Subscribe to Updates

    Get the latest creative news from FooBar about art, design and business.

    What's Hot

    ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿಯ ನಲ್ವತ್ತರ ನಲಿವು 11ನೇ ಸರಣಿ ಕಾರ್ಯಕ್ರಮ

    May 16, 2025

    ತಿಂಗಳ ನಾಟಕ ಸಂಭ್ರಮದಲ್ಲಿ ‘ದಿ ಫೈಯರ್’ ನಾಟಕ ಪ್ರದರ್ಶನ | ಮೇ 17

    May 15, 2025

    ಸಾಹಿತಿ ರತ್ನ ಕುಮಾರ್ ಎಂ. ಇವರಿಗೆ ಕ.ಸಾ.ಪ.ದಿಂದ ಸನ್ಮಾನ

    May 15, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಧ್ವನಿ ಫೌಂಡೇಷನ್ ನ ‘ಸ್ವರ ಕುಟೀರ’ ಎಂಬ ಸಂಗೀತ ನೃತ್ಯ ಸಭಾಂಗಣದ ಉದ್ಘಾಟನೆ
    Dance

    ಧ್ವನಿ ಫೌಂಡೇಷನ್ ನ ‘ಸ್ವರ ಕುಟೀರ’ ಎಂಬ ಸಂಗೀತ ನೃತ್ಯ ಸಭಾಂಗಣದ ಉದ್ಘಾಟನೆ

    September 30, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮೈಸೂರು : ಡಾ. ಶ್ವೇತಾ ಮಡಪ್ಪಾಡಿ ಇವರ ಧ್ವನಿ ಫೌಂಡೇಷನ್ ನ ‘ಸ್ವರ ಕುಟೀರ’ ಎಂಬ ಸಂಗೀತ ನೃತ್ಯ ಸಭಾಂಗಣದ ಉದ್ಘಾಟನಾ ಸಮಾರಂಭವು ಮೈಸೂರಿನ ಸೋಮನಾಥ ನಗರದಲ್ಲಿ ದಿನಾಂಕ 22 ಸೆಪ್ಟೆಂಬರ್ 2024ರಂದು ನಡೆಯಿತು.

    ಸಭಾಂಗಣವನ್ನು ಉದ್ಘಾಟಿಸಿದ ಸಚಿವ ಡಾ. ಎಚ್.ಸಿ. ಮಹದೇವಪ್ಪ ಇವರು ಮಾತನಾಡಿ “ಸಂಗೀತ ಮನುಷ್ಯನ ಮಾನಸಿಕ ಆರೋಗ್ಯವನ್ನು ವೃದ್ಧಿಗೊಳಿಸುತ್ತದೆ. ಮನುಷ್ಯ – ಮನುಷ್ಯನ ನಡುವೆ ಸಾಮರಸ್ಯ ತರುತ್ತದೆ. ಸಂಗೀತಕ್ಕೆ ಚಿಕಿತ್ಸಕ ಗುಣವಿದೆ. ಅಂತ ಸಂಗೀತವನ್ನು ಪೋಷಿಸುವ ಕೆಲಸವನ್ನು ಧ್ವನಿ ಫೌಂಡೇಷನ್ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಧ್ವನಿ ಫೌಂಡೇಷನ್ ಮಹಿಳೆಯರ ಶಕ್ತಿಯಾಗಿ, ಮಕ್ಕಳ ಹಕ್ಕುಗಳಿಗಾಗಿ ಕೆಲಸ ಮಾಡಲಿದೆ ಎಂಬುದು ಬಹಳ ಸಂತೋಷದ ಸಂಗತಿ. ನಮ್ಮ ಸಮಾಜದಲ್ಲಿ ದನಿಯಿಲ್ಲದವರಿಗೆ ಧ್ವನಿ ಫೌಂಡೇಶನ್ ಧ್ವನಿ ತಂದುಕೊಡುವ ಹಾಗಾಗಲಿ. ಮುಂಬರುವ ದಿನದಲ್ಲಿ ಧ್ವನಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಮಾಡುವಂತಾಗಲಿ” ಎಂದು ಆಶಿಸಿದರು.

    ಚಿತ್ರ ನಟ, ನಿರ್ದೇಶಕ, ನಿರ್ಮಾಪಕ ಬಿ. ಸುರೇಶ್ ಮಾತನಾಡಿ “ಇಂದು ಸಣ್ಣದಾಗಿ ಆರಂಭವಾಗಿರುವ ಧ್ವನಿಯ ಚಟುವಟಿಕೆಗಳು ಮುಂದೆ ಈ ನಾಡು ಮೆಚ್ಚುವ ಹಾಗೇ ನಡೆಯಲಿ. ಧ್ವನಿ ಫೌಂಡೇಶನ್ ಮೂಲಕ ನೂರಾರು ವಿದ್ಯಾರ್ಥಿಗಳು ಹೊರಬರಲಿ. ಡಾ. ಶ್ವೇತಾ ಮಡಪ್ಪಾಡಿಯವರು ಕಲಾ ಕ್ಷೇತ್ರದಲ್ಲಿ ಅದ್ಭುತ ಕಾರ್ಯಗಳನ್ನು ಮಾಡಲಿ” ಎಂದು ಆಶಿಸಿದರು. ಶ್ರೀಮತಿ ಶಾರದಾ ಭಟ್ ಕಟ್ಟಿಗೆ ಮಾತಾಡಿ “ಡಾ. ಶ್ವೇತಾ ಮಡಪ್ಪಾಡಿಯವರ ಜನಪರ ಕಾರ್ಯ ಬಹಳ ಶ್ರಮದಾಯಕ. ಅವರು ಹಲವು ಕಷ್ಟಗಳ ಮೂಲಕ ಇಂದು ಈ ಹಂತವನ್ನು ತಲುಪಿದ್ದಾರೆ. ಧ್ವನಿ ಫೌಂಡೇಷನ್ ಅವರ ಶ್ರಮದ ಫಲ” ಎಂದು ಹೇಳಿದರು.

    ಉಸ್ತಾದ್ ಫಯಾಜ್ ಖಾನ್ ಅವರ ಸಂಗೀತ ಇಡೀ ಸ್ವರ ಕುಟೀರದ ಆವರಣವನ್ನು ನಾದಲೋಕದಲ್ಲಿ ತೇಲಿಸಿತು. ಹಿಂದೂಸ್ತಾನಿ ಗಾಯನದಿಂದ ಆರಂಭಿಸಿ, ದಾಸರಪದಗಳನ್ನು ಪ್ರಸ್ತುತಪಡಿಸಿದ ಉಸ್ತಾದರು ತಮ್ಮ ಗಾಯನದ ಮೂಲಕ ಅಭಿಮಾನಿಗಳ ಮನಸೂರೆಗೊಂಡರು. ವಿಶ್ವ ವಿಖ್ಯಾತ ಶಿಲ್ಪ ಕಲಾವಿದ ಶ್ರೀ ಜಾನ್ ದೇವರಾಜ್ ತಮ್ಮ ವಿಭಿನ್ನ ಸಂಗೀತದ ಮೂಲಕ ಸಭಾಂಗಣದಲ್ಲಿದ್ದವರನ್ನು ರಂಜಿಸಿದರು. ಧ್ವನಿ ಫೌಂಡೇಷನ್ ನ ವಿದ್ಯಾರ್ಥಿಗಳು ಹಾಡುಗಳನ್ನು ಪ್ರಸ್ತುತಪಡಿಸಿದರು. ಕಾರ್ಯಕ್ರಮದ ಆಯೋಜಕರಾದ ಡಾ. ಶ್ವೇತಾ ಮಡಪ್ಪಾಡಿ ಹಾಗೂ ಶ್ರೀ ಪ್ರಸಾದ್ ಮೈಸೂರು ಉಪಸ್ಥಿತರಿದ್ದರು.

    Share. Facebook Twitter Pinterest LinkedIn Tumblr WhatsApp Email
    Previous Articleತೀರ್ಥಹಳ್ಳಿಯಲ್ಲಿ ಲೋಕಾರ್ಪಣೆಗೊಂಡ ‘ಕನ್ನಡತನ’ ಸಂಶೋಧನಾ ಕೃತಿ
    Next Article ನೃತ್ಯ ವಿಮರ್ಶೆ | ಮನಮೋಹಕ ಯೋಗಭಂಗಿಗಳಿಂದ ಕಣ್ಮನ ಸೆಳೆದ ‘ನೃತ್ಯ ದ್ಯುತಿ’
    roovari

    Comments are closed.

    Related Posts

    ಕಯ್ಯಾರರ ಕುರಿತ ಕವನವಾಚನಕ್ಕೆ ಆಹ್ವಾನ

    May 15, 2025

    ಯಕ್ಷಧ್ರುವ ಪಟ್ಲ ಫೌಂಡೇಶನ್ ಯೂರೋಪ್ ಘಟಕದಿಂದ ‘ಭಾರತ್ ಕಲಾ ವೈಭವ’ ಸಾಂಸ್ಕೃತಿಕ ಉತ್ಸವ

    May 14, 2025

    ಸುರತ್ಕಲ್ಲಿನ ಅನುಪಲ್ಲವಿಯಲ್ಲಿ ‘ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ’ | ಮೇ 17

    May 13, 2025

    ಮಣಿ ಕೃಷ್ಣಸ್ವಾಮಿ ಅಕಾಡೆಮಿಯಿಂದ ಸಂಗೀತ ಕಾರ್ಯಾಗಾರ | ಮೇ 24 ಮತ್ತು 25

    May 12, 2025

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.