Subscribe to Updates

    Get the latest creative news from FooBar about art, design and business.

    What's Hot

    ಕನ್ನಡ ಭವನದ ‘ರಜತ ಸಂಭ್ರಮ’ ನಾಡು ನುಡಿ ಹಬ್ಬ, ವಿವಿಧ ಪ್ರಶಸ್ತಿ ಪ್ರದಾನ | ಜನವರಿ 18

    January 16, 2026

    ಮಕರ ಸಂಕ್ರಮಣದ ಅಂಗವಾಗಿ ‘ಶಾಂಭವಿ ವಿಲಾಸ’ ತಾಳಮದ್ದಳೆ

    January 16, 2026

    ನಾರಿ ಚಿನ್ನಾರಿಯಿಂದ ಪದ್ಮಗಿರಿ ಕಲಾಕುಟೀರದಲ್ಲಿ ‘ಶ್ರುತಿ ಸುಗಂಧ’ ವಾದ್ಯ ಸಂಗೀತ | ಜನವರಿ 17    

    January 16, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಹಿಂದೂಸ್ತಾನಿ ಸಂಗೀತಗಾರ ಪಂಡಿತ್ ಅಶೋಕ ಹುಗ್ಗಣ್ಣವರ ಇನ್ನಿಲ್ಲ
    Music

    ಹಿಂದೂಸ್ತಾನಿ ಸಂಗೀತಗಾರ ಪಂಡಿತ್ ಅಶೋಕ ಹುಗ್ಗಣ್ಣವರ ಇನ್ನಿಲ್ಲ

    December 26, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಹುಬ್ಬಳ್ಳಿ : ಹುಬ್ಬಳ್ಳಿಯ ಪ್ರಸಿದ್ಧ ಹಿಂದೂಸ್ತಾನಿ ಸಂಗೀತಗಾರ, ಪ್ರಸಕ್ತ ಕಾಲಘಟ್ಟದ ಖ್ಯಾತ ಸಂಗೀತ ಗುರು ಪಂಡಿತ್ ಅಶೋಕ ಹುಗ್ಗಣ್ಣವರ (64) ಇನ್ನಿಲ್ಲ. ಅವರು ದಿನಾಂಕ 24 ಡಿಸೆಂಬರ್ 2025ರಂದು ತಡರಾತ್ರಿ ದಾವಣಗೆರೆಯಲ್ಲಿ ನಿಧನರಾದರು. ಪಾರ್ಥಿವ ಶರೀರವನ್ನು ಗುರುವಾರ ನಸುಕಿನಲ್ಲಿ ಹುಬ್ಬಳ್ಳಿ ಲಿಂಗರಾಜನಗರ ಬಡಾವಣೆಯ ಅವರ ಸ್ವಗೃಹ ‘ಬನಶ್ರೀ’ಗೆ ತಂದು ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ. ಶುಕ್ರವಾರ ಬೆಳಗ್ಗೆ ಹುಬ್ಬಳ್ಳಿಯ ವಿದ್ಯಾನಗರ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿದೆ.

    ಉಪನ್ಯಾಸಕಿಯಾಗಿರುವ ಪತ್ನಿ ವೀಣಾ, ವಿಜ್ಞಾನಿ ಹಾಗೂ ಗಾಯಕರಾಗಿರುವ ವಿನಾಯಕ್ ಸೇರಿದಂತೆ ಅಪಾರ ಬಂಧು ಬಾಂಧವರು ಮತ್ತು ಶಾಸ್ತ್ರೀಯ ಸಂಗೀತ ಲೋಕದ ಅಸಂಖ್ಯ ಕಲಾಬಳಗವನ್ನು ಅವರು ಅಗಲಿದ್ದಾರೆ. ಗ್ವಾಲಿಯರ್ ಘರಾಣೆಯ ಕಲಾವಿದರಾಗಿದ್ದ ಅವರು ಪಂಡಿತ್ ಲಿಂಗರಾಜ ಬುವಾ ಯರಗುಪ್ಪಿ ಶಿಷ್ಯರು. ಶೈಕ್ಷಣಿಕವಾಗಿ ಪ್ರತಿಭಾಶಾಲಿಯಾಗಿದ್ದ ಅಶೋಕ ಹುಗ್ಗಣ್ಣವರ ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರಾರಂಭದಲ್ಲಿ ಎಂ.ಎಸ್ಸಿ ಪಡೆದರು. ಆ ನಂತರ ಶಾಸ್ತ್ರೀಯ ಸಂಗೀತದೆಡೆಗಿನ ತೀವ್ರ ತುಡಿತದಿಂದಾಗಿ ಸಂಗೀತ ಶಾಸ್ತ್ರ ಎಂ.ಎ. ವ್ಯಾಸಂಗ ಮಾಡಿ, ಹೊನ್ನಾವರ ಎಸ್‌.ಡಿ.ಎಂ. ಕಾಲೇಜಿನ ಸಂಗೀತ ವಿಭಾಗವನ್ನು ಎರಡೂವರೆ ದಶಕಗಳ ಕಾಲ ಶ್ರೀಮಂತಗೊಳಿಸಿದ್ದರು. 2021ರಲ್ಲಿ ನಿವೃತ್ತರಾದ ಮೇಲೆ ಹುಬ್ಬಳ್ಳಿಯಲ್ಲಿ ನೆಲೆಸಿದ್ದರು. ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಹುಗ್ಗಣ್ಣನವರಿಗೆ ‘ಕರ್ನಾಟಕ ಕಲಾಶ್ರೀ’, ‘ಅನನ್ಯ ಮನ್ಸೂರ್’ ಪ್ರಶಸ್ತಿ, ‘ರಾಗಶ್ರೀ’ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಸಂದಿವೆ.

    baikady Music roovari
    Share. Facebook Twitter Pinterest LinkedIn Tumblr WhatsApp Email
    Previous Articleಒಡಿಯೂರು ಬೀದಿ ನಾಟಕ ಸ್ಪರ್ಧೆ | ಜನವರಿ 19 ಮತ್ತು 20
    Next Article ಡಾ. ಅಜಯ ಕುಮಾರ ಸಿಂಹ ಇವರ ‘ಹರಿಯಲು ಬಿಡು’ ಕವನ ಸಂಕಲನ ಅನಾವರಣ | ಡಿಸೆಂಬರ್ 27
    roovari

    Add Comment Cancel Reply


    Related Posts

    ಕನ್ನಡ ಭವನದ ‘ರಜತ ಸಂಭ್ರಮ’ ನಾಡು ನುಡಿ ಹಬ್ಬ, ವಿವಿಧ ಪ್ರಶಸ್ತಿ ಪ್ರದಾನ | ಜನವರಿ 18

    January 16, 2026

    ಮಕರ ಸಂಕ್ರಮಣದ ಅಂಗವಾಗಿ ‘ಶಾಂಭವಿ ವಿಲಾಸ’ ತಾಳಮದ್ದಳೆ

    January 16, 2026

    ನಾರಿ ಚಿನ್ನಾರಿಯಿಂದ ಪದ್ಮಗಿರಿ ಕಲಾಕುಟೀರದಲ್ಲಿ ‘ಶ್ರುತಿ ಸುಗಂಧ’ ವಾದ್ಯ ಸಂಗೀತ | ಜನವರಿ 17    

    January 16, 2026

    ದಯಾನಂದ ಬಳೆಗಾರ ನಾಗೂರು ಇವರಿಗೆ ನಿಟ್ಟೂರು ಭೋಜಪ್ಪ ಸುವರ್ಣ ಸ್ಮಾರಕ ಪ್ರಶಸ್ತಿ

    January 16, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.