Subscribe to Updates

    Get the latest creative news from FooBar about art, design and business.

    What's Hot

    ಅನುಷ್ಕಾ ಪ್ರಕಾಶನದಿಂದ ನಾಲ್ಕು ಕೃತಿಗಳು ಲೋಕಾರ್ಪಣಾ ಸಮಾರಂಭ

    December 29, 2025

    ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಅನುವಾದಿತ ಕೃತಿ ಬಿಡುಗಡೆ

    December 29, 2025

    ಉಡುಪಿ ಎಂ.ಜಿ.ಎಂ. ಕಾಲೇಜಿನಲ್ಲಿ ‘ರಂಗಭೂಮಿ ರಂಗಶಿಕ್ಷಣ ಮಕ್ಕಳ ನಾಟಕೋತ್ಸವ’ | ಡಿಸೆಂಬರ್ 29 ಮತ್ತು 30

    December 29, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕಾಸರಗೋಡಿನ ಪದ್ಮಗಿರಿ ಕಲಾ ಕುಟೀರದಲ್ಲಿ ಬಾನಾಸು ಅವರಿಗೆ ಹುಟ್ಟೂರ ಗೌರವ
    Awards

    ಕಾಸರಗೋಡಿನ ಪದ್ಮಗಿರಿ ಕಲಾ ಕುಟೀರದಲ್ಲಿ ಬಾನಾಸು ಅವರಿಗೆ ಹುಟ್ಟೂರ ಗೌರವ

    January 31, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಾಸರಗೋಡು : ಕಾಸರಗೋಡು ಸಾಂಸ್ಕೃತಿಕ -ಸಾಹಿತ್ಯಕ ಸಂಸ್ಥೆ ರಂಗ ಚಿನ್ನಾರಿ ಮತ್ತು ಅದರ ಸಹ ಘಟಕಗಳಾದ ನಾರಿ ಚಿನ್ನಾರಿ, ಸ್ವರ ಚಿನ್ನಾರಿ ಜೊತೆಗೆ ಕಾಸರಗೋಡಿನ ಕನ್ನಡ ಪರ ಸಂಘಟನೆಗಳ ಸಹಯೋಗದೊಂದಿಗೆ ಆಯೋಜಿಸಿದ 2021ನೇ ಸಾಲಿನ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ವಿಮರ್ಶಕ ಪ್ರಶಸ್ತಿಗೆ ಭಾಜನರಾದ ಸುಬ್ರಹ್ಮಣ್ಯ ನಾರಾಯಣ ಬಾಡೂರು (ಬಾನಾಸು) ಅವರಿಗೆ ಹುಟ್ಟೂರ ಗೌರವ ಪ್ರಶಸ್ತಿ ಕಾರ್ಯಕ್ರಮವು ದಿನಾಂಕ 01-12-2023 ರಂದು ಕಾಸರಗೋಡಿನ ಪದ್ಮಗಿರಿ ಕಲಾ ಕುಟೀರದಲ್ಲಿ ನಡೆಯಿತು.

    ಹುಟ್ಟೂರ ಗೌರವ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಎಡನೀರು ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರು ಮಾತನಾಡಿ “ಕಾಸರಗೋಡಿನ ಕನ್ನಡ ಪರ ಸಂಘಟನೆಗಳು ಕೈ ಜೋಡಿಸಿದರೆ ಕಾಸರಗೋಡಿನ ಕನ್ನಡಿಗರ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಬಹುದು. ಸುಬ್ರಹ್ಮಣ್ಯ ಬಾಡೂರು ಅವರ ರಾಷ್ಟ್ರ ಮಟ್ಟದ ಸಾಧನೆ ಕಾಸರಗೋಡಿನ ಕನ್ನಡಿಗರಿಗೆಲ್ಲ ಕೀರ್ತಿ ತಂದಿದೆ.” ಎಂದರು.

    ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಖ್ಯಾತ ಚಲನಚಿತ್ರ ಹಾಗೂ ರಂಗಭೂಮಿ ನಟಿಯಾದ ಶಾಸಕಿ ಉಮಾಶ್ರೀ ಮಾತನಾಡಿ “ಕಳೆದ ಐದು ದಶಕಗಳಿಂದ ಸಿನಿಮಾ ಕ್ಷೇತ್ರದ ಒಳ ಹೊರಗನ್ನು ಅತೀ ಹತ್ತಿರದಿಂದ ಬಲ್ಲ ಬಾನಾಸು ಅವರ ಅನುಭವಗಳನ್ನು ದಾಖಲಿಸಿ ಪುಸ್ತಕರೂಪವನ್ನು ಹೊರ ತರಬೇಕು. ಅದರಿಂದ ಮುಂದಿನ ತಲೆಮಾರಿನವರಿಗೆ ಕನ್ನಡ ಚಿತ್ರರಂಗದ ಮಾಹಿತಿಗಳನ್ನು ನೀಡಿದಂತಾಗುತ್ತದೆ. ಒಬ್ಬ ಸೃಜನಶೀಲ, ಸೌಮ್ಯ ಸ್ವಭಾವದ ಪ್ರಶ್ನಿಸುವ ಗುಣಗಳುಳ್ಳ ಪ್ರಾಮಾಣಿಕ ಪತ್ರಕರ್ತ, ನನ್ನ ಗೆಳೆಯ ಅನ್ನುವುದೇ ನನಗೆ ಅಭಿಮಾನ.” ಎಂದರು.

    ಕಾಸರಗೋಡಿನ ಶಾಸಕ ಎನ್.ಎ.ನೆಲ್ಲಿಕುನ್ನು ಮಾತನಾಡಿ “ಬಾನಾಸು ಕಾಸರಗೋಡಿಗೆ ಅಭಿಮಾನ ತರುವ ಕೆಲಸ ಮಾಡಿದ್ದಾರೆ. ಅವರು ಮತ್ತಷ್ಟು ಪ್ರಶಸ್ತಿ ಗಳಿಸಲಿ.” ಎಂದು ಶುಭ ಹಾರೈಸಿದರು. ರಾಷ್ಟ್ರ ಪ್ರಶಸ್ತಿ ವಿಜೇತ ನಟ ಶಿವಧ್ವಜ ಶೆಟ್ಟಿ ಮಾತನಾಡಿ “ಬಾನಾಸು ಅವರು ನನ್ನ ಸಿನಿಮಾ ರಂಗದ ಪ್ರವೇಶದ ಸಂದರ್ಭದಲ್ಲಿ ಗುರುಸ್ಥಾನದಲ್ಲಿದ್ದು ಬೆನ್ನು ತಟ್ಟಿ ಆಶೀರ್ವದಿಸಿ ತಿದ್ದಿದವರು. ಅವರಿಗೆ ಸಿನಿಮಾ ಕ್ಷೇತ್ರದ ಬಗ್ಗೆ ಇರುವ ಮಾಹಿತಿ ನಿಜಕ್ಕೂಆಶ್ಚರ್ಯ ಎನಿಸುತ್ತದೆ. ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ನಿರಂತರವಾಗಿ ಭಾಗವಹಿಸುತ್ತಿರುವ ಅವರು ಕನ್ನಡ ಚಿತ್ರರಂಗದ ಎನ್ಸೈಕ್ಲೋಪೀಡಿಯಾ.” ಎಂದರು. ಮೈಸೂರಿನ ಖ್ಯಾತ ಪತ್ರಕರ್ತ ರವೀಂದ್ರ ಜೋಶಿ ಅವರು ಮಾತನಾಡಿ “ಆಂದೋಲನ ಪತ್ರಿಕೆಯ ವರದಿಗೆ ರಾಷ್ಟ್ರ ಪ್ರಶಸ್ತಿ ಬಂದ ವಿವರವನ್ನು ತಿಳಿಸಿದರು.”

    ಕಾಸರಗೋಡಿನ ಕನ್ನಡ ಪರ 25 ಸಂಸ್ಥೆಗಳು ಬಾನಾಸು ಅವರಿಗೆ ಶಾಲು, ಹಾರ ನೀಡಿ ಗೌರವಿಸಿದರು. ರಂಗ ಚಿನ್ನಾರಿ ಸಂಸ್ಥೆಯ ಪರವಾಗಿ ಪೇಟ, ಶಾಲು, ಫಲ, ಸನ್ಮಾನ ಪತ್ರ, ಸ್ಮರಣಿಕೆಗಳನ್ನು ನೀಡಿ ಸನ್ಮಾನಿಸಲಾಯಿತು.
    ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಸುಬ್ರಹ್ಮಣ್ಯ ಬಾಡೂರು “ಚಿತ್ರರಂಗದಲ್ಲಿ ತಾನು ನಡೆದು ಬಂದ ದಾರಿಯನ್ನು ಹೇಳಿ, ‘ಹುಟ್ಟೂರ ಗೌರವ’ ನೀಡಿದ ಎಲ್ಲರಿಗೂ ಕೃತಜ್ಞತೆಗಳನ್ನು ಹೇಳಿದರು. ಕಾರ್ಯಕ್ರಮದ ಮುಂಚಿತವಾಗಿ ಅಂತರರಾಷ್ಟ್ರೀಯ ಗಾಯಕ ಶ್ರೀ ರವೀಂದ್ರ ಪ್ರಭು ಅವರಿಂದ ಭಕ್ತಿ ಭಾವಗೀತೆಗಳ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕೀ ಬೋರ್ಡ್ ನಲ್ಲಿ ಪುರುಷೋತ್ತಮ ಕೊಪ್ಪಳ ಹಾಗೂ ತಬಲಾದಲ್ಲಿ ರಾಜೇಶ್ ಭಾಗವತ್ ಸಾಥ್ ನೀಡಿದರು.
    ನಾರಿ ಚಿನ್ನಾರಿಯ ಅಧ್ಯಕ್ಷೆ ಸವಿತಾ ಟೀಚರ್, ಕಾರ್ಯದರ್ಶಿ ದಿವ್ಯಾಗಟ್ಟಿ ಪರಕ್ಕಿಲ, ಕೋಶಾಧಿಕಾರಿ ವೀಣಾ ಅರುಣ್ ಶೆಟ್ಟಿ, ಸರ್ವಮಂಗಳ, ‘ಸ್ವರ ಚಿನ್ನಾರಿ’ ಘಟಕದ ಗೌರವಾಧ್ಯಕ್ಷರಾದ ಶ್ರೀಕೃಷ್ಣಯ್ಯ ಅನಂತಪುರ, ಅಧ್ಯಕ್ಷರಾದ ಪುರುಷೋತ್ತಮ ಕೊಪ್ಪಳ,, ಜನಾರ್ದನ ಅಣಂಗೂರು, ಉದಯ ಮನ್ನಿಪ್ಪಾಡಿ ಹಾಗೂ ಮನೋಹರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ರಂಗ ಚಿನ್ನಾರಿ ನಿರ್ದೇಶಕ ಹಾಗೂ ಕಾರ್ಯಕ್ರಮ ಸಂಯೋಜಕ ಕಾಸರಗೋಡು ಚಿನ್ನಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಕಿಶೋರ್ ಪೆರ್ಲ ಅವರು ಪ್ರಾರ್ಥನೆ ಹಾಡಿದರು. ರಂಗ ಚಿನ್ನಾರಿ ನಿರ್ದೇಶಕರಾದ ಕೋಳಾರು ಸತೀಶ್ಚಂದ್ರ ಭಂಡಾರಿ ಅವರು ಧನ್ಯವಾದವಿತ್ತರು.

    Share. Facebook Twitter Pinterest LinkedIn Tumblr WhatsApp Email
    Previous Articleಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ‘ಭಜನ ರಂಗ್’ ಕಾರ್ಯಕ್ರಮ
    Next Article ಐವರ್ನಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯಕ್ಷಗಾನ ನಾಟ್ಯ ತರಬೇತಿ ಶಿಬಿರ ಉದ್ಘಾಟನೆ
    roovari

    Add Comment Cancel Reply


    Related Posts

    ವಾರ್ಷಿಕ ಸಂಭ್ರಮದಲ್ಲಿ ಯಕ್ಷಗಾನ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ

    December 27, 2025

    ಸ್ವರ ಸಾಮ್ರಾಟ್‌ ವಿದ್ವಾನ್ ಅಭಿರಾಮ್‌ ಭರತವಂಶಿ ರಾಜ್ಯ ಪ್ರಶಸ್ತಿ ಪ್ರದಾನ

    December 27, 2025

    ತಬಲಾ ವಾದಕ ಡಾ. ಸತೀಶ್ ಹಂಪಿಹೊಳಿಯವರಿಗೆ ‘ವಿಪ್ರನಾದ ಸಾಧಕ’ ಬಿರುದು ಪ್ರದಾನ

    December 27, 2025

    ಸುನಂದಾ ಬೆಳಗಾಂವಕರ ಕಾದಂಬರಿ ಪ್ರಶಸ್ತಿ – 2025 | ಕೊನೆಯ ದಿನಾಂಕ ಜನವರಿ 31

    December 26, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.