ಕೋಲಾರ : ಆದಿಮ ಸಾಂಸ್ಕೃತಿಕ ಕೇಂದ್ರ ಇದರ ವತಿಯಿಂದ ‘ಹುಣ್ಣಿಮೆ ಹಾಡು 218’ ಕಾರ್ಯಕ್ರಮವನ್ನು ದಿನಾಂಕ 11 ಜೂನ್ 2025ರಂದು ಸಂಜೆ 7-00 ಗಂಟೆಗೆ ಆದಿಮದಲ್ಲಿ ಆಯೋಜಿಸಲಾಗಿದೆ. ಇದೇ ಸಂದರ್ಭದಲಿ ಸಂಗೀತ ಮಾಂತ್ರಿಕ ಇಸ್ಮಾಯಿಲ್ ಗೊನಾಳ್ ಇವರ ಹೆಸರಿನಲ್ಲಿ ನೀಡುವ ‘ಇಸ್ಮಾಯಿಲ್ ಗೊನಾಳ್ ಪ್ರಶಸ್ತಿ’ ಪ್ರದಾನ ಮಾಡಲಾಗುವುದು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆದಿಮ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷರಾದ ಎನ್. ಮುನಿಸ್ವಾಮಿ ಇವರು ವಹಿಸಲಿದ್ದು, ಕೋಲಾರ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಇವರು ಪ್ರಶಸ್ತಿ ಪ್ರದಾನ ಮಾಡಲಿರುವರು. ಸಾಹಿತಿ ಶ್ರೀ ಲಕ್ಷ್ಮೀಪತಿ ಕೋಲಾರ ಇವರು ಪ್ರಶಸ್ತಿ ಪುರಸ್ಕೃತರ ಕುರಿತು ಮಾತನಾಡಲಿದ್ದು, ಹೈದ್ರಾಬಾದ್ ಸುರಭಿ ನಾಟಕ ರಂಗಭೂಮಿ ಸಂಸ್ಥೆಯ ಜಯಾನಂದ್ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ‘ಮಹಾಭಾರತ ದೃಶ್ಯಾವಳಿ’ ಪೌರಾಣಿಕ ನಾಟಕ ಪ್ರಸ್ತುತಗೊಳ್ಳಲಿದೆ.