Subscribe to Updates

    Get the latest creative news from FooBar about art, design and business.

    What's Hot

    ಪ್ರಸಿದ್ಧ ಚಿತ್ರಕಲಾವಿದ ಸಯ್ಯದ್ ಆಸಿಫ್ ಅಲಿ ಇನ್ನಿಲ್ಲ

    January 6, 2026

    ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ದಾಖಲಿಸಿದ ವಿದುಷಿ ದೀಕ್ಷಾ ರಾಮಕೃಷ್ಣ

    January 6, 2026

    ವಿಜಯಪುರದಲ್ಲಿ ಶ್ರೀ ಕುಮಾರವ್ಯಾಸ ಭಾರತ ವೇದಿಕೆ ವತಿಯಿಂದ ‘ಕುವೆಂಪು ಜಯಂತಿ’

    January 6, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಇಂಟಾಕ್ ವತಿಯಿಂದ ಮಂಗಳೂರು ಹಳೆ ಬಂದರು ಪ್ರದೇಶ ಮಾರ್ಗವಾಗಿ ‘ಹೆರಿಟೇಜ್ ವಾಕ್’
    Heritage

    ಇಂಟಾಕ್ ವತಿಯಿಂದ ಮಂಗಳೂರು ಹಳೆ ಬಂದರು ಪ್ರದೇಶ ಮಾರ್ಗವಾಗಿ ‘ಹೆರಿಟೇಜ್ ವಾಕ್’

    April 19, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು: ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ & ಕಲ್ಚರಲ್ ಹೆರಿಟೇಜ್ (ಇಂಟಾಕ್)ನ ಮಂಗಳೂರು ಅಧ್ಯಾಯವು 2023ರ ಏಪ್ರಿಲ್ 18 ಮಂಗಳವಾರದಂದು ವಿಶ್ವ ಪರಂಪರೆ ದಿನವನ್ನು ಆಚರಿಸುವ ಅಂಗವಾಗಿ ನಗರದ ಹಳೆ ಬಂದರು ಪ್ರದೇಶದ ಮೂಲಕ ‘ಹೆರಿಟೇಜ್ ವಾಕ್’ ಅನ್ನು ಆಯೋಜಿಸಿತು. ಕಲಾವಿದರು, ವಾಸ್ತುಶಿಲ್ಪಿಗಳು, ಬ್ಯಾಂಕ್ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಆಸಕ್ತರು ಪಾರಂಪರಿಕ ನಡಿಗೆಯಲ್ಲಿ ಭಾಗವಹಿಸಿದರು.

    ಬೆಳಗ್ಗೆ 7:10ಕ್ಕೆ ಗುರುಪುರ ನದಿ ದಂಡೆಯಲ್ಲಿರುವ ಹಳೆ ಬಂದರಿನಿಂದ ಆರಂಭವಾದ ಪಾದಯಾತ್ರೆಗೆ ಪ್ರಾಸ್ತಾವಿಕವಾಗಿ ಇಂಟಾಕ್ ಮಂಗಳೂರು ಅಧ್ಯಾಯದ ಸಂಚಾಲಕ ಸುಭಾಸ್ ಚಂದ್ರ ಬಸು ಪಾರಂಪರಿಕ ನಡಿಗೆಯ ಮಹತ್ವವನ್ನು ಪರಿಚಯಿಸಿದರು. 1983ರಿಂದ ವಿಶ್ವ ಪರಂಪರೆ ದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು. ಸಂರಕ್ಷಣಾ ವಾಸ್ತುಶಿಲ್ಪಿ ಕ್ಯಾರೊಲಿನ್ ಡಿಸೋಜಾ ಅವರು ರೋಮನ್ ಅವಧಿಯ ಆರಂಭಿಕ ಉಲ್ಲೇಖದಿಂದ ನಂತರದ ಬ್ರಿಟಿಷ್ ಆಳ್ವಿಕೆಯ ಹಂತದವರೆಗೆ ಬಂದರಿನ ಐತಿಹಾಸಿಕ ವಿಕಾಸವನ್ನು ವಿವರಿಸಿದರು.

    ‘ಕಸ್ಟಮ್ ಹೌಸ್’ ಮೊದಲು ಭೇಟಿ ನೀಡಿದ ಸ್ಥಳ. ಕಸ್ಟಮ್ಸ್ ಅಧೀಕ್ಷಕರಾದ ರಾಮ್ ಅವತಾರ್ ಮೀನಾ ಅವರು 2019ರಲ್ಲಿ ನವೀಕರಣಗೊಂಡ 140ವರ್ಷಗಳ ಹಳೆಯ ಕಟ್ಟಡಕ್ಕೆ ಸಂದರ್ಶಕರನ್ನು ಸ್ವಾಗತಿಸಿದರು. ನಂತರ ನಡಿಗೆಯು ವ್ಯಾಪಾರ ಪ್ರದೇಶ ಮತ್ತು ವ್ಯಾಪಾರಿಗಳ ಸರಕು ಶೇಖರಣಾ ಕಟ್ಟಡಗಳ (ಗೋಡೌನ್‌ಗಳ) ಮೂಲಕ ಸಾಗಿತು. ಭವ್ಯವಾದ ವಾಸ್ತುಶಿಲ್ಪ ಮತ್ತು ಸೊಗಸಾದ ಮರಗೆಲಸದೊಂದಿಗೆ ಕಟ್ಟಲಾದ ಎರಡು ಐತಿಹಾಸಿಕ ಮಸೀದಿಗಳಾದ ಕಚ್ಚಿ ಮೆಮೋನ್ ಮಸೀದಿ ಮತ್ತು ಜೀನತ್ ಬಕ್ಷ್ ಜುಮಾ ಮಸೀದಿಗಳಿಗೆ ಭೇಟಿ ನೀಡಲಾಯಿತು. 9-15ರ ಸುಮಾರಿಗೆ ಸ್ಥಳೀಯ ವ್ಯಾಪಾರಿ ವರ್ಗದವರು ಆರಾಧಿಸುವ ಜೈನ ಬಸದಿಯಲ್ಲಿ ನಡಿಗೆ ಮುಕ್ತಾಯವಾಯಿತು.

    ವಿವರಗಳಿಗಾಗಿ, ಸಂಪರ್ಕಿಸಿ:
    ಸುಭಾಸ್ ಚಂದ್ರ ಬಸು, ಇಂಟಾಕ್ ಸಂಚಾಲಕರು: 8762368048
    ರಾಜೇಂದ್ರ ಕೇದಿಗೆ: 9480014812

    Share. Facebook Twitter Pinterest LinkedIn Tumblr WhatsApp Email
    Previous Articleಮಂಗಳೂರಿನಲ್ಲಿ ತುಳು ಕೂಟ ಕುಡ್ಲದಿಂದ ‘ಬಿಸು ಪರ್ಬ’ – ‘ರತ್ನವರ್ಮ ಹೆಗ್ಗಡೆ ಪ್ರಶಸ್ತಿ ಪ್ರದಾನ’
    Next Article ರಾಜಧಾನಿ ಬೆಂಗಳೂರಿನಲ್ಲಿ ‘ನೃತ್ಯ ಸಿರಿ’
    roovari

    Add Comment Cancel Reply


    Related Posts

    ಮಂಗಳೂರಿನ ಕದ್ರಿ ಪಾರ್ಕಿನಲ್ಲಿ ‘ಕಲಾಪರ್ಬ’ ಚಿತ್ರ ಶಿಲ್ಪ ಸಾಂಸ್ಕೃತಿಕ ಮೇಳ | ಜನವರಿ 09ರಿಂದ 11

    January 5, 2026

    ಕೈಕಂಬದ ಮೇಘಾ ಪ್ಲಾಝಾ ಸಭಾಂಗಣದಲ್ಲಿ ‘ಬ್ಯಾರಿ ಸಾಹಿತ್ಯ ಸಮ್ಮೇಳನ’ | ಜನವರಿ 04

    January 3, 2026

    ಶ್ರೀಲಂಕಾದ ಮಾಧ್ಯಮ ತಜ್ಞರಿಗೆ ‘ಕನ್ನಡ ಪಯಸ್ವಿನಿ ಪ್ರಶಸ್ತಿ’ ಪ್ರದಾನ

    December 31, 2025

    ಕ್ರಿಯೇಟಿವ್ ಕಾಲೇಜಿನಲ್ಲಿ ಕಾರ್ಕಳ ತಾಲೂಕು 21ನೇ ಕನ್ನಡ ಸಾಹಿತ್ಯ ಸಮ್ಮೇಳನ

    December 30, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.