ‘ಬಾಲಗಾನ ಯಶೋಯಾನ’ | ಜೂನ್ 03

    May 29, 2025

    ಹಾಸನದ ಸಾಹಿತ್ಯ ಸಂಘಟನೆಯಿಂದ 330ನೇ ಮನೆ ಮನೆ ಕವಿಗೋಷ್ಠಿ | ಜೂನ್ 01

    May 29, 2025

    ವಿಶ್ವ ಕನ್ನಡ ಜಾನಪದ ಪರಿಷತ್ ವತಿಯಿಂದ ಪ್ರಶಸ್ತಿಗೆ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಜೂನ್ 10 

    May 29, 2025

    ಕಾಸರಗೋಡಿನ ಗಾಯಕರ ಧ್ವನಿ ಅಂತರ್ ಧ್ವನಿ – ಬಾ. ನಾ. ಸುಬ್ರಹ್ಮಣ್ಯ

    May 29, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.

    Notifications