Subscribe to Updates

    Get the latest creative news from FooBar about art, design and business.

    What's Hot

    ಶ್ರೀ ಆಂಜನೇಯ ಮಂತ್ರಾಲಯದಲ್ಲಿ ಪಾಕ್ಷಿಕ ತಾಳಮದ್ದಳೆ

    October 27, 2025

    ಮಾತಂಗಿ ಟೀಚರ್ ಮತ್ತು ಡಾಕ್ಟರ್ ನಂದಿನಿಯ ಸಂಗೀತದಲ್ಲಿ ಮುಳುಗಿದ ಗೋಶಾಲೆ

    October 27, 2025

    ಪುಸ್ತಕ ವಿಮರ್ಶೆ | ಗ್ರಾಮಭಾರತದ ಚಿತ್ರಣ ‘ನದಿ ದಾಟಿ ಬಂದವರು’ ಕಾದಂಬರಿ

    October 27, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ನಾಟ್ಯಾರಾಧನಾ ತ್ರಿಂಶೋತ್ಸವದ ಸಮಾರೋಪ ಸಮಾರಂಭದ ಉದ್ಘಾಟನೆ
    Bharathanatya

    ನಾಟ್ಯಾರಾಧನಾ ತ್ರಿಂಶೋತ್ಸವದ ಸಮಾರೋಪ ಸಮಾರಂಭದ ಉದ್ಘಾಟನೆ

    January 1, 2025Updated:January 7, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಉರ್ವದ ನಾಟ್ಯಾರಾಧನಾ ಕಲಾಕೇಂದ್ರದ ವತಿಯಿಂದ ಆಯೋಜಿಸಿದ್ದ ‘ನಾಟ್ಯಾರಾಧನಾ ತ್ರಿಂಶೋತ್ಸವ’ದ ಸಮಾರೋಪ ಸಮಾರಂಭವು ದಿನಾಂಕ 27 ಡಿಸೆಂಬರ್ 2024ರ ಶುಕ್ರವಾರ ಪುರಭವನದಲ್ಲಿ ಉದ್ಘಾಟನೆಗೊಂಡಿತು.

    ಈ ಸಮಾರಂಭವನ್ನು ಉದ್ಘಾಟಿಸಿದ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಇವರು ಮಾತನಾಡಿ “ಕಲೆ ಜೀವನದ ಅವಿಭಾಜ್ಯ ಅಂಗವಾಗಿದ್ದು, ನಮ್ಮ ಕಸುಬಿನ ಜತೆಗೆ ಗಳಿಸಿದ ಸಂಪತ್ತನ್ನು ಕಲೆಗೂ ಮೀಸಲಿರಿಸಿ ಸುಂದರ ಸಮಾಜ ಕಟ್ಟಬೇಕಿದೆ. ಜನ ಭ್ರಷ್ಟರಾಗುವ ಇಂದಿನ ಸಂದರ್ಭದಲ್ಲಿ ಅವರ ಮನಸ್ಸಿನ ಮೇಲೆ ಬೇರೆ ಬೇರೆ ರೀತಿಯ ದಾಳಿಗಳು ಆಗುತ್ತಿರುತ್ತವೆ. ಇದರಿಂದ ಕಲೆ, ಮನರಂಜನೆಯ ವ್ಯತ್ಯಾಸವೇ ತಿಳಿಯದಂತೆ ಆಗುತ್ತಿದೆ. ಇದನ್ನು ನಿವಾರಿಸಲು ಹಿರಿಯರು ಕಟ್ಟಿ ಬೆಳೆಸಿದ ಕಲೆ, ಸಂಸ್ಕೃತಿಯನ್ನು ನಮ್ಮ ಜೀವನದಲ್ಲಿ ಗಟ್ಟಿಯಾಗಿ ಬೇರೂರಿಸಿಕೊಂಡು ಉತ್ತಮ ಸಮಾಜವನ್ನು ರೂಪಿಸಬೇಕು. ಇದಕ್ಕೆ ಎಲ್ಲರ ಸಹಕಾರ ಬೇಕು. ಭರತನಾಟ್ಯಕ್ಕೆ ಸಂಬಂಧಿಸಿ ಸಾಹಿತ್ಯ ತೆಲುಗು, ತಮಿಳಿನಲ್ಲಿ ಇರುವುದರಿಂದ ನಮ್ಮವರಿಗೆ ಅರ್ಥವಾಗುತ್ತಿರಲಿಲ್ಲ. ಇದನ್ನು ‘ನೃತ್ಯಾಮೃತ’ದ ಮೂಲಕ ವಿದುಷಿ ಸುಮಂಗಲಾ ರತ್ನಾಕರ್ ಇವರು ನಿವಾರಿಸಿದ್ದು, ಇದು ಶ್ಲಾಘನೀಯ. ನಾಟ್ಯಾರಾಧನೆ, ಯಕ್ಷಾರಾಧನೆ ಮೂಲಕ ಹಲವು ಶಿಷ್ಯರಿಗೆ ಇವರು ಮಾರ್ಗದರ್ಶನ ಮಾಡಿದ್ದಾರೆ” ಎಂದು ಹೇಳಿದರು.

    ಇದೇ ಸಂದರ್ಭದಲ್ಲಿ ನಾಟ್ಯಾಚಾರ್ಯ ಉಳ್ಳಾಲ ಮೋಹನ ಕುಮಾರ್ ಮತ್ತು ವಿದ್ವಾನ್ ಚಂದ್ರಶೇಖರ ನಾವಡ ಇವರುಗಳಿಗೆ ಗುರುವಂದನೆ ನಡೆಯಿತು. ಸಮಿತಿಯ ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಧ್ವನಿಮುದ್ರಿತ ‘ನೃತ್ಯಾಮೃತ’ವನ್ನು ಮೂಡುಬಿದಿರೆಯ ಉದ್ಯಮಿ ಶ್ರೀಪತಿ ಭಟ್ ಇವರು ಬಿಡುಗಡೆ ಮಾಡಿದರು.

    ಕಲಾಪೋಷಕರಾದ ದಿವಾಣ ಗೋವಿಂದ ಭಟ್, ಶಕುಂತಳಾ ರಮಾನಂದ ಭಟ್, ವೆಂಕಟೇಶ್ ಹೆಬ್ಬಾರ್, ಹಿರಿಯ ವಿದ್ಯಾರ್ಥಿನಿ ವಿದುಷಿ ಸುಶ್ಮಿತಾ ರಾವ್, ವಿದುಷಿ ಸುಮಂಗಲಾ ರತ್ನಾಕರ್, ರತ್ನಾಕರ್ ರಾವ್ ಭಾಗವಹಿಸಿದ್ದರು. ಗಣೇಶ್ ಅಮೀನ್ ಸಂಕಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಶಶಿರಾಜ್ ಕಾವೂರು ನಿರೂಪಿಸಿದರು.

    ವಿದುಷಿ ಭವ ಅಮೀನ್ ಸಂಕಮಾ‌ರ್, ವೃಂದಾ ರಾವ್, ಸಮನ್ವಿತಾ ರಾವ್, ಧರಿತ್ರಿ ಭಿಡೆ, ತನ್ನಿ ವಿ. ಬೋಳೂರು. ದೀಕ್ಷಾ ಸಿ. ಭಟ್ ಹಾಗೂ ಭೂಮಿಕಾ ಎಂ. ಇವರುಗಳು ‘ಭಾವಿಕಾ’ವನ್ನು ಪ್ರಸ್ತುತಿಪಡಿಸಿದರು. ನಟುವಾಂಗದಲ್ಲಿ ವಿದುಷಿ ಸುಮಂಗಲಾ ರತ್ನಾಕರ್, ಗಾಯನದಲ್ಲಿ ಹರ್ಷಿತಾ ವಿದ್ಯಾ, ಮೃದಂಗದಲ್ಲಿ ವಿದ್ವಾನ್ ವಿನಯ್ ನಾಗರಾಜನ್, ಕೊಳಲಿನಲ್ಲಿ ಕೃಷ್ಣ ಕಶ್ಯಪ್ ಸಹಕರಿಸಿದರು. ಮೈಸೂರಿನ ವಿದುಷಿ ಶ್ರೀವಿದ್ಯಾ ಶಶಿಧರ್ ಅವರಿಂದ ಕೌತ್ವಂ ಪ್ರಸ್ತುತಿಗೊಂಡಿತು.

    Share. Facebook Twitter Pinterest LinkedIn Tumblr WhatsApp Email
    Previous Articleಉಡುಪಿಯ ಬಡಗುಪೇಟೆಯಲ್ಲಿ ಚನ್ನಪಟ್ಟಣದ ಗೊಂಬೆಗಳ ತಯಾರಿಕೆಯ ಕಾರ್ಯಾಗಾರ | ಜನವರಿ 4ರಿಂದ 6
    Next Article ಸುರತ್ಕಲ್ಲಿನ ಗೋವಿಂದ ದಾಸ ಕಾಲೇಜಿನಲ್ಲಿ ‘ತ್ರಿದಶ ನಾಟ್ಯ ಕಲೋತ್ಸವ’ | ಜನವರಿ 05
    roovari

    Add Comment Cancel Reply


    Related Posts

    ಮಾತಂಗಿ ಟೀಚರ್ ಮತ್ತು ಡಾಕ್ಟರ್ ನಂದಿನಿಯ ಸಂಗೀತದಲ್ಲಿ ಮುಳುಗಿದ ಗೋಶಾಲೆ

    October 27, 2025

    ಶ್ರೀ ವೀರಾಂನೇಯ ಸ್ವಾಮಿ ದೇವಸ್ಥಾನದಲ್ಲಿ ‘ದೀಪಾವಳಿ ಕುಟುಂಬ ಮಿಲನ’ | ಅಕ್ಟೋಬರ್ 31

    October 25, 2025

    ಶ್ರೀ ಎಡನೀರು ಮಠದಲ್ಲಿ ‘ಸಾವಿರದ ಗಾನಕೋಗಿಲೆಗೆ ಸಾವಿರದ ಗೌರವ’ | ಅಕ್ಟೋಬರ್ 28

    October 25, 2025

    ಮಂಗಳೂರು ದೇರಳಕಟ್ಟೆಯಲ್ಲಿ ಕಥಾಬಿಂದು ಪ್ರಕಾಶನದ ‘ಸಾಹಿತ್ಯೋತ್ಸವ’ | ಅಕ್ಟೋಬರ್ 26

    October 25, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.