Subscribe to Updates

    Get the latest creative news from FooBar about art, design and business.

    What's Hot

    ಕೊಲ್ಯದ ನಾಟ್ಯನಿಕೇತನದಲ್ಲಿ ‘ನಾಟ್ಯಮೋಹನ ನವತ್ಯುತ್ಸವ’ – 18 | ಜೂನ್ 18

    June 17, 2025

    ವಿಶೇಷ ಲೇಖನ – ಶಿಕ್ಷಣ ತಜ್ಞ, ಸಂಸ್ಕೃತಿ ಚಿಂತಕ ಡಾ. ಜಿ. ರಾಮಕೃಷ್ಣ  

    June 17, 2025

    ‘ಪೆನ್ ಟು ಪ್ರೀಮಿಯರ್’ನಿಂದ ಮಹಿಳೆಯರಿಗಾಗಿ ಸಣ್ಣ ಕಥೆಗಳ ಸ್ಪರ್ಧೆ | ಆಗಸ್ಟ್ 31 ಕೊನೆಯ ದಿನ

    June 17, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಉದ್ಘಾಟನೆಗೊಂಡ ಪುತ್ರಕಾಮೇಷ್ಠಿ ಯಕ್ಷಗಾನ ತಾಳಮದ್ದಳೆ
    Kannada

    ಉದ್ಘಾಟನೆಗೊಂಡ ಪುತ್ರಕಾಮೇಷ್ಠಿ ಯಕ್ಷಗಾನ ತಾಳಮದ್ದಳೆ

    May 27, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಡಾ. ದಿನಕರ ಎಸ್. ಪಚ್ಚನಾಡಿ ದಂಪತಿ ಸಂತಾನ ಪ್ರಾಪ್ತಿಗಾಗಿ ಹೊತ್ತ ಹರಕೆಯ ಫಲಶ್ರುತಿಗೆ ಹಮ್ಮಿಕೊಂಡ ಪುತ್ರಕಾಮೇಷ್ಠಿ ಯಕ್ಷಗಾನ ತಾಳಮದ್ದಳೆ ಸಪ್ತಾಹದ ಉದ್ಘಾಟನಾ ಸಮಾರಂಭವು ದಿನಾಂಕ 11 ಮೇ 2025ರಂದು ಮಂಗಳೂರಿನ ಕುಳಾಯಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆವರಣದಲ್ಲಿ ನಡೆಯಿತು.
    ಸಪ್ತಾಹವನ್ನು ಉದ್ಘಾಟಿಸಿದ ಶ್ರೀರಾಮಕೃಷ್ಣ ಮಠ ಮಂಗಳೂರು ಇದರ ಅಧ್ಯಕ್ಷರಾದ ಪರಮಪೂಜ್ಯ ಸ್ವಾಮಿ ಜಿತಕಾಮಾಂದಜೀ ಮಹಾರಾಜ್ ಮಾತನಾಡಿ “ಭಕ್ತಿಯೇ ಬದುಕಿನ ಶಕ್ತಿ, ಅದೇ ಒಂದು ನಂಬಿಕೆ. ಸೇವೆಯೇ ವಿಕಾಸಕ್ಕೆ ಪೂರಕವಾಗಿರುತ್ತದೆ. ಜೀವನದ ನಡವಳಿಕೆಯಲ್ಲಿ ಇರಬೇಕಾದುದು ಶ್ರಧ್ದೆ. ಶ್ರಧ್ದೆ ಮತ್ತು ವಿಶ್ವಾಸವೇ ಯಶಸ್ಸಗೆ ಕಾರಣ” ಎಂದು ನುಡಿದರು.
    ಅಷ್ಟ ದಂಪತಿ ಸಂಮಾನದ ನಿಮಿತ್ತ, ಶ್ರೀಮತಿ ಸುಚೇತಾ ಜೋಷಿ ಅವರೊಂದಿಗೆ ಸಂಮಾನ ಸ್ವೀಕರಿಸಿದ ಖ್ಯಾತ ವಿದ್ವಾಂಸರಾದ ಡಾ. ಎಂ. ಪ್ರಭಾಕರ ಜೋಷಿ ಮಾತನಾಡಿ “ಯಕ್ಷಗಾನದ ಮೂಲಕ ಹರಕೆ ಹೇಳುವುದು ಹಿಂದಿನಿಂದಲೂ ನಡೆದು ಬಂದ ಕ್ರಮ. ದೇವೀ ಮಹಾತ್ಮೆ ಹೆಚ್ಚು ಹರಕೆಯ ಆಟವಾಗುತ್ತಿದೆ. ಸಂತಾನಕ್ಕಾಗಿ ಪುತ್ರಕಾಮೇಷ್ಠಿ ಹಿಂದೆ ನಡೆದಿದೆ. ಈಗ ನಡೆಯುವ ಹರಕೆ ತಾಳಮದ್ದಳೆ ಸಪ್ತಾಹ ವಿಶಿಷ್ಟವಾದುದು ಇದಕ್ಕೆ ಹೆಚ್ಚು ಮನ್ನಣೆ ದೊರೆಯಬೇಕು” ಎಂದರು.
    ಡಾ. ಎನ್. ನಾರಾಯಣ ಶೆಟ್ಟಿ ಶಿಮಂತೂರು, ಛಾಂದಸರು, ಸಂಶೋಧಕರು ಹಾಗೂ ಪ್ರೊ. ಅಮೃತ ಸೋಮೇಶ್ವರ ಇವರ ಪುಣ್ಯಸ್ಮರಣೆಯ ಸಂಸ್ಮರಣ ಭಾಷಣವನ್ನು ಪೊಸಕುರಲ್ ಪತ್ರಿಕೆಯ ನಿರ್ದೇಶಕರಾದ ಶ್ರೀ ವಿದ್ಯಾಧರ ಶೆಟ್ಟಿ ನೆರವೇರಿಸಿದರು. ಸರಯೂ ಬಾಲ ಯಕ್ಷ ವೃಂದ (ರಿ.) ಕೋಡಿಕಲ್ ಇದರ ನಿರ್ದೇಶಕರಾದ ಶ್ರೀ ರವಿ ಅಲೆವೂರಾಯ ವರ್ಕಾಡಿ ಸಂಮಾನಿತರ ಅಭಿನಂದನ ಭಾಷಣ ಮಾಡಿದರು.
    ಶ್ರೀಮತಿ ಜಯಲಕ್ಷ್ಮೀ, ಕ್ಷೇತ್ರದ ಅನುವಂಶಿಕ ಮೊಕ್ತೇಸರರಾದ ಶ್ರೀ ಕೆ. ಕೃಷ್ಣ ಹೆಬ್ಬಾರ್ ಕುಳಾಯಿ , ಶ್ರೀಮತಿ ವಿದ್ಯಾ, , ಸಾಹಿತಿ ಗಳಾದ ಶ್ರೀ ಭಾಸ್ಕರ ರೈ ಕುಕ್ಕುವಳ್ಳಿ, ಶ್ರೀಮತಿ ದೇವಿಕಾ, ವಾಗ್ಮಿ ಶ್ರೀ ಸರ್ಪಂಗಳ ಈಶ್ವರ ಭಟ್, ಶ್ರೀಮತಿ ರೇಷ್ಮಾ, ಖ್ಯಾತ ಗಾಯಕರಾದ ಶ್ರೀ ತೋನ್ಸೆ ಪುಷ್ಕಳ್ ಕುಮಾರ್, ಶ್ರೀಮತಿ ವಸುಧಾ ಶ್ರೀ ವಾಸುದೇವ ಹೆಬ್ಬಾರ್ ಕುಳಾಯಿ, ಪ್ರಭೃತಿ, ಸಮಾಜ ಸೇವಕರಾದ ಶ್ರೀಮತಿ ವಂದನ ಶ್ರೀ ರಾಮ ಅಮೀನ್ ಪಚ್ಚನಾಡಿ, ಧಾರ್ಮಿಕ ಸೇವಕರಾದ ಶ್ರೀಮತಿ ಸೀತಾ ಶ್ರೀ ಚಂದ್ರಶೇಖರ ಕುಪ್ಪೆಪದವು ಇವರನ್ನು ಸಂಮಾನಿಸಲಾಯಿತು.
    ಧಾರ್ಮಿಕ ಮುಂದಾಳು ಶ್ರೀ ಸದಾಶಿವ ಎಂ. ತಾಳಮದ್ದಳೆಯ ಜ್ಯೋತಿ ಬೆಳಗಿಸಿದರು. ಶ್ರೀ ವಿಷ್ಣುಮೂರ್ತಿ ಯಕ್ಷಗಾನ ಮಂಡಳಿಯ ಸಂಚಾಲಕರಾದ ಶ್ರೀ ವಾಸುದೇವ ಆಚಾರ್ಯ ಕುಳಾಯಿ, ಹವ್ಯಾಸಿ ಬಳಗ ಕದ್ರಿ (ರಿ.) ಮಂಗಳೂರು ಇದರ ಸಂಚಾಲಕರಾದ ಶ್ರೀ ಶರತ್‌ಕುಮಾರ್ ಕದ್ರಿ, ‘ಜ್ಞಾನಾಮೃತ’ ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಲಿಂಗಪ್ಪ ಸೀತಾದೇವು ಮುಂತಾದವರು ಅಭ್ಯಾಗತರಾಗಿ ಆಗಮಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶ್ರೀಮತಿ ಶೋಭಾ ವಿಶ್ವನಾಥ್, ಶ್ರೀಮತಿ ದೇವಕಿ ಪಚ್ಚನಾಡಿ, ಶ್ರೀಮತಿ ಬಬಿತಾ ಉಪಸ್ಥಿತರಿದ್ದರು.
    ಪುತ್ರಕಾಮೇಷ್ಠಿ ಹರಕೆ ತಾಳಮದ್ದಲೆಯ ರಚನೆ ಮತ್ತು ನಿರ್ದೇಶನ ಮಾಡಿರುವ ಕಾರ್ಯಕ್ರಮದ ರುವಾರಿ ಡಾ. ದಿನಕರ ಎಸ್. ಪಚ್ಚನಾಡಿ ಗಣ್ಯರನ್ನು ಸ್ವಾಗತಿಸಿ ಪ್ರಸ್ತಾಪಿಸಿ, ಉಪನ್ಯಾಸಕ ಶ್ರೀ ಸುನಿಲ್ ಪಲ್ಲಮಜಲು ನಿರೂಪಿಸಿ, ರಂಜಿತ್ ಕುಳಾಯಿ ಧನ್ಯವಾದವಿತ್ತರು.

    baikady kannada roovari yakshagana
    Share. Facebook Twitter Pinterest LinkedIn Tumblr WhatsApp Email
    Previous Articleಉದ್ಘಾಟನೆಗೊಂಡ ‘ಚಿಗುರು’ ಮಕ್ಕಳ ವೃತ್ತಿಪರ ರಂಗಭೂಮಿ ಕಾರ್ಯಗಾರ
    Next Article ರಾಷ್ಟ್ರೀಯ ನಾಟ್ಯ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ಶಿಬಿರ
    roovari

    Add Comment Cancel Reply


    Related Posts

    ಕೊಲ್ಯದ ನಾಟ್ಯನಿಕೇತನದಲ್ಲಿ ‘ನಾಟ್ಯಮೋಹನ ನವತ್ಯುತ್ಸವ’ – 18 | ಜೂನ್ 18

    June 17, 2025

    ವಿಶೇಷ ಲೇಖನ – ಶಿಕ್ಷಣ ತಜ್ಞ, ಸಂಸ್ಕೃತಿ ಚಿಂತಕ ಡಾ. ಜಿ. ರಾಮಕೃಷ್ಣ  

    June 17, 2025

    ‘ಪೆನ್ ಟು ಪ್ರೀಮಿಯರ್’ನಿಂದ ಮಹಿಳೆಯರಿಗಾಗಿ ಸಣ್ಣ ಕಥೆಗಳ ಸ್ಪರ್ಧೆ | ಆಗಸ್ಟ್ 31 ಕೊನೆಯ ದಿನ

    June 17, 2025

    ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ (ರಿ.) ಕಾಸರಗೋಡು ಇದರ ಗೌರವ ಸಲಹೆಗಾರರಾಗಿ ದೀಪಕ್ ಪೆರ್ಮುದೆ ಆಯ್ಕೆ

    June 17, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.