Subscribe to Updates

    Get the latest creative news from FooBar about art, design and business.

    What's Hot

    ಪಟ್ಲ ಸಂಭ್ರಮದಲ್ಲಿ ರಾಜ್ಯಮಟ್ಟದ ಕುಣಿತ ಭಜನಾ ಸ್ಪರ್ಧೆ

    May 30, 2025

    ಕಟೇಲಿನಲ್ಲಿ ಮುಂಬೈನ ಭ್ರಾಮರಿ ಯಕ್ಷನೃತ್ಯ ಕಲಾನಿಲಯದ ವಾರ್ಷಿಕೋತ್ಸವ

    May 30, 2025

    ಸಮಾರೋಪಗೊಂಡ ‘ವಸಂತ ಚಿಟ್ಟೆಗಳು – 2025’ ಮಕ್ಕಳ ಬೇಸಿಗೆ ಶಿಬಿರ

    May 30, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಹಾದಿಗಲ್ಲು 12ನೇ ಮುದ್ರಣದ ಅನಾವರಣದ ಸಂದರ್ಭದಲ್ಲಿ ಚಿತ್ರಕಲಾ ಶಿಬಿರ
    Book Release

    ಹಾದಿಗಲ್ಲು 12ನೇ ಮುದ್ರಣದ ಅನಾವರಣದ ಸಂದರ್ಭದಲ್ಲಿ ಚಿತ್ರಕಲಾ ಶಿಬಿರ

    January 30, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಬೆಂಗಳೂರಿನ ‘ಪದ’ ಸಾಂಸ್ಕೃತಿಕ ಸಂಸ್ಥೆ ಆಯೋಜಿಸಿದ ‘ಹಾದಿಗಲ್ಲು’ ಪುಸ್ತಕದ 12ನೇ ಮುದ್ರಣದ ಅನಾವರಣ ಮತ್ತು ಚಿತ್ರಕಲಾ ಶಿಬಿರವು ದಿನಾಂಕ 20-01-2024ರಂದು ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ‘ವರ್ಣ ಆರ್ಟ್ ಗ್ಯಾಲರಿ’ಯಲ್ಲಿ ನಡೆಯಿತು.

    ಈ ಶಿಬಿರದಲ್ಲಿ 12 ಮಂದಿ ಅಂತಾರಾಷ್ಟ್ರೀಯ ಮಟ್ಟದ ಕಲಾವಿದರು ಭಾಗವಹಿಸಿ ಹಾದಿಗಲ್ಲು ಪುಸ್ತಕವನ್ನು ಓದಿ ಚಿತ್ರಕಲೆಯನ್ನು ಕ್ಯಾನ್ವಾಸ್ ಮೇಲೆ ಬಿಡಿಸಿದ್ದರು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಹೆಸರಾಂತ ಸಾಹಿತಿಗಳಾದ ಡಾ. ರಾಜಪ್ಪ ದಳವಾಯಿ ಮಾತನಾಡಿ “ಒಂದು ಪುಸ್ತಕ ಜನರಿಗೆ ಹತ್ತಿರವಾಗಬೇಕೆಂದರೆ ಅದರೊಳಗೆ ಹೂರಣ ಚೆನ್ನಾಗಿರಲೇಬೇಕು. ಈ ನಿಟ್ಟಿನಲ್ಲಿ ಕೆ.ಎ. ದಯಾನಂದ್ ಅವರ ‘ಹಾದಿಗಲ್ಲು’ ಬಹಳ ಸೊಗಸಾಗಿ ಮೂಡಿ ಬಂದಿದೆ. ಅವರ ನೆನಪುಗಳು ಅಚ್ಚಾಗಿದೆ. ಆ ನೆನಪುಗಳು ನಮ್ಮದೇ ಎಂದು ಓದುಗ ಭಾವಿಸಿ ತನ್ನ ಹಳೆಯ ನೆನಪಿಗೆ ಜಾರುತ್ತಾರೆ. ಹೀಗೆ ಬಾಯಿಂದ ಬಾಯಿಗೆ ಪುಸ್ತಕದ ಹೂರಣ ಹರಡಿ ಎಲ್ಲರ ಮಸ್ತಕದಲ್ಲೂ ಹಾದಿಗಲ್ಲು ಹರಡಿದೆ. ಇದು ಸಂತಸ ಪಡುವ ವಿಷಯ. ಕೆ.ಎ. ದಯಾನಂದ ಅವರು ಉತ್ತಮ ಆಡಳಿತಗಾರರು, ಒಳ್ಳೆಯ ಬರಹಗಾರರು ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ. ಸರ್ ಮಿರ್ಜಾ ಇಸ್ಮಾಯಿಲ್ ಅವರಿಂದ ಹಿಡಿದು ಅನೇಕ ಮಂದಿ ಸಜ್ಜನ ಸಹೃದಯ ದಕ್ಷ ಪ್ರಾಮಾಣಿಕ ಅಧಿಕಾರಿಗಳು ಕರ್ನಾಟಕ ಸರ್ಕಾರದಲ್ಲಿ ಕೆಲಸ ಮಾಡಿದ್ದಾರೆ. ಬಡಬಗ್ಗರಿಗೆ ಶ್ರಮಿಕರಿಗೆ ನೋವಾಗದ ಹಾಗೆ ಅವರ ಸಮಸ್ಯೆಗಳನ್ನು ಬಗೆಹರಿಸಿದ್ದಾರೆ. ಅವರ ಸಾಲಿಗೆ ಅಂದರೆ ಕಷ್ಟದಿಂದ ಮಿಡಿಯುವ ಜನರಿಗೆ ಸ್ಪಂದಿಸುವ ಕೆಲವೇ ಅಧಿಕಾರಿಗಳಲ್ಲಿ ಕೆ.ಎ. ದಯಾನಂದ ಅವರು ಕೂಡ ಒಬ್ಬರು. ಕಲೆ, ಸಂಸ್ಕೃತಿ, ಸಾಹಿತ್ಯ, ಸಂಗೀತ, ನಾಟಕ ಮತ್ತು ಸಿನಿಮಾ ಜನರ ಜೀವನದಿಗಳು. ಜನರ ಜೀವನದಿಗಳನ್ನು ಹಿಡಿದಿಟ್ಟು ಮತ್ತಷ್ಟು ಜನರಿಗೆ ಹತ್ತಿರವಾಗಲಿ.” ಎಂದು ಶುಭ ಹಾರೈಸಿದರು.

    ಕೆ.ಎ. ದಯಾನಂದ ಮಾತನಾಡಿ “ಪುಸ್ತಕ ಇಷ್ಟರ ಮಟ್ಟಿಗೆ ಪ್ರಶಂಸೆಗೆ ಒಳಪಡುತ್ತದೆ ಎಂದು ನಾನು ಭಾವಿಸಿರಲಿಲ್ಲ. ಒಂದು ರೀತಿ ನನಗೆ ವಿಸ್ಮಯವಾಗಿದೆ.” ಎಂದರು.

    ಅಧ್ಯಕ್ಷತೆ ವಹಿಸಿದ ಡಾಕ್ಟರ್ ಎಂ.ಎಸ್. ಮೂರ್ತಿ ತಮ್ಮದೇ ಶೈಲಿಯಲ್ಲಿ ರಚಿತವಾದ ‘ಹಾದಿಗಲ್ಲಿ’ನ ಚಿತ್ರಾಕೃತಿಯನ್ನು ದಂಪತಿಗಳಿಗೆ ನೀಡಿ ಶುಭ ಕೋರಿದರು. ಬಳಿಕ ಮಾತನಾಡಿದ ಅವರು “ತಾಯಿಯ ಅಂತರಂಗವನ್ನು ಅರಿತವರಿಗೆ ಮಾತ್ರ ತಾಯಿಯ ಹೃದಯವಿರುತ್ತದೆ. ಇಂತಹ ಹೃದಯವಂತ ದಯಾನಂದ ಅವರ ಪುಸ್ತಕ ಪುತ್ರ ಕೃತಿಯಾಗಿರುವುದು ನಮಗೆಲ್ಲರಿಗೂ ಹರ್ಷದಾಯಕವಾಗಿದೆ.” ಅವರಿಗೆ ಶುಭವಾಗಲಿ ಎಂದು ಹಾರೈಸಿದರು.

    ಆಯೋಜಕರಾದ ಪದ ದೇವರಾಜ್ ಕಾರ್ಯಕ್ರಮದಲ್ಲಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, “ಪದ ಸಂಸ್ಥೆ ನಿರಂತರವಾಗಿ ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನದೇ ಆದಂತಹ ಛಾಪು ಮೂಡಿಸಿದೆ. ಉತ್ತಮವಾದ ಕಾರ್ಯಕ್ರಮವನ್ನು ಮಾಡಲು ಉತ್ತಮವಾದ ಮನಸ್ಸುಗಳು ಸೇರಲು ಇಂತಹ ಕಾರ್ಯಕ್ರಮಗಳು ಸಂಗಮವಾಗಿದೆ.“ ಎಂದು ಎಲ್ಲರಿಗೂ ವಂದಿಸಿದರು.

    ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಗಾಯಕರಾದ ಶಂಕರ್ ಭಾರತಿಪುರ, ಅಪ್ಪುಗೆರೆ ತಿಮ್ಮರಾಜು, ಡಾಕ್ಟರ್ ಲಕ್ಷ್ಮೀನಾರಾಯಣ ಹಾಗೂ ಡಾ. ಲಕ್ಷ್ಮಣ ದಾಸ್ ಗೀತೆಗಳನ್ನು ಹಾಡಿ ಸಭಿಕರನ್ನು ರಂಜಿಸಿದರು. ಕಾರ್ಯಕ್ರಮವನ್ನು ಶ್ರೀ ಶಿವಲಿಂಗಪ್ರಸಾದ್ ನಿರೂಪಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಹುತಾತ್ಮ ದಿನದಂದು ಉದ್ಯಾವರ ಸ್ಮಶಾನದಲ್ಲಿ ‘ಕತ್ತಲ ಹಾಡು’ ಕಾರ್ಯಕ್ರಮ | ಜನವರಿ 30
    Next Article ಸಂಗೀತ ಪರಿಷತ್ ವತಿಯಿಂದ ‘ಸಂಗೀತ ತ್ರಿಮೂರ್ತಿ ಹಾಗೂ ದಾಸ ವರೇಣ್ಯರ ಆರಾಧನೋತ್ಸವ’ ಕಾರ್ಯಕ್ರಮ
    roovari

    Add Comment Cancel Reply


    Related Posts

    ಮೈಸೂರಿನಲ್ಲಿ ಸಿತಾರ್ ವಾದನ, ಪುಸ್ತಕ ಲೋಕಾರ್ಪಣೆ ಮತ್ತು ಸಿತಾರ್ ತರಗತಿಗಳ ಪ್ರಾರಂಭೋತ್ಸವ | ಮೇ 31

    May 30, 2025

    ಉಪ್ಪಳದ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ತುಲುವೆರೆ ಕಲ ವರ್ಸೊಚ್ಚಯ | ಜೂನ್ 01

    May 30, 2025

    ಕೀನ್ಯಾದ ಪ್ರಸಿದ್ಧ ಲೇಖಕ ಗೂಗಿ ವಾ ಥಿಯಾಂಗೋ ವಿಧಿವಶ

    May 30, 2025

    ಮೈಸೂರಿನ ನಟನ ರಂಗಶಾಲೆಯಲ್ಲಿ ‘#36 ಸತಿ ಸಾವಿತ್ರಿ ನಿವಾಸ’ ಕನ್ನಡ ನಾಟಕ ಪ್ರದರ್ಶನ | ಜೂನ್ 01

    May 30, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.