ಕಾಂತಾವರ : ಯಕ್ಷಕಲಾರಂಗ(ರಿ.) ಕಾರ್ಕಳ ಮತ್ತು ಮಂಗಳೂರಿನ ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಸಹಯೋಗದೊಂದಿಗೆ ಯಕ್ಷ ಶಿಕ್ಷಣ ಅಭಿಯಾನ 2025/26 ಯೋಜನೆಯ ಮೂಲಕ ಕಲಿಕಾಸಕ್ತ ವಿದ್ಯಾರ್ಥಿಗಳಿಗಾಗಿ ನಡೆಸಲಾಗುವ ಉಚಿತ ಯಕ್ಷಗಾನ ನಾಟ್ಯ ತರಬೇತಿ ತರಗತಿ ದಿನಾಂಕ 25 ಜೂನ್ 2025ರಂದು ಆರಂಭಗೊಂಡಿತು.
ದೀಪ ಬೆಳಗಿಸಿ ನಾಟ್ಯ ತರಬೇತಿ ತರಗತಿಯನ್ನು ಉದ್ಘಾಟಿಸಿದ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಪ್ರಭಾಕರ ಕುಲಾಲ್ ಬೇಲಾಡಿ ಮಾತನಾಡಿ “ದೈಹಿಕವಾಗಿ ಹಾಗೂ ಮಾನಸಿಕವಾಗಿ ಆರೋಗ್ಯಪೂರ್ಣವಾದ ಕಲೆ ಯಕ್ಷಗಾನ” ಎಂದರು.
ಯಕ್ಷ ಕಲಾರಂಗ(ರಿ.) ಕಾರ್ಕಳ ಇದರ ಕಾರ್ಯದರ್ಶಿ ಶ್ರೀ ಮಹಾವೀರ ಪಾಂಡಿ ಯಕ್ಷ ಶಿಕ್ಷಣ ಅಭಿಯಾನದ ಬಗ್ಗೆ ಪ್ರಾಸ್ತಾವಿಕವಾಗಿ ಮಾತಾಡಿ ಇದರ ಮಹತ್ವದ ಬಗ್ಗೆ ಹೇಳಿದರು. ಯಕ್ಷಕಲಾರಂಗದ ಅಧ್ಯಕ್ಷರಾದ ಉದ್ಯಮಿ ಶ್ರೀ ವಿಜಯ ಶೆಟ್ಟಿ ಮಕ್ಕಳಿಗೆ ಶುಭ ಹಾರೈಸಿ ಯೋಜನೆಯ ಸದುಪಯೋಗ ಮಾಡಿಕೊಳ್ಳಿ ಎಂದು ತಿಳಿಸಿದರು. ಸಭೆಯ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ಶ್ರೀ ಕೆ. ಶ್ರೀಪತಿ ರಾವ್ ವಹಿಸಿದ್ದರು.
ಯಕ್ಷಗಾನ ನಾಟ್ಯ ಗುರುಗಳಾದ ಕೆ. ಧರ್ಮರಾಜ ಕಂಬಳಿ, ನಿವೃತ್ತ ಮುಖ್ಯ ಶಿಕ್ಷಕಿ ಶ್ಯಾಮಲಾ ಕುಮಾರಿ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಜಯಕರ ಕೋಟ್ಯಾನ್, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಶ್ರೀಮತಿ ಹರಿಣಿ, ಲಿಂಗಪ್ಪ ದೇವಾಡಿಗ, ನಾರಾಯಣ ಭಟ್ ವೇದಿಕೆಯಲ್ಲಿ ಉಪಸ್ಥಿತಿಯಲ್ಲಿದ್ದರು.
ಶಾಲಾ ಆಡಳಿತ ಮಂಡಳಿ ಸದಸ್ಯರು, ಹಳೆ ವಿದ್ಯಾರ್ಥಿಗಳು, ಶಾಲಾಭಿಮಾನಿಗಳು, ಹಿತೈಷಿಗಳು, ಪೋಷಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.
ಕು. ಗೀತಾ ದೇವಾಡಿಗ ಸ್ವಾಗತಿಸಿ, ಗೌರವ ಶಿಕ್ಷಕಿ ಶ್ರೀಮತಿ ಜ್ಯೋತಿ ಕಾರ್ಯಕ್ರಮದ ನಿರ್ವಹಿಸಿ, ಶ್ರೀಮತಿ ಚೇತನಾ ವಂದಿಸಿದರು. ಸಭಾಕರ್ಯಕ್ರಮದ ಬಳಿಕ ಯಕ್ಷ ಗುರು ಧರ್ಮರಾಜ ಕಂಬಳಿ ಯಕ್ಷಗಾನ ತರಗತಿ ನಡೆಸಿದರು.