ಮಂಗಳೂರು : ಮಂಗಳೂರಿನ ತುಳುಕೂಟ ಮತ್ತು ಸರಯೂ ಬಾಲಯಕ್ಷ ವೃಂದ ಜಂಟಿಯಾಗಿ ಆಯೋಜಿಸಿರುವ ದಿ. ದಾಮೋದರ ನಿಸರ್ಗ ಸಂಸ್ಮರಣೆ ಹಾಗೂ ತುಳು ತಾಳಮದ್ದಳೆ ಸಪ್ತಾಹದಲ್ಲಿ ದಿನಾಂಕ 08 ಡಿಸೆಂಬರ್ 2025ರಂದು ಕದ್ರಿ ನವನೀತ ಶೆಟ್ಟಿಯವರ ಸಂಚಾಲಕತ್ವದ 103ನೇ ವರ್ಷದಲ್ಲಿರುವ ಶ್ರೀ ವಾಗೀಶ್ವರೀ ಕಲಾವರ್ಧಕ ಯಕ್ಷಗಾನ ಮಂಡಳಿಯನ್ನು ಗೌರವಿಸಲಾಯಿತು.
ಮರೋಳಿ ಸೂರ್ಯನಾರಾಯಣ ದೇವಳದ ಅಧ್ಯಕ್ಷರಾದ ಚಂದ್ರನಾಥ ಅತ್ತಾವರ, ಗರೋಡಿಯ ಟ್ರಸ್ಟಿ ದಿನೇಶ್ ಅಂಚನ್, ಜಗದೀಶ್ ಗರೋಡಿ, ತುಳು ಕೂಟದ ಅಧ್ಯಕ್ಷೆ ಹೇಮಾ ದಾಮೋದರ ನಿಸರ್ಗ, ವಾಗೇಶ್ವರಿಯ ಶಿವಪ್ರಸಾದ ಪ್ರಭು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಬಳಿಕ ಶ್ರೀ ವಾಗೀಶ್ವರೀ ಕಲಾವರ್ಧಕ ಯಕ್ಷಗಾನ ಮಂಡಳಿಯ ಸದಸ್ಯರಿಂದ ‘ತುಳುನಾಡ ಬಲ್ಯೇಂದ್ರೆ‘ ತಾಳಮದ್ದಲೆ ಪ್ರಸ್ತುತಗೊಂಡಿತು.
