Subscribe to Updates

    Get the latest creative news from FooBar about art, design and business.

    What's Hot

    ಸಂವಾಹಿನಿ ಹಳೆ ವಿದ್ಯಾರ್ಥಿ ಸಂಘದ ಅಡಿಯಲ್ಲಿ ‘ಯಾದೇ’ ಸಂಭ್ರಮಾಚರಣೆ

    May 13, 2025

    ಸಂಪೆಕಟ್ಟೆಯಲ್ಲಿ ಯಶಸ್ವಿ ಕಲಾವೃಂದದ ಮಕ್ಕಳ ಮೇಳದ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ

    May 13, 2025

    ಸುರತ್ಕಲ್ಲಿನ ಅನುಪಲ್ಲವಿಯಲ್ಲಿ ‘ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ’ | ಮೇ 17

    May 13, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಲ್ಲಿಕಟ್ಟೆಯ ಶ್ರೀಕೃಷ್ಣಕಲ್ಯಾಣ ಮಂದಿರದಲ್ಲಿ ಹರಿಕಥಾ ಸ್ಪರ್ಧೆ
    Competition

    ಮಲ್ಲಿಕಟ್ಟೆಯ ಶ್ರೀಕೃಷ್ಣಕಲ್ಯಾಣ ಮಂದಿರದಲ್ಲಿ ಹರಿಕಥಾ ಸ್ಪರ್ಧೆ

    December 28, 2024Updated:January 7, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಹರಿಕಥಾ ಪರಿಷತ್ ಮಂಗಳೂರು ಇವರು ಉಡುಪಿ, ದ. ಕ. ಹಾಗೂ ಕಾಸರಗೋಡು ಜಿಲ್ಲೆಗಳ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಹರಿಕಥಾ ಸ್ಪರ್ಧೆಯು ದಿನಾಂಕ 25 ಡಿಸೆಂಬರ್ 2024ದಂದು ಕದ್ರಿ ಮಲ್ಲಿಕಟ್ಟೆಯ ಶ್ರೀಕೃಷ್ಣ ಕಲ್ಯಾಣಮಂದಿರದಲ್ಲಿ ನಡೆಯಿತು.
    ಕಾರ್ಯಕ್ರಮವನ್ನು ಉದ್ಘಾಟಿಸಿದ ಎಸ್. ಕೆ. ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್‌ ಸೊಸೈಟಿ ಇದರ ಅಧ್ಯಕ್ಷರಾದ ಪಿ. ಉಪೇಂದ ಆಚಾರ್ಯ ಮಾತನಾಡಿ “ಆಧ್ಯಾತ್ಮ, ಪುರಾಣ, ಸಂಗೀತ ಮತ್ತು ಶಾಸ್ತ್ರೀಯತೆಗಳಿಂದ ಕೂಡಿರುವ ಹರಿಕಥಾ ಕಲೆಯು ಅಂತಃ ಸತ್ವದಿಂದ ಶಾಶ್ವತವಾಗಿ ಉಳಿಯುವ ಕಲೆ. ಸರಕಾರ ಹಾಗೂ ಸಾರ್ವಜನಿಕ ಸಂಸ್ಥೆಗಳಿಂದ ಇಂತಹ ಕಲೆಗೆ ಇನ್ನಷ್ಟು ಪ್ರೋತ್ಸಾಹದ ಅಗತ್ಯವಿದೆ.” ಎಂದರು.

    ಹರಿಕಥಾ ಪರಿಷತ್ ಇದರ ಅಧ್ಯಕ್ಷರಾದ ಕೆ. ಮಹಾಬಲ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕ. ಸಾ. ಪ. ಮಾಜಿ ಅಧ್ಯಕ್ಷರಾದ ಡಾ. ಹರಿಕೃಷ್ಣ ಪುನರೂರು ಶುಭ ಹಾರೈಸಿದರು. ಬೆಂಗಳೂರಿನ ಷಡ್ಜ ಕಲಾಕೇಂದ್ರ ಟ್ರಸ್ಟ್‌ ಇದರ ಸಂಚಾಲಕ ಡಾ. ದತ್ತಾತ್ರೆಯ ಎಲ್. ವೇಲಣ್ಕರ್, ವಿಜಯ ಬ್ಯಾಂಕ್ ಇದರ ನಿವೃತ್ತ ಮ್ಯಾನೇಜರ್ ಸುಂದರ ಶೆಟ್ಟಿ ಬೆಟ್ಟಂಪಾಡಿ, ಎಸ್. ಕೆ. ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ ಇದರ ಪ್ರಧಾನ ವ್ಯವಸ್ಥಾಪಕರಾಗಿರುವ ಯಜ್ಞೇಶ್ವರ ಆಚಾರ್ಯ ಶುಭ ಕೋರಿದರು.

    ಹರಿಕಥಾ ಪರಿಷತ್ ಇದರ ಖಜಾಂಚಿ ಡಾ. ಎಸ್. ಪಿ. ಗುರುದಾಸ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ನಿರೂಪಿಸಿ, ಸಂಚಾಲಕ ಸುಧಾಕರ್ ರಾವ್ ಪೇಜಾವರ ವಂದಿಸಿದರು. ಪರಿಷತ್ತಿನ ಉಪಾಧ್ಯಕ್ಷ ನಾರಾಯಣ ರಾವ್ ಕಾಸರಗೋಡು, ಸಂಚಾಲಕ ಶಂನಾಡಿಗ ಕುಂಬಳೆ, ಸುಧಾಕರ್ ಆಚಾರ್, ಉಪೇಂದ್ರ ಆಚಾರ್ಯ, ವಿಜಯಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು.
    ತೀರ್ಪುಗಾರರಾಗಿ ಮನೋಹರ ರಾವ್, ರಮೇಶ್ ಹೆಬ್ಬಾರ್, ಚಂದ್ರಕಾಂತ ಭಟ್, ನಿತ್ಯಾನಂದ ಕಾರಂತ್, ಜಿ. ಕೆ. ಭಟ್, ಮಂಜುಳಾ ರಾವ್ ಸಹಕರಿಸಿದರು. ಮಹೇಶ್ ಕುಮಾರ್ ಸ್ಪರ್ಧೆ ನಿರ್ವಹಿಸಿದರು. ವೈಭವಿ ಕುಂಬಳೆ ಸಹಕರಿಸಿದರು.

    ಹರಿಕಥಾ ಸ್ಪರ್ಧೆ 2024ರ ಫಲಿತಾಂಶ :-
    ಜೂನಿಯ‌ರ್ ವಿಭಾಗ: ಪ್ರಥಮ ಸ್ಥಾನ – ಪ್ರಣಮ್ಯಾ ಕೆ. ಎಸ್. ನಾಯ್ಕಾಪು, ದ್ವಿತೀಯ – ದೇವಿಕಾ ಪುತ್ತೂರು, ತೃತೀಯ – ಸಾತ್ವಿಕ್ ಕೃಷ್ಣ ಬಂದ್ಯೋಡು. ಸೀನಿಯ‌ರ್ ವಿಭಾಗ: ಪ್ರಥಮ – ಪೂಜಾ ವಾಸುದೇವ ಐಲ, ದ್ವಿತೀಯ – ನಿಶ್ಚಿತಾ ಕೃಷ್ಣ ಭಟ್, ತೃತೀಯ – ಅಭಿಜ್ಞಾ ಭಟ್ ಬೊಳುಂಬು.

    Share. Facebook Twitter Pinterest LinkedIn Tumblr WhatsApp Email
    Previous Articleವಿಶೇಷ ಲೇಖನ – ವೈದ್ಯಕೀಯ ವೃತ್ತಿಯಲ್ಲಿದ್ದು ಸಾಹಿತ್ಯ ಕೃಷಿ ಮಾಡಿದ ದೊಡ್ಡೇರಿ ವೆಂಕಟಗಿರಿ ರಾವ್
    Next Article ತೆಕ್ಕಟ್ಟೆಯ ಹಯಗ್ರೀವದಲ್ಲಿ ನೀನಾಸಂ ತಿರುಗಾಟದ ನಾಟಕ ‘ಅಂಕದ ಪರದೆ’
    roovari

    Add Comment Cancel Reply


    Related Posts

    ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ‘ಸಿರಿಪರ್ಬ- 2025’ ತುಳು ಸಾಂಸ್ಕೃತಿಕ ಉತ್ಸವ

    May 10, 2025

    ವಿವೇಕಾನಂದ ಕಾಲೇಜಿನಲ್ಲಿ ವಿಚಾರಗೋಷ್ಠಿ ಮತ್ತು ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ

    May 2, 2025

    ನಿಟ್ಟೆ (ಪರಿಗಣಿತ ವಿಶ್ವವಿದ್ಯಾಲಯ)ದಲ್ಲಿ ಯಶಸ್ವಿಯಾಗಿ ನಡೆದ ‘ಯಕ್ಷಗವಿಷ್ಟಿ’

    April 30, 2025

    ಮಡಿಕೇರಿಯಲ್ಲಿ ‘ಕಲೋತ್ಸವ 2025’ ಜಿಲ್ಲಾ ಮಟ್ಟದ ಅಂತ‌ರ್ ಕಾಲೇಜು ಸ್ಪರ್ಧಾ ಕಾರ್ಯಕ್ರಮ

    April 29, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.