ಮೂಡುಬಿದಿರೆ: ರೆಡ್ಕ್ರಾಸ್ ಘಟಕ ಮತ್ತು ಆಳ್ವಾಸ್ ಆಯುರ್ವೇದ ಕಾಲೇಜು ಹಳೆ ವಿದ್ಯಾರ್ಥಿ ಸಂಘ (ಸಂವಾಹಿನಿ) ಆಶ್ರಯದಲ್ಲಿ ‘ರಕ್ತದಾನದ ಮಹತ್ವ ಸಾರುವ’ ಸಣ್ಣ ಕಥಾ ಸ್ಪರ್ಧೆಯನ್ನು ಮೂಡುಬಿದಿರೆ ತಾಲೂಕು ವ್ಯಾಪ್ತಿಯವರಿಗಾಗಿ ಏರ್ಪಡಿಸಲಾಗಿದೆ. ಸ್ವತಂತ್ರ ಕಥೆ ಗಳನ್ನು 30 ಜುಲೈ 2025ರ ಮುನ್ನ, ವಿಳಾಸ ಉಲ್ಲೇಖಿತ ಆಧಾರ್ ಪ್ರತಿ, ವಿದ್ಯಾರ್ಥಿಗಳಾದರೆ ಸಂಸ್ಥೆಯ ಗುರುತಿನ ಚೀಟಿ ಪ್ರತಿ ಸಹಿತ ಅಧ್ಯಕ್ಷರು, ಸಂವಾಹಿನಿ – ರೆಡ್ಕ್ರಾಸ್ ಕಥಾ ಸ್ಪರ್ಧೆ, ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು, ವಿದ್ಯಾ ಗಿರಿ, ಮೂಡುಬಿದಿರೆ ಇಲ್ಲಿಗೆ ಕಳುಹಿಸಬಹುದು.