Subscribe to Updates

    Get the latest creative news from FooBar about art, design and business.

    What's Hot

    ಗಮಕ ಕಲಾ ಪರಿಷತ್ತು ಪುತ್ತೂರು ತಾಲೂಕು ಘಟಕದಿಂದ ಜಿಲ್ಲಾ ಮಟ್ಟದ ಗಮಕ ವಾಚನ ಸ್ಪರ್ಧೆ

    October 6, 2025

    ಶ್ರೀ ವಿಶ್ವೇಶತೀರ್ಥ ಸಭಾಂಗಣದಲ್ಲಿ ಭೈರಪ್ಪ ನಮನ, ಗಾಯನ, ವಾದನ ಕಾರ್ಯಕ್ರಮ

    October 6, 2025

    ಶಕ್ತಿನಗರದ ಕಲಾಂಗಣನಲ್ಲಿ ಅಂತರ ರಾಷ್ಟ್ರೀಯ ಸಂಗೀತ ದಿನ ಮತ್ತು ತಿಂಗಳ ಸರಣಿ ಕಾರ್ಯಕ್ರಮ

    October 6, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಧರ್ಮಸ್ಥಳದ ದೇಗುಲದಲ್ಲಿ ಹೂವಿನಕೋಲು ಅಭಿಯಾನ
    Yakshagana

    ಧರ್ಮಸ್ಥಳದ ದೇಗುಲದಲ್ಲಿ ಹೂವಿನಕೋಲು ಅಭಿಯಾನ

    October 6, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಧರ್ಮಸ್ಥಳ : ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆಯ ಹೂವಿನಕೋಲು ಅಭಿಯಾನವು ದಿನಾಂಕ 04 ಅಕ್ಟೋಬರ್ 2025ರಂದು ಧರ್ಮಸ್ಥಳದ ದೇಗುಲದಲ್ಲಿ ನಡೆಯಿತು.

    ಈ ಅಭಿಯಾನವನ್ನು ಉದ್ದೇಶಿಸಿ ಮಾತನಾಡಿದ ಧರ್ಮಸ್ಥಳ ದೇಗುಲದ ಶ್ರೀಮತಿ ಹೇಮಾವತಿ ವೀರೇಂದ್ರ ಹೆಗ್ಗಡೆಯವರು “ನವರಾತ್ರಿಯ ಆಚರಣೆಯನ್ನು ವಿವಿಧ ಪ್ರದೇಶಗಳಲ್ಲಿ ವಿಭಿನ್ನವಾಗಿ ಆಚರಿಸಲಾಗುತ್ತಿದೆ. ಯಶಸ್ವಿ ಕಲಾವೃಂದ ಹಳೆಯ ಯಕ್ಷ ಕಲಾ ಪ್ರಕಾರವಾದ ಹೂವಿನಕೋಲನ್ನು ನವರಾತ್ರಿಯ ಸಂದರ್ಭದಲ್ಲಿ ಕರಾವಳಿಯುದ್ದಕ್ಕೂ ಮನೆ ಮನೆಗಳಿಗೆ ತಂಡವನ್ನು ಕೊಂಡಯ್ದು ಮನೆಯ ಮನಗಳಿಗೆ ಹರಸಿ, ಪ್ರದರ್ಶಿಸುವ ಕಲೆ ಚಿತ್ತಾಕರ್ಷಕವಾದದ್ದು. ಕಲಿಕೆಯ ಜೊತೆಗೆ ಪೌರಾಣಿಕ ಕಥೆಯ ಸ್ತುತಿ ಎನ್ನುವುದು ಮನೆಗಳಲ್ಲಿ ಪಸರಿಸುವ ಕಾರ್ಯ ಹೆಚ್ಚು ಆಪ್ತವಾಗಿದೆ. ಮಕ್ಕಳ ನಿರರ್ಗಳ ಮಾತುಗಾರಿಕೆ ಹೂವಿನಕೋಲಿನಂತಹ ಕಲಾ ಪ್ರಕಾರದಲ್ಲಿ ಬೆಳೆದಿದೆ ಎನ್ನಬಹುದು. ಈ ತಂಡದಲ್ಲಿ ಭಾಗವಹಿಸಿದ ಮಕ್ಕಳಿಗೆ ಉಜ್ವಲ ಭವಿಷ್ಯವಿದೆ” ಎಂದು ಅಭಿಪ್ರಾಯಪಟ್ಟರು.

    “ಪ್ರದರ್ಶನದ ಜೊತೆ ಜೊತೆಗೆ ಕಲಿಕೆಯನ್ನು ಒಳಗೊಂಡ ಈ ಪ್ರಕಾರ ಮಕ್ಕಳು ಸಾಂಸ್ಕೃತಿಕ ಕ್ಷೇತದಲ್ಲಿ ಬೆಳೆಯುವುದಕ್ಕೆ ಹೆಚ್ಚು ಪೂರಕ. ಮೊಬೈಲ್ ಯುಗದಲ್ಲಿಯೂ ಗಮನ ಸೆಳೆಯುವ ಈ ಕಲೆಯನ್ನು ಸಮಾಜದ ಗಣ್ಯರು ಪೋಷಿಸಬೇಕು” ಎಂದು ಶ್ರೀಮತಿ ಸುಪ್ರಿಯಾ ಹರ್ಷೆಂದ್ರ ಕುಮಾರ್ ಅಭಿಪ್ರಾಯಪಟ್ಟರು. ಅನಂತ ಪದ್ಮನಾಭ ಬೆಂಗಳೂರು, ಚಂದಿಕಾ ಹೆಬ್ಬಾರ್, ನೀಲಕಂಠ ಉಪಾಧ್ಯಾಯ. ಭಾಗ್ಯಲಕ್ಷ್ಮಿ ವೈದ್ಯ, ರಾಹುಲ್ ಕುಂದರ್ ಕೋಡಿ ಕನ್ಯಾಣ, ಪಂಚಮಿ ವೈದ್ಯ, ಆರಭಿ ಹೆಗಡೆ, ಪರಿಣಿತ ವೈದ್ಯ ಉಪಸ್ಥಿತರಿದ್ದರು.

    baikady roovari yakshagana
    Share. Facebook Twitter Pinterest LinkedIn Tumblr WhatsApp Email
    Previous Articleಅಕಾಡೆಮಿ ಸಭಾಂಗಣದಲ್ಲಿ ‘ಕಾವ್ಯಾಂ ವ್ಹಾಳೊ-7’ ಕೊಂಕಣಿ ಕವಿಗೋಷ್ಟಿ
    Next Article 2025ನೇ ಸಾಲಿನ ‘ಕೇಶವ ಪ್ರಶಸ್ತಿ’ಗೆ ಹಿರಿಯ ಸಾಹಿತಿ ಡಾ. ರಮಾನಂದ ಬನಾರಿ ಆಯ್ಕೆ
    roovari

    Add Comment Cancel Reply


    Related Posts

    ಗಮಕ ಕಲಾ ಪರಿಷತ್ತು ಪುತ್ತೂರು ತಾಲೂಕು ಘಟಕದಿಂದ ಜಿಲ್ಲಾ ಮಟ್ಟದ ಗಮಕ ವಾಚನ ಸ್ಪರ್ಧೆ

    October 6, 2025

    ಶ್ರೀ ವಿಶ್ವೇಶತೀರ್ಥ ಸಭಾಂಗಣದಲ್ಲಿ ಭೈರಪ್ಪ ನಮನ, ಗಾಯನ, ವಾದನ ಕಾರ್ಯಕ್ರಮ

    October 6, 2025

    ಶಕ್ತಿನಗರದ ಕಲಾಂಗಣನಲ್ಲಿ ಅಂತರ ರಾಷ್ಟ್ರೀಯ ಸಂಗೀತ ದಿನ ಮತ್ತು ತಿಂಗಳ ಸರಣಿ ಕಾರ್ಯಕ್ರಮ

    October 6, 2025

    ಕನ್ನಡದ ವಿಶಿಷ್ಟ ಬರಹಗಾರ ಮೊಗಳ್ಳಿ ಗಣೇಶ್‌ ನಿಧನ

    October 6, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.