Subscribe to Updates

    Get the latest creative news from FooBar about art, design and business.

    What's Hot

    ವಿಶೇಷ ಲೇಖನ – ಕರಾವಳಿಯ ಗಾನಕೋಗಿಲೆ ಗುಂಡ್ಮಿ ಕಾಳಿಂಗ ನಾವಡ

    June 6, 2025

    ಪರಿಷತ್ತಿನ ಚಾಮರಾಜೇಂದ್ರ ಸಭಾಭವನದಲ್ಲಿ ‘ಪ್ರೊ. ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿ’ ಪ್ರದಾನ ಸಮಾರಂಭ

    June 6, 2025

    ಡಾ. ಎಂ.ಮೋಹನ ಆಳ್ವ ಇವರಿಗೆ ‘ಡಾ. ಜಿ. ಪಿ. ರಾಜ ರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ’

    June 6, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಧಾರವಾಡದಲ್ಲಿ ರಂಗಾಸಕ್ತರೊಂದಿಗೆ ಸಂವಾದ ಕಾರ್ಯಕ್ರಮ
    Literature

    ಧಾರವಾಡದಲ್ಲಿ ರಂಗಾಸಕ್ತರೊಂದಿಗೆ ಸಂವಾದ ಕಾರ್ಯಕ್ರಮ

    September 3, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಧಾರವಾಡ : ಧಾರವಾಡದ ಮನೋಹರ ಗ್ರಂಥ ಮಾಲೆಯ ಅಟ್ಟದಲ್ಲಿ ರಂಗಾಸಕ್ತರೊಂದಿಗೆ ದಿನಾಂಕ 01 ಆಗಸ್ಟ್ 2024ರಂದು ಸಂವಾದ ಕಾರ್ಯಕ್ರಮ ನಡೆಯಿತು.

    ಈ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಖ್ಯಾತ ಚಲನಚಿತ್ರ ನಟ, ರಂಗಕರ್ಮಿ ಶ್ರೀ ಮಂಡ್ಯ ರಮೇಶ “ಯಾವುದೇ ಸಂದರ್ಭದಲ್ಲೂ ಅವಸರದ ಪ್ರತಿಕ್ರಿಯೆ ಸಂಘರ್ಷಕ್ಕೆ ಎಡೆಮಾಡುತ್ತೆ. ನಾಟಕಕಾರರಾದ ಜಡಭರತ, ಶ್ರೀರಂಗರು, ಬೇಂದ್ರೆ ಮೊದಲಾದವರು ಬರೆದ ನಾಟಕಗಳು ಬಂಡಾಯದ ಪ್ರತೀಕಗಳೇ. ‘ಕದಡಿದ ನೀರು’ ನಾಟಕದ ಹುಚ್ಚ ರಾಚ್ಯಾ ತಿಳುವಳಿಕೆಯ ಮಾತುಗಳನ್ನೇ ಹೇಳುತ್ತಾನೆ. ಎಡ ಬಲ ವಿಚಾರಧಾರೆಯ ಅತೀರೇಕಗಳೇ ನೈಜ ರಂಗಭೂಮಿಯ ಸೊಗಡನ್ನು ಕುಂದಿಸಿವೆ. ವೃತ್ತಿರಂಗಭೂಮಿಯ ವೃತ್ತಿಪರತೆ, ಹವ್ಯಾಸಿ ರಂಗಭೂಮಿಯ ವಿಚಾರಪರತೆ, ರೆಪರ್ಟರಿಯ ಶಿಸ್ತು ಇವೆಲ್ಲವೂ ನನ್ನನ್ನು ರಂಗಕರ್ಮಿಯನ್ನಾಗಿಸಿವೆ. ಪ್ರೀತಿ, ವಿಶ್ವಾಸದಿಂದ ಯುವಪೀಳಿಗೆಯನ್ನು ರಂಗಭೂಮಿಯ ಕಡೆ ಸೆಳೆಯುವ ಮೂಲಕ ನನ್ನ ನಟನ ರಂಗ ರೆಪರ್ಟರಿಯನ್ನು ಕಳೆದ 22 ವರ್ಷಗಳಿಂದ ನಡೆಸಿಕೊಂಡು ಬಂದಿದ್ದೇನೆ. ಚಲನಚಿತ್ರ, ಕಿರುತೆರೆ ಮೊದಲಾದವುಗಳಲ್ಲಿ ರಂಗಭೂಮಿಯೇ ನನ್ನ ಮೊದಲ ಆದ್ಯತೆ. ಹವ್ಯಾಸಿ ರಂಗಭೂಮಿ ಸಶಕ್ತವಾಗಬೇಕು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಸಂವಾದವನ್ನು ಹಿರಿಯ ರಂಗಕರ್ಮಿ ಡಾ. ಶಶಿಧರ ನರೇಂದ್ರ ನಡೆಸಿಕೊಟ್ಟರು. ಡಾ. ರಮಾಕಾಂತ ಜೋಶಿ, ಪ್ರೊ. ಅರವಿಂದ ಕುಲಕರ್ಣಿ, ಡಾ. ಕೃಷ್ಣ ಕಟ್ಟಿ, ಹರ್ಷ ಡಂಬಳ, ಸಮೀರ ಜೋಶಿ, ಡಾ. ಬಿ.ಎಂ. ಶರಭೇಂದ್ರಸ್ವಾಮಿ, ಜ್ಯೋತಿ ದೀಕ್ಷಿತ, ಅಶೋಕ ಮೊಕಾಶಿ, ಲಕ್ಷ್ಮೀಕಾಂತ ಇಟ್ನಾಳ, ಗಿರೀಶ ದೊಡ್ಡಮನಿ, ಹೊಸಮನಿ, ರಮೇಶ ನಾಡಗೀರ, ಎಸ್.ಎನ್. ದೇಶಪಾಂಡೆ, ವೀರಣ್ಣ ಪತ್ತಾರ ಮೊದಲಾದ ರಂಗಮಿತ್ರರು ಸಂವಾದದಲ್ಲಿ ಪಾಲ್ಗೊಂಡಿದ್ದರು.

    Share. Facebook Twitter Pinterest LinkedIn Tumblr WhatsApp Email
    Previous Articleಸಂಗೀತ ವಿಮರ್ಶೆ | ಮಳೆರಾಗಗಳ ‘ರಿಮ್‌ಜಿಮ್’ ಸಂಗೀತ ಕಾರ್ಯಕ್ರಮ
    Next Article ಗುರುವಾಯೂರಿನಲ್ಲಿ ವಿದ್ವಾನ್ ಮಂಜುನಾಥ ಎನ್. ಪುತ್ತೂರು ಇವರಿಂದ ಭರತನಾಟ್ಯ
    roovari

    Comments are closed.

    Related Posts

    ಪರಿಷತ್ತಿನ ಚಾಮರಾಜೇಂದ್ರ ಸಭಾಭವನದಲ್ಲಿ ‘ಪ್ರೊ. ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿ’ ಪ್ರದಾನ ಸಮಾರಂಭ

    June 6, 2025

    ಡಾ. ರಾಗೌ ಸಾಹಿತ್ಯ ಪ್ರಶಸ್ತಿ’ ಹಾಗೂ ‘ಕೆ. ಸಿಂಗಾರಿಗೌಡ ಪುಸ್ತಕ ಪ್ರಶಸ್ತಿ’ ಪ್ರದಾನ ಸಮಾರಂಭ | ಜೂನ್ 08

    June 6, 2025

    ಪುಸ್ತಕ ವಿಮರ್ಶೆ – ‘ಹೌಸ್ ಫುಲ್’

    June 6, 2025

    ಕುಷ್ಟಗಿಯಲ್ಲಿ ಮೌನೇಶ ನವಲಹಳ್ಳಿ ಇವರ ‘ನೀಲಿ ಹೊತ್ತಿಗೆ’ ಕಾದಂಬರಿ ಅವಲೋಕನ ಕಾರ್ಯಕ್ರಮ | ಜೂನ್ 08

    June 6, 2025

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.