Subscribe to Updates

    Get the latest creative news from FooBar about art, design and business.

    What's Hot

    ಖ್ಯಾತ ಸಾಹಿತಿ ಎಚ್. ಎಸ್. ವೆಂಕಟೇಶಮೂರ್ತಿ ನಿಧನ

    May 30, 2025

    ಬೇಸಿಗೆ ರಂಗ ಶಿಬಿರದ ವಿದ್ಯಾರ್ಥಿಗಳಿಂದ ‘ಆಷಾಢದ ಒಂದು ದಿನ’ ನಾಟಕ ಪ್ರದರ್ಶನ | ಮೇ 31

    May 30, 2025

    ಬೆಂಗಳೂರಿನ ವಾಡಿಯಾ ಸಭಾಂಗಣದಲ್ಲಿ ‘ಬೀಚಿ ರಸಾಯನ’ | ಮೇ 30

    May 29, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮೂಡುಬಿದಿರೆಯಲ್ಲಿ ಕನಕ ತತ್ತ್ವ ಚಿಂತನ ಪ್ರಚಾರೋಪನ್ಯಾಸ ಮಾಲಿಕೆ ಉದ್ಘಾಟನೆ
    Literature

    ಮೂಡುಬಿದಿರೆಯಲ್ಲಿ ಕನಕ ತತ್ತ್ವ ಚಿಂತನ ಪ್ರಚಾರೋಪನ್ಯಾಸ ಮಾಲಿಕೆ ಉದ್ಘಾಟನೆ

    September 5, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮೂಡುಬಿದಿರೆ : ಮಂಗಳೂರು ವಿಶ್ವವಿದ್ಯಾನಿಲಯ ಕನಕದಾಸ ಅಧ್ಯಯನ ಪೀಠ ಮತ್ತು ಕನಕದಾಸ ಸಂಶೋಧನಾ ಕೇಂದ್ರದ ವತಿಯಿಂದ ಶ್ರೀ ಧವಲಾ ಕಾಲೇಜು ಮೂಡಬಿದ್ರೆ ಕನ್ನಡ ವಿಭಾಗ ಇವರ ಸಹಯೋಗದೊಂದಿಗೆ 2024 -25ನೇ ಸಾಲಿನ ಕನಕ ತತ್ವ ಚಿಂತನ ಪ್ರಚಾರೋಪನ್ಯಾಸ ಮಾಲಿಕೆಯು ದಿನಾಂಕ 3 ಸೆಪ್ಟೆಂಬರ್ 2024ರಂದು ಮೂಡಬಿದ್ರೆಯ ಶ್ರೀ ಧವಲಾ ಕಾಲೇಜಿನಲ್ಲಿ ನಡೆಯಿತು.

    ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಮುನಿರಾಜ ರೆಂಜಾಳ ಇವರು ‘ಕನಕದಾಸರ ಕಾವ್ಯ : ರಸ ವಿನ್ಯಾಸ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡುತ್ತಾ “ಕಲಿಯೂ ಕವಿಯೂ ಆಗಿದ್ದ ಕನಕದಾಸರ ಕೀರ್ತನೆ ಮತ್ತು ಕಾವ್ಯಗಳು ಜನಸಾಮಾನ್ಯರಿಗೂ ತಲುಪಬಲ್ಲಷ್ಟು ಸರಳವೂ ಮತ್ತು ನವರಸಗಳಿಂದ ತುಂಬಿಕೊಂಡು ಆನಂದದಾಯಕವೂ ಆಗಿದೆ. ‘ಬಾಗಿಲನು ತೆರೆದು’ ಎಂಬ ಒಂದು ಕೀರ್ತನೆಯಲ್ಲಿಯೇ ಶೃಂಗಾರ, ಹಾಸ್ಯ, ಕರುಣ, ವೀರ, ಅದ್ಭುತ ರಸಗಳು ಕೂಡಿಕೊಂಡು ಅಪೂರ್ವವಾಗಿದೆ. ಮೋಹನ ತರಂಗಿಣಿ, ನಳಚರಿತ್ರೆಯಲ್ಲಿ ಶೃಂಗಾರ ರಸ, ಡೊಂಕು ಬಾಲದ ನಾಯಕರೇ, ಎಲ್ಲರೂ ಮಾಡುವುದು ಹೊಟ್ಟೆಗಾಗಿ ಕೀರ್ತನೆಗಳಲ್ಲಿ ಹಾಗೂ ರಾಮಧಾನ್ಯ ಚರಿತೆಯಲ್ಲಿ ಹಾಸ್ಯ ರಸ, ಕಾರ್ಕೋಟಕ ಪ್ರಸಂಗದಲ್ಲಿ ಭೀಭತ್ಸ, ಹರಿಭಕ್ತಿಸಾರದಲ್ಲಿ ಅದ್ಭುತ ರಸ, ಕೀರ್ತನೆಗಳ ಶೂರ್ಪನಖಿ, ಪೂತನಿ, ನರಕಾಸುರ ಮೊದಲಾದ ಪಾತ್ರಗಳ ನಿರೂಪಣೆಯಲ್ಲಿ ರೌದ್ರ ರಸ ಹೀಗೆ ಕನಕದಾಸರ ಕೃತಿಗಳಲ್ಲಿ ರಸಘಟ್ಟಗಳು ತುಂಬಿಕೊಂಡಿವೆ. ಶುದ್ಧ ಸಾಹಿತ್ಯಿಕ ಕೃತಿಗಳಾಗಿ ಕನಕದಾಸರ ರಚನೆಗಳನ್ನು ಓದಿ ಆಸ್ವಾದಿಸಬೇಕು” ಎಂದು ಹೇಳಿದರು.

    ಆಶಯ ಭಾಷಣ ಮಾಡಿದ ಕನಕದಾಸ ಸಂಶೋಧನಾ ಕೇಂದ್ರದ ಸಂಯೋಜಕ ಡಾ. ಧನಂಜಯ ಕುಂಬ್ಳೆ ಮಾತನಾಡಿ “ವಚನ ಮತ್ತು ಕೀರ್ತನ ಸಾಹಿತ್ಯ ಕನ್ನಡ ಸಾಹಿತ್ಯದ ಸುವರ್ಣಾಧ್ಯಾಯಗಳಾಗಿದ್ದು ಜೀವನ ತತ್ತ್ವ ಆದರ್ಶಗಳನ್ನು ಸರಳವಾದ ಕಾವ್ಯಾತ್ಮಕ ಧಾಟಿಯಲ್ಲಿ ಮಂಡಿಸಿದರು. ಕನಕದಾಸರು ಹರಿದಾಸ ಚಳುವಳಿಯಲ್ಲಿ ಕವಿಯಾಗಿ ಗುರುತಿಸಿಕೊಂಡವರು. ಸ್ವರ್ಗಕ್ಕೆ ಯಾರು ಹೋಗಬಹುದು ಎಂಬ ಗುರುಗಳ ಪ್ರಶ್ನೆಗೆ ‘ನಾನು’ ಹೋದರೆ ಹೋಗಬಹುದು ಎಂದು ಉತ್ತರಿಸಿ ಅಹಂ ನಿರಸನವೇ ಮಹತ್ತಿಗೆ ದಾರಿ ಎಂಬುದನ್ನು ಮಾರ್ಮಿಕವಾಗಿ ಹೇಳಿದವರು” ಎಂದರು.

    ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಪಾರ್ಶ್ವನಾಥ ಅಜ್ರಿ ವಹಿಸಿ ಕನಕದಾಸರ ಕೀರ್ತನೆಗಳು ಇಂದಿಗೂ ಪ್ರಸ್ತುತ ಎಂದರು. ಶ್ರೀಧವಲಾ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕಿ ಮಲ್ಲಿಕಾ ರಾವ್ ಸ್ವಾಗತಿಸಿ, ವಿದ್ಯಾರ್ಥಿನಿ ಶ್ರೀನಿಧಿ ವಂದಿಸಿ, ವೀಕ್ಷಿತಾ ನಿರೂಪಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleನೃತ್ಯ ವಿಮರ್ಶೆ | ಕಾವ್ಯೋಲ್ಲಾಸದ ‘ರಚನಾ ಡ್ಯಾನ್ಸ್’ ನೂಪುರ ಝೇಂಕಾರ
    Next Article ನೃತ್ಯಾಂತರಂಗ ಸರಣಿ ಕಾರ್ಯಕ್ರಮದಲ್ಲಿ ರಂಜಿಸಿದ ವರ್ಣಗಳು
    roovari

    Comments are closed.

    Related Posts

    ಖ್ಯಾತ ಸಾಹಿತಿ ಎಚ್. ಎಸ್. ವೆಂಕಟೇಶಮೂರ್ತಿ ನಿಧನ

    May 30, 2025

    ಡಾ. ನಳಿನಿ ಮೂರ್ತಿ ದತ್ತಿ ಪ್ರಶಸ್ತಿಗೆ ಕೃತಿಗಳ ಆಹ್ವಾನ

    May 29, 2025

    ಹಾಸನದ ಸಾಹಿತ್ಯ ಸಂಘಟನೆಯಿಂದ 330ನೇ ಮನೆ ಮನೆ ಕವಿಗೋಷ್ಠಿ | ಜೂನ್ 01

    May 29, 2025

    ರಾಜೇಂದ್ರ ಬಿ. ಶೆಟ್ಟಿ ರಚಿಸಿರುವ ಪುಸ್ತಕಗಳ ಅನಾವರಣ ಸಮಾರಂಭ | ಜೂನ್ 01

    May 29, 2025

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.