Subscribe to Updates

    Get the latest creative news from FooBar about art, design and business.

    What's Hot

    ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ‘ವಿವೇಕಸ್ಮೃತಿ’ ಉಪನ್ಯಾಸ ಕಾರ್ಯಕ್ರಮ

    June 12, 2025

    ವಿಶ್ವಕರ್ಮ ಒಕ್ಕೂಟದಿಂದ ಸಣ್ಣ ಕಥೆ – ಕವನ ಸ್ಪರ್ಧೆ – 2025 | 30 ಜೂನ್ ಕೊನೆಯ ದಿನ

    June 12, 2025

    ಮೈಸೂರಿನಲ್ಲಿ ಪ್ರೇರಣಾ ಕಲಾ ಕಾರ್ಯಾಗಾರ | ಜೂನ್ 28

    June 12, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ‘ಹಿಂದಿ ದಿವಸ್’ ಕಾರ್ಯಕ್ರಮ
    Literature

    ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ‘ಹಿಂದಿ ದಿವಸ್’ ಕಾರ್ಯಕ್ರಮ

    September 15, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮೂಡುಬಿದಿರೆ : ವಿದ್ಯಾಗಿರಿಯ ‘ಕುವೆಂಪು ಸಭಾಂಗಣ’ದಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಹಿಂದಿ ವಿಭಾಗ ಮತ್ತು ಕೆ.ಎನ್. ಭಟ್ ಶಿರಾಡಿಪಾಲ್ ಜನ್ಮಶತಮಾನೋತ್ಸವ ಸಮಿತಿ ಏರ್ಪಡಿಸಿದ ‘ಹಿಂದಿ ದಿವಸ್’ ಕಾರ್ಯಕ್ರಮವು ದಿನಾಂಕ 14-09-2023ರಂದು ನಡೆಯಿತು.

    ಈ ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆಯವರು ಕೆ.ಎನ್. ಭಟ್ ಶಿರಾಡಿಪಾಲ್ ಜನ್ಮಶತಮಾನೋತ್ಸವ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ “ಬದುಕಿನುದ್ದಕ್ಕೂ ಕಷ್ಟ ಪರಂಪರೆಗಳನ್ನೇ ಎದುರಿಸಿದ ಶಿಕ್ಷಕರಾಗಿದ್ದ ಕೆ.ಎನ್. ಭಟ್ ಶಿರಾಡಿಪಾಲ್ 38 ಕೃತಿಗಳ ರಚನೆ ಮಾಡಿದ್ದಾರೆ. ಅವರ ಅನೇಕ ಲೇಖನಗಳು ಆ ಕಾಲದ ಪ್ರಸಿದ್ಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ರವೀಂದ್ರನಾಥ ಠಾಗೋರರ ‘ಸಾಧನಾ’ ಕೃತಿಯನ್ನು ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಕಾವ್ಯ ಮತ್ತು ಗದ್ಯ ಎರಡೂ ಪ್ರಕಾರಗಳಲ್ಲಿ ನಿರಂತರ ಬರೆದ ಶಿರಾಡಿಪಾಲ್ ಅವರ ಸಮಗ್ರ ಸಾಹಿತ್ಯ ಸಂಪುಟ ಪ್ರಕಟಗೊಳ್ಳಬೇಕು” ಎಂದು ಹೇಳಿದರು.

    ಸಮಾರಂಭದಲ್ಲಿ ಪಾಲಡ್ಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಆಂಡ್ಯ್ಯೂ ಡಿ’ಸೋಜ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ‘ಹಿಂದಿ ದಿವಸ್’ನ ಮಹತ್ತ್ವವನ್ನು ವಿವರಿಸಿದರು. ಶತನಮನ ಶತಸನ್ಮಾನ ಗೌರವ ಸಲಹೆಗಾರ ಶ್ರೀಪತಿ ಭಟ್ ಮೂಡುಬಿದಿರೆ ಮಾತನಾಡಿ “ವೃತ್ತಿ ಯಾವುದಾದರೂ ಅದನ್ನು ಗೌರವದಿಂದ ಕಾಣಬೇಕು. ಜ್ಞಾನದ ಆಸಕ್ತಿಯಿದ್ದರೆ ಎಲ್ಲರೂ ಸಾಧಕರಾಗಬಹುದು. ಅಡುಗೆ ಭಟ್ಟರಾಗಿದ್ದ, ಬಸ್ ಏಜೆಂಟ್ ಆಗಿದ್ದ ಶಿರಾಡಿಪಾಲ್ ಅವರು ಮೂರನೇ ಕ್ಲಾಸಲ್ಲೇ ಶಾಲೆ ಬಿಟ್ಟರೂ ಮುಂದೆ ಸ್ವಅಧ್ಯಯನದ ಮೂಲಕ ಶಿಕ್ಷಕರಾಗಿ ಸಾಹಿತಿಯಾಗಿ ಬೆಳೆದದ್ದೇ ಇದಕ್ಕೆ ಉದಾಹರಣೆ” ಎಂದರು.

    ಆಳ್ವಾಸ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಕುರಿಯನ್ ಮಾತನಾಡಿ “ಜ್ಞಾನ ಸಾಧನೆಗಿಂತ ಹಿರಿದಾದ ಸಂಪತ್ತು ಯಾವುದೂ ಇಲ್ಲ. ವಿದ್ಯಾರ್ಥಿಗಳು ತಮ್ಮ ಸುತ್ತುಮುತ್ತ ಇರುವ ಹಿರಿಯರ ಸಾಧಕರ ಬದುಕಿನಿಂದ ಸ್ಪೂರ್ತಿಗೊಂಡು ತಮ್ಮ ಬದುಕನ್ನು ರೂಪಿಸಿಕೊಳ್ಳಬೇಕು” ಎಂದರು.

    ಸನ್ಮಾನ ಸಮಿತಿ ಸಂಘಟಕ ಪತ್ರಕರ್ತ ಕೃಷ್ಣಕುಮಾರ್ ಕಾರ್ಯಕ್ರಮದ‌ ರೂಪುರೇಷೆಗಳನ್ನು ವಿವರಿಸಿ ಸ್ವಾಗತಿಸಿದರು. ಸಮಾರಂಭದಲ್ಲಿ ಸನ್ಮಾನ ಸಮಿತಿ ಸದಸ್ಯ ಪತ್ರಕರ್ತ ಹರೀಶ್ ಕೆ. ಆದೂರು, ಕೆ.ಎನ್. ಭಟ್ ಶಿರಾಡಿಪಾಲ್ ಅವರ ಶಿಷ್ಯ ಜಯರಾಜ್ ಕಂಬಳಿ, ಆಳ್ವಾಸ್ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥ ಡಾ. ರಾಜೀವ್ ಸಿ. ಉಪಸ್ಥಿತರಿದ್ದರು.

    Share. Facebook Twitter Pinterest LinkedIn Tumblr WhatsApp Email
    Previous Articleಮಂಗಳೂರಿನಲ್ಲಿ ‘ಸನಾತನ ನೃತ್ಯೋತ್ಸವ’ | ಸೆಪ್ಟೆಂಬರ್ 17ರಂದು 
    Next Article ವ್ಯಕ್ತಿ ಪರಿಚಯ | “ಸಂಪನ್ನ ಕಲೋತ್ತಮ” ಅವಿನಾಶ್ ಬೈಪಾಡಿತ್ತಾಯ
    roovari

    Add Comment Cancel Reply


    Related Posts

    ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ‘ವಿವೇಕಸ್ಮೃತಿ’ ಉಪನ್ಯಾಸ ಕಾರ್ಯಕ್ರಮ

    June 12, 2025

    ಅಂತರಾಷ್ಟ್ರೀಯ ಮಟ್ಟದ ಬೂಕರ್ ಪ್ರಶಸ್ತಿ ಪುರಸ್ಕೃತರಾದ ದೀಪಾ ಭಾಸ್ತಿಯವರಿಗೆ ಗೌರವ ಸಮರ್ಪಣೆ

    June 12, 2025

    ಕವನ | ಮುಂಗಾರು ಮಳೆ

    June 12, 2025

    ವಿಶೇಷ ಲೇಖನ – ಮಹಾನ್ ವಿದ್ವಾಂಸ ಹೀ. ಚ. ಶಾಂತವೀರಯ್ಯ

    June 11, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.