ಬೆಂಗಳೂರು : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.) ಬೆಂಗಳೂರು ಇದರ ತುಮಕೂರು ಜಿಲ್ಲೆ ತಿಪಟೂರು ತಾಲೂಕು ಘಟಕದ ವತಿಯಿಂದ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ‘ಅಂತರ್ಜಾಲ ಆಧಾರಿತ ಅಂತರ್ರಾಜ್ಯಮಟ್ಟದ ಚಿತ್ರ ಕಾವ್ಯ ರಚನೆ ಸ್ಪರ್ಧೆ’ಯನ್ನು ಹಮ್ಮಿಕೊಳ್ಳಲಾಗಿದೆ.
ಆಸಕ್ತ ಕವಿಗಳು ದಿನಾಂಕ 30 ಮೇ 2025ರಂದು ಸಂಜೆ 05 ಗಂಟೆಯೊಳಗೆ ತಮ್ಮ ಹೆಸರನ್ನು ಈ ಕೆಳಗಿನ ಸಂಪರ್ಕ ಸಂಖ್ಯೆಗಳಿಗೆ ವಾಟ್ಸಪ್ ಮೂಲಕ ನೋಂದಾಯಿಸಿಕೊಳ್ಳಬಹುದು. ದಿನಾಂಕ 01 ಜೂನ್ 2025ರಂದು ಬೆಳಿಗ್ಗೆ 08ರಿಂದ ರಾತ್ರಿ 08ರವರೆಗೆ ದತ್ತ ಚಿತ್ರಕ್ಕೆ ಸಂಬಂಧಿಸಿದ ಕವಿತೆಗಳನ್ನು ಈ ಕೆಳಕಂಡ ಸಂಖ್ಯೆಗಳಿಗೆ ವಾಟ್ಸಪ್ ಮೂಲಕ ಕಳುಹಿಸಿಕೊಡಬೇಕು.
ಲತಾಮಣಿ ಎಂ.ಕೆ. ತುರುವೇಕೆರೆ – ಅಧ್ಯಕ್ಷರು : 8904095119
ಶಿಲ್ಪಾ ಎನ್. – ಕಾರ್ಯದರ್ಶಿ : 7975168956.
ದಿನಾಂಕ 05 ಜೂನ್ 2025ರಂದು ಸಂಜೆ 07-30 ಗಂಟೆಗೆ ಫಲಿತಾಂಶ ಪ್ರಕಟವಾಗಲಿದ್ದು, ಸ್ಪರ್ಧೆಗೆ ಕಳುಹಿಸಿದ ಕವಿತೆಗಳನ್ನು ಹಿರಿಯ ಅನುಭವಿ ಕವಿಗಳಿಂದ ಮೌಲ್ಯಮಾಪನ ಮಾಡಿಸಲಾಗುವುದು. ಆಯ್ಕೆಯಾದ ಪ್ರಥಮ, ದ್ವಿತೀಯ, ತೃತೀಯ ಹಾಗೂ ಅತ್ಯುತ್ತಮ, ಉತ್ತಮ ಮತ್ತು ಸಮಾಧಾನಕರ ವಿಜೇತ ಕವಿಗಳಿಗೆ ವರ್ಣರಂಜಿತ ಆಕರ್ಷಕ ಭಾವಚಿತ್ರಸಹಿತ ಈ ಪ್ರಶಂಸನಾ ಪತ್ರಗಳನ್ನು ವಾಟ್ಸಪ್ ಮೂಲಕ ಕಳುಹಿಸಿಕೊಡಲಾಗುವುದು.