Subscribe to Updates

    Get the latest creative news from FooBar about art, design and business.

    What's Hot

    ಕೊಡವ ಕವನ ಸಂಕಲನಕ್ಕೆ ಸ್ವರಚಿತ ಕವನಗಳ ಆಹ್ವಾನ | ಕೊನೆಯ ದಿನಾಂಕ ಡಿಸೆಂಬರ್ 31

    December 19, 2025

    ಕುಟ್ರುಪ್ಪಾಡಿ ಗ್ರಾಮದಲ್ಲಿ ‘ಕಡಬ ತಾಲೂಕು ಪ್ರಥಮ ತುಳು ಸಮ್ಮೇಳನ’ | ಡಿಸೆಂಬರ್ 20 ಮತ್ತು 21

    December 19, 2025

    ಸ್ಪರ್ಧೆಗಾಗಿ ಸಾಹಿತ್ಯ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಜನವರಿ 15

    December 19, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಬೆಂಗಳೂರಿನ ನಯನ ಸಭಾಂಗಣದಲ್ಲಿ ‘ಸಾಹಿತ್ಯ ಲೋಕದಲ್ಲಿ ಹೆಚ್.ಎಸ್. ಶಿವಪ್ರಕಾಶ್’ | ಡಿಸೆಂಬರ್ 21
    Book Release

    ಬೆಂಗಳೂರಿನ ನಯನ ಸಭಾಂಗಣದಲ್ಲಿ ‘ಸಾಹಿತ್ಯ ಲೋಕದಲ್ಲಿ ಹೆಚ್.ಎಸ್. ಶಿವಪ್ರಕಾಶ್’ | ಡಿಸೆಂಬರ್ 21

    December 19, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ‘ಭಾಗವತರು’ ಸಾಂಸ್ಕೃತಿಕ ಸಂಘಟನೆ ಇದರ ವತಿಯಿಂದ ಸಾಹಿತ್ಯ ಲೋಕದಲ್ಲಿ ಹೆಚ್.ಎಸ್. ಶಿವಪ್ರಕಾಶ್ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ, ಗಾಯನ, ಪುಸ್ತಕ ಬಿಡುಗಡೆ ಮತ್ತು ರಂಗ ಗೌರವ ಕಾರ್ಯಕ್ರಮವನ್ನು ದಿನಾಂಕ 21 ಡಿಸೆಂಬರ್ 2025ರಂದು ಬೆಂಗಳೂರಿನ ಜೆ. ಸಿ ರಸ್ತೆಯಲ್ಲಿರುವ ಕನ್ನಡ ಭವನದ ನಯನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

    ಬೆಳಿಗ್ಗೆ 10-00 ಗಂಟೆಗೆ ಪ್ರಯೋಗ ರಂಗ ತಂಡದವರಿಂದ ಗಾಯನ ಪ್ರಸ್ತುತಿ, 10-30ಕ್ಕೆ ಹಿರಿಯ ಕವಿ ಅನ್ವರ್ ಆಲಿ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದು, ಹಿರಿಯ ಸಾಹಿತಿ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಮಧ್ಯಾಹ್ನ 12-30 ಗಂಟೆಗೆ ನಡೆಯುವ ಗೋಷ್ಠಿ 1ರಲ್ಲಿ ‘ಹೆಚ್.ಎಸ್. ಶಿವಪ್ರಕಾಶ್ – ಬದುಕು ಬರಹ’ದ ಬಗ್ಗೆ ಕವಿ ಸಿರಾಜ್ ಅಹಮ್ಮದ್ ‘ಕಾವ್ಯ’, ಸಂಸ್ಕೃತಿ ಚಿಂತಕರಾದ ಡಾ. ಎಂ.ಎಸ್. ಆಶಾದೇವಿ ‘ಗದ್ಯ’ ಮತ್ತು ಗೋಷ್ಠಿ 2ರಲ್ಲಿ ರಂಗ ನಿರ್ದೇಶಕರಾದ ನಟರಾಜ ಹೊನ್ನವಳ್ಳಿ ಇವರು ‘ನಾಟಕಗಳು’, ಹಿರಿಯ ಸಾಹಿತಿ ಡಾ. ತಾರಿಣಿ ಶುಭದಾಯಿನಿ ಇವರು ‘ಅನುವಾದಗಳು’ ಬಗ್ಗೆ ವಿಷಯ ಮಂಡನೆ ಮಾಡಲಿದ್ದಾರೆ. ಸಂಜೆ 4-00 ಗಂಟೆಗೆ ಕಗ್ಗೆರೆ ಮಂಜುನಾಥ್ ಇವರು ಶಿವಪ್ರಕಾಶರ ‘ಸಮಗಾರ ಭೀಮವ್ವ’ ನೀಳ್ಗವಿತೆ ಅಭಿನಯಿಸಲಿದ್ದಾರೆ. 5-00 ಗಂಟೆಗೆ ಹೆಚ್.ಎಸ್.ಎಸ್. ಇವರೊಂದಿಗೆ ಸಂವಾದ ಹಾಗೂ 6-00 ಗಂಟೆಗೆ ಸಮಾರೋಪದಲ್ಲಿ ಡಾ. ಹೆಚ್.ಎಸ್. ಶಿವಪ್ರಕಾಶ್ ಇವರಿಗೆ ‘ರಂಗ ಗೌರವ’ ನಡೆಯಲಿದ್ದು, ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷರಾದ ಡಾ. ಬಿ.ಎಲ್. ಶಂಕರ್ ಅಭಿನಂದನಾ ನುಡಿಗಳನ್ನಾಡಲಿದ್ದಾರೆ.

    baikady Book release felicitation Literature Music roovari
    Share. Facebook Twitter Pinterest LinkedIn Tumblr WhatsApp Email
    Previous Articleಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ‘ಲೈಟ್ಸ್ ಆಫ್’ ನಾಟಕ ಪ್ರದರ್ಶನ | ಡಿಸೆಂಬರ್ 19
    Next Article ಬಹುಮುಖ ಪ್ರತಿಭೆ ಕುಮಾರಿ ವಿದಿತಾ ನವೀನ್ ಭರತನಾಟ್ಯ ರಂಗಪ್ರವೇಶ | ಡಿಸೆಂಬರ್ 20
    roovari

    Add Comment Cancel Reply


    Related Posts

    ಕೊಡವ ಕವನ ಸಂಕಲನಕ್ಕೆ ಸ್ವರಚಿತ ಕವನಗಳ ಆಹ್ವಾನ | ಕೊನೆಯ ದಿನಾಂಕ ಡಿಸೆಂಬರ್ 31

    December 19, 2025

    ಸ್ಪರ್ಧೆಗಾಗಿ ಸಾಹಿತ್ಯ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಜನವರಿ 15

    December 19, 2025

    ಬಹುಮುಖ ಪ್ರತಿಭೆ ಕುಮಾರಿ ವಿದಿತಾ ನವೀನ್ ಭರತನಾಟ್ಯ ರಂಗಪ್ರವೇಶ | ಡಿಸೆಂಬರ್ 20

    December 19, 2025

    ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ‘ವಾದಿರಾಜ-ಕನಕ ಗಾಯನ ಸ್ಪರ್ಧೆ’ | ಡಿಸೆಂಬರ್ 27

    December 18, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.