Subscribe to Updates

    Get the latest creative news from FooBar about art, design and business.

    What's Hot

    ಶ್ರೀ ಮಹಾಂತೇಶ ಎಂ. ಗಜೇಂದ್ರಗಡ ಇವರಿಗೆ “ಮೇಘರತ್ನ ಪ್ರಶಸ್ತಿ”

    June 5, 2025

    ಪುಸ್ತಕ ವಿಮರ್ಶೆ | ‘ಡಾ. ಜಿ.ಎಸ್. ಆಮೂರ ಅವರ ಸಮಗ್ರ ಬೇಂದ್ರೆ ವಿಮರ್ಶೆ’

    June 5, 2025

    ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ‘ಹಲಸಿನ ಅರಿವಿನ ಹರಿವು’ ತಾಳಮದ್ದಲೆ | ಜೂನ್ 07

    June 5, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಇಂಟಾಕ್ ಮಂಗಳೂರು ವಿಶ್ವ ಪರಂಪರೆಯ ಸಪ್ತಾಹ ‘ಮಂಗಳೂರಿನ ಕಟ್ಟೆಗಳು’ ಪ್ರದರ್ಶನದ ಉದ್ಘಾಟನೆಯೊಂದಿಗೆ ಮುಕ್ತಾಯ
    Exhibition

    ಇಂಟಾಕ್ ಮಂಗಳೂರು ವಿಶ್ವ ಪರಂಪರೆಯ ಸಪ್ತಾಹ ‘ಮಂಗಳೂರಿನ ಕಟ್ಟೆಗಳು’ ಪ್ರದರ್ಶನದ ಉದ್ಘಾಟನೆಯೊಂದಿಗೆ ಮುಕ್ತಾಯ

    December 1, 2024Updated:January 7, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಆ್ಯಂಡ್ ಕಲ್ಚರಲ್ ಹೆರಿಟೇಜ್ (ಇಂಟಾಕ್)ನ ಮಂಗಳೂರು ಶಾಖೆಯು ತಮ್ಮ ವಿಶ್ವ ಪರಂಪರೆಯ ಸಪ್ತಾಹವನ್ನು ದಿನಾಂಕ 25 ನವೆಂಬರ್ 2024ರಂದು ಕೊಡಿಯಾಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ‘ಮಂಗಳೂರಿನ ಕಟ್ಟೆಗಳು’ ಎಂಬ ಶೀರ್ಷಿಕೆಯ ಪ್ರದರ್ಶನದ ಉದ್ಘಾಟನೆಯೊಂದಿಗೆ ಮುಕ್ತಾಯಗೊಳಿಸಿತು.

    ಕಟ್ಟೆಗಳು ಪವಿತ್ರ ಮರಗಳ ಬುಡದ ಸುತ್ತಲೂ ನಿರ್ಮಿಸಲಾದ ವೇದಿಕೆಗಳು. ಇವು ಕರಾವಳಿ ಪ್ರದೇಶದಲ್ಲಿ ಧಾರ್ಮಿಕ ನೆಲೆಗಳಾಗಿಯೂ ಸಮುದಾಯದ ಕೇಂದ್ರಗಳಾಗಿಯೂ ಗುರುತಿಸಲ್ಪಡುತ್ತವೆ. ಪ್ರದರ್ಶನವು ಕಟ್ಟೆಗಳ ವಿಶಿಷ್ಟ ಸಾಂಸ್ಕೃತಿಕ ಮತ್ತು ಪರಿಸರದ ಮಹತ್ವವನ್ನು ತೋರಿಸುತ್ತದೆ.

    ಈ ಪ್ರದರ್ಶನವು ಇಂಟಾಕ್ ಮಂಗಳೂರು ಶಾಖೆಯ ಸಂಚಾಲಕರಾದ ಸುಭಾಸ್ ಚಂದ್ರ ಬಸು ಅವರ ನೇತೃತ್ವದಲ್ಲಿ ವಾಸ್ತುಶಿಲ್ಪಿಗಳು ಮತ್ತು ವಾಸ್ತುಶಿಲ್ಪದ ವಿದ್ಯಾರ್ಥಿಗಳ ಸಹಕಾರದೊಂದಿಗೆ ಎರಡು ವರ್ಷಗಳಿಂದ ನಡೆದ ಸಮಗ್ರ ದಾಖಲೀಕರಣದ ಯೋಜನೆಯ ಫಲಿತಾಂಶವಾಗಿದೆ. ಮಂಗಳೂರಿನ ಹಳೆಯ ಭಾಗದ 200ಕ್ಕೂ ಹೆಚ್ಚು ಕಟ್ಟೆಗಳ ದಾಖಲೀಕರಣದ ಮೂಲಕ ಇವುಗಳ ಐತಿಹಾಸಿಕ ಮತ್ತು ವ್ಯಾಪ್ತಿಗತ ಬದಲಾವಣೆಯ ಕುರಿತು ಒಂದು ನೋಟವನ್ನು ನೀಡುತ್ತದೆ.

    ಸಾಮಾಜಿಕ, ವ್ಯಾಪಾರ ಮತ್ತು ವಿರಾಮದ ಸ್ಥಳಗಳಾಗಿ ಕಟ್ಟೆಗಳ ಪ್ರಾಮುಖ್ಯತೆಯನ್ನು ವಿವರಿಸಿದ ಸುಭಾಸ್ ಚಂದ್ರ ಬಸು “ಈ ದಿನಗಳಲ್ಲಿ ಕಟ್ಟೆಗಳು ಹೆಚ್ಚು ಧಾರ್ಮಿಕ ಮಹತ್ವವನ್ನು ಪಡೆಯುತ್ತಿದ್ದರೂ, ಈ ಧಾರ್ಮಿಕ ಸಂಬಂಧ ಮರಗಳು ಮತ್ತು ಸ್ಥಳಗಳನ್ನು ಸಂರಕ್ಷಿಸಲು ನೆರವಾಗುತ್ತದೆ. ಆದರೆ ಇದರಿಂದ ಮೊದಲಿದ್ದಂತಹ ಸಾಂಪ್ರದಾಯಿಕ ಚಟುವಟಿಕೆಗಳನ್ನು ಮತ್ತು ಒಮ್ಮೆ ಕಟ್ಟೆಗಳಿಗೆ ಸಂಬಂಧಿಸಿದ ಮುಕ್ತ ಪ್ರವೇಶವನ್ನು ನಿರ್ಬಂಧಿಸುತ್ತದೆ. ಇಂತಹ ದಾಖಲಾತಿ ಪ್ರಕ್ರಿಯೆಗಳನ್ನು ಮಂಗಳೂರು ಮತ್ತು ಇತರ ಪ್ರದೇಶಗಳಿಗೆ ವಿಸ್ತರಿಸುವುದು ಅತ್ಯಗತ್ಯ” ಎಂದರು.

    ಕಾರ್ಯಕ್ರಮದ ಮುಖ್ಯ ಅತಿಥಿ, ಖ್ಯಾತ ಪರಿಸರವಾದಿ ಮಾಧವ್ ಉಳ್ಳಾಲ್, ಇಂಟಾಕ್ ಕಾರ್ಯಕ್ರಮವನ್ನು ಪ್ರಶಂಸಿಸಿದರು. ದಕ್ಷಿಣ ಕನ್ನಡದಲ್ಲಿ 20,000ಕ್ಕೂ ಹೆಚ್ಚು ಮರಗಳನ್ನು ನೆಡುವ ಮೂಲಕ ಪ್ರಸಿದ್ಧರಾದ ಉಳ್ಳಾಲ್ ಅವರು ಮಂಗಳೂರಿನಲ್ಲಿ ನಗರೀಕರಣ ಮತ್ತು ವನನಾಶನದ ಸಮಸ್ಯೆಗಳನ್ನು ವಿವರಿಸಿದರು. “ಈ ನಗರವನ್ನು ದಾಟುವ ಹಸಿರು ಹೊದಿಕೆ ಇಂದು ನಗರೀಕರಣದ ಪರಿಣಾಮವಾಗಿ ಧ್ವಂಸವಾಗುತ್ತಿದೆ. ಮರಗಳನ್ನು ಕಡಿಯುವವರಿಗೆ ಕೇವಲ 200 ರೂಪಾಯಿಗಳ ದಂಡವಿದೆ. ಅರಣ್ಯನಾಶವನ್ನು ತಡೆಯಲು ಕಟ್ಟುನಿಟ್ಟಾದ ನೀತಿ ನಿಯಮಗಳು ಅತ್ಯಗತ್ಯ” ಎಂದು ಹೇಳಿದರು. ಈ ಸಂದರ್ಭದಲ್ಲಿ ಪರಿಪೂರ್ಣ ದಾಖಲೀಕರಣದ ಯೋಜನೆಯ ವರದಿಯ ಮುದ್ರಿತ ಪ್ರತಿಯನ್ನು ಬಿಡುಗಡೆ ಮಾಡಲಾಯಿತು.

    Share. Facebook Twitter Pinterest LinkedIn Tumblr WhatsApp Email
    Previous Articleಯಶಸ್ವಿಯಾಗಿ ಸಂಪನ್ನಗೊಂಡ ತಾಲ್ಲೂಕು ಮಟ್ಟದ ಸಾಹಿತ್ಯ ಹಾಗೂ ಸಾಂಸ್ಕೃತಿಕ ರಸಪ್ರಶ್ನೆಯ ಕಾರ್ಯಕ್ರಮ
    Next Article ಬೆಂಗಳೂರಿನಲ್ಲಿ ಕುಮಾರವ್ಯಾಸ ಜಯಂತಿ ಪ್ರಯುಕ್ತ ಜಿಲ್ಲಾ ಮಟ್ಟದ ಕವಿ-ಕಾವ್ಯ ಪರಿಚಯ ಭಾಷಣ ಸ್ಪರ್ಧೆ | ಡಿಸೆಂಬರ್ 06
    roovari

    Add Comment Cancel Reply


    Related Posts

    ಶ್ರೀ ಮಹಾಂತೇಶ ಎಂ. ಗಜೇಂದ್ರಗಡ ಇವರಿಗೆ “ಮೇಘರತ್ನ ಪ್ರಶಸ್ತಿ”

    June 5, 2025

    ಪುಸ್ತಕ ವಿಮರ್ಶೆ | ‘ಡಾ. ಜಿ.ಎಸ್. ಆಮೂರ ಅವರ ಸಮಗ್ರ ಬೇಂದ್ರೆ ವಿಮರ್ಶೆ’

    June 5, 2025

    ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ‘ಹಲಸಿನ ಅರಿವಿನ ಹರಿವು’ ತಾಳಮದ್ದಲೆ | ಜೂನ್ 07

    June 5, 2025

    ವಿದ್ಯಾದಾಯಿನಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ ಸ್ವೀಕಾರ

    June 4, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.