Subscribe to Updates

    Get the latest creative news from FooBar about art, design and business.

    What's Hot

    ಪಿಲಿಕುಳದಲ್ಲಿ ಡಾ. ಹರಿಕೃಷ್ಣ ಪುನರೂರು ಅಭಿವಂದನ ಸಮಾರಂಭ

    May 12, 2025

    ಮಣಿ ಕೃಷ್ಣಸ್ವಾಮಿ ಅಕಾಡೆಮಿಯಿಂದ ಸಂಗೀತ ಕಾರ್ಯಾಗಾರ | ಮೇ 24 ಮತ್ತು 25

    May 12, 2025

    ಡಾ. ಸುಷ್ಮಾ ಎಸ್.ವಿ.ಯವರಿಗೆ ‘ಗೌರಿ ಸುಂದರ್’ ವಾರ್ಷಿಕ ಪ್ರಶಸ್ತಿ ಪ್ರದಾನ

    May 12, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ರಾಜಾಜಿ ನಗರದಲ್ಲಿ ಪುಸ್ತಕ ಮಳಿಗೆ ಆರಂಭೋತ್ಸವ ಹಾಗೂ ಪುಸ್ತಕ ಬಿಡುಗಡೆ
    Book Release

    ರಾಜಾಜಿ ನಗರದಲ್ಲಿ ಪುಸ್ತಕ ಮಳಿಗೆ ಆರಂಭೋತ್ಸವ ಹಾಗೂ ಪುಸ್ತಕ ಬಿಡುಗಡೆ

    February 8, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಆಶಾ ರಘು ಇವರು ಆರಂಭಿಸಿರುವ ಪುಸ್ತಕ ಮಳಿಗೆ ಉಪಾಸನ ಬುಕ್ಸ್ ಇದರ ಆರಂಭೋತ್ಸವವು ದಿನಾಂಕ 07 ಫೆಬ್ರವರಿ 2025ರಂದು ಬೆಂಗಳೂರಿನ ರಾಜಾಜಿ ನಗರದಲ್ಲಿ ಉದ್ಘಾಟನೆಗೊಂಡಿದ್ದು, ಸಾಹಿತ್ಯದ, ಧಾರ್ಮಿಕ, ಮಕ್ಕಳ ಮತ್ತು ಶೈಕ್ಷಣಿಕ ಪುಸ್ತಕಗಳು ಲಭ್ಯವಿರುತ್ತದೆ. ಇದೇ ಸಂದರ್ಭದಲ್ಲಿ ಆಶಾ ರಘು ಇವರ ‘ವಕ್ಷ ಸ್ಥಲ’ ಕಾದಂಬರಿ ಮತ್ತು ‘ಕೆಂಪು ದಾಸವಾಳ’ ಕಥಾ ಸಂಕಲನ ಎರಡು ಕೃತಿಗಳು ಲೋಕಾರ್ಪಣೆಗೊಂಡವು.

    ಉಪಾಸನ ಬುಕ್ಸ್ ನ ಆರಂಭೋತ್ಸವದಲ್ಲಿ ಪಾಲ್ಗೊಂಡ ನಟ, ರಂಗ ನಿರ್ದೇಶಕ ಶ್ರೀನಿವಾಸ ಪ್ರಭುರವರು ಮಾತನಾಡಿ “ಪುಸ್ತಕ ಸಂಸ್ಕೃತಿ ಎಷ್ಟು ವ್ಯಾಪಕವಾಗಿ ಬೆಳೆಯುವುದೋ ಅಷ್ಟು ಮಾನವ ಸಂಸ್ಕೃತಿ ಬೆಳೆಯುತ್ತದೆ. ಆ ನಿಟ್ಟಿನಲ್ಲಿ ಆಶಾ ರಘುರವರು ಒಂದು ಮಹತ್ವದ ಹೆಜ್ಜೆಯನ್ನು ಇಟ್ಟಿದ್ದಾರೆ” ಎಂದು ಅಭಿಪ್ರಾಯಪಟ್ಟರು.

    ಆಶಾ ರಘುರವರ ಕೃತಿ ಲೋಕಾರ್ಪಣೆಗೊಳಿಸಿದ ಶ್ರೀಮತಿ ರಂಜಿನಿ ಪ್ರಭು ಮಾತನಾಡಿ “ವಾಸ್ತವ-ಕಲ್ಪನೆ-ಅತಿಂದ್ರೀಯ-ದೈವೀಕ ಎಲ್ಲ ನೆಲೆಗಳ ಚಿತ್ರಣವನ್ನೂ ಏಕತ್ರಗೊಳಿಸಿ ಪ್ರತಿಮಾತ್ಮಕವಾಗಿ ಕಟ್ಟಿಕೊಡುವಲ್ಲಿ ಆಶಾ ರಘು ಇವರು ಯಶಸ್ವಿಯಾಗಿದ್ದಾರೆ. ಸ್ವಾರಸ್ಯಕರವಾಗಿ ಕಥಾನಕವನ್ನು ಕಟ್ಟಿಕೊಡುವುದರಲ್ಲಿ, ಭಾಷೆಯನ್ನು ಸಮರ್ಥವಾದ ವಾಹಕವಾಗಿಸುವಲ್ಲಿ ಆಶಾರವರು ಸಿದ್ಧಹಸ್ತರು” ಎಂದು ಅಭಿಪ್ರಾಯಪಟ್ಟರು.

    “ಪ್ರಕಾಶನ ಸಂಸ್ಥೆಗಳು ಯುವ ಬರಹಗಾರರ ಕೃತಿಗಳನ್ನು ಪ್ರಕಟಿಸಬೇಕು ಮತ್ತು ಪುಸ್ತಕ ಮಳಿಗೆಗಳಲ್ಲಿ ಯುವ ಬರಹಗಾರರ ಕೃತಿಗಳಿಗೆ ಯೋಗ್ಯ ಸ್ಥಳಾವಕಾಶ ಕಲ್ಪಿಸಿಕೊಟ್ಟು ಪ್ರೋತ್ಸಾಹಿಸಬೇಕು. ಅಂತಹ ಕೆಲಸವನ್ನು ಉಪಾಸನ ಬುಕ್ಸ್ ಮಾಡುತ್ತದೆ ಎಂಬ ಭರವಸೆ ಇದೆ” ಎಂದು ಪತ್ತೇದಾರಿ ಕಾದಂಬರಿಕಾರ ಶ್ರೀ ಕೌಶಿಕ್ ಕೂಡುರಸ್ತೆಯವರು ಪುಸ್ತಕ ಮಳಿಗೆಯ ಆರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

    “ದೊಡ್ಡ ಜಾಗದಲ್ಲಿ ಅರ್ಥವಿಲ್ಲದ ಕಾರ್ಯಕ್ರಮಕ್ಕಿಂತ ಸಣ್ಣ ಜಾಗದಲ್ಲಿ ಅರ್ಥಪೂರ್ಣ ಕಾರ್ಯಕ್ರಮ ಮೌಲಿಕವಾದದ್ದು. ಸ್ಥಳ ಚಿಕ್ಕದು ದೊಡ್ಡದು ಎನ್ನುವುದಕ್ಕಿಂತ ಅವರ ಹಿಂದೆ ಇರುವ ವ್ಯಕ್ತಿ ಯಾರು ಎನ್ನುವುದು ಮುಖ್ಯ” ಎಂದು ಮುಖ್ಯ ಅತಿಥಿಯಾಗಿದ್ದ ಕವಿ ಶ್ರೀ ವಾಸುದೇವ ನಾಡಿಗ್ ಅವರು ಅಭಿಪ್ರಾಯಪಟ್ಟರು.

    ಉಪಸ್ಥಿತರಿದ್ದ ಲೇಖಕಿ ಮತ್ತು ಪ್ರಕಾಶಕಿ ಶ್ರೀಮತಿ ಆಶಾ ರಘು ಇವರು ತಮ್ಮ ಕೃತಿಗಳ ಕುರಿತು ಹಾಗೂ ತಾವು ಆರಂಭಿಸಿರುವ ಪುಸ್ತಕ ಉದ್ಯಮದ ಕುರಿತು ಸಂತಸ ವ್ಯಕ್ತಪಡಿಸಿ, ಓದುಗರು ನನ್ನ ಕೃತಿಗಳಿಗೆ ತೋರುತ್ತಿರುವ ಪ್ರೀತಿಯನ್ನೇ ನನ್ನ ಹೊಸ ಪ್ರಯತ್ನಕ್ಕೂ ನೀಡುತ್ತಾರೆಂದು ನಂಬಿದ್ದೇನೆ ಎಂದು ಹೇಳಿದರು.

    Book release Literature
    Share. Facebook Twitter Pinterest LinkedIn Tumblr WhatsApp Email
    Previous Articleಕಾರ್ಕಳ ಬಯಲು ರಂಗಮಂದಿರದಲ್ಲಿ ‘ಮೈ ಫ್ಯಾಮಿಲಿ’ ಕನ್ನಡ ನಾಟಕ ಪ್ರದರ್ಶನ | ಫೆಬ್ರವರಿ 11
    Next Article ಡಾ. ವಸಂತಕುಮಾರ ಪೆರ್ಲರವರ ಐತಿಹಾಸಿಕ ತುಳು ಕೃತಿ ‘ಪುಳ್ಕೂರುದ ಬಾಚೆ’ ಲೋಕಾರ್ಪಣೆ
    roovari

    Add Comment Cancel Reply


    Related Posts

    ಪಿಲಿಕುಳದಲ್ಲಿ ಡಾ. ಹರಿಕೃಷ್ಣ ಪುನರೂರು ಅಭಿವಂದನ ಸಮಾರಂಭ

    May 12, 2025

    ಡಾ. ಸುಷ್ಮಾ ಎಸ್.ವಿ.ಯವರಿಗೆ ‘ಗೌರಿ ಸುಂದರ್’ ವಾರ್ಷಿಕ ಪ್ರಶಸ್ತಿ ಪ್ರದಾನ

    May 12, 2025

    ‘ಬಾಲ ಸಾಹಿತ್ಯ ಚಿಗುರು ಪುರಸ್ಕಾರ’ಕ್ಕಾಗಿ ‘ನಕ್ಷತ್ರ ಪಟಲ’ ಕೃತಿ ಆಯ್ಕೆ

    May 12, 2025

    ಡಾ. ಮಾಲತಿ ಶೆಟ್ಟಿ ಮಾಣೂರು ಇವರಿಗೆ ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿ ಪ್ರಧಾನ

    May 12, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.