Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನ ವಾಡಿಯಾ ಸಭಾಂಗಣದಲ್ಲಿ ‘ಬೀಚಿ ರಸಾಯನ’ | ಮೇ 30

    May 29, 2025

    ಡಾ. ನಳಿನಿ ಮೂರ್ತಿ ದತ್ತಿ ಪ್ರಶಸ್ತಿಗೆ ಕೃತಿಗಳ ಆಹ್ವಾನ

    May 29, 2025

    ಶ್ರವಣರಂಗ ಸವಣೂರು ವತಿಯಿಂದ ಯಕ್ಷಸಾಧಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಯಕ್ಷಗಾನ ತಾಳಮದ್ದಳೆ

    May 29, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪರಿಚಯ ಲೇಖನ | ‘ಮಲೆನಾಡ ಕೋಗಿಲೆ’ ಕೇಶವ ಹೆಗಡೆ ಕೊಳಗಿ
    Article

    ಪರಿಚಯ ಲೇಖನ | ‘ಮಲೆನಾಡ ಕೋಗಿಲೆ’ ಕೇಶವ ಹೆಗಡೆ ಕೊಳಗಿ

    June 3, 2024No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಖ್ಯಾತಿಗೂ ಮೀರಿದ ಸರಳತೆ. ಮೃದು. ತಲೆಗೊಂದು ಕೆಂಪು ಮಡಿ ಸುತ್ತಿಕೊಂಡು ಬಿಳೆ ಅಂಗಿ, ಲುಂಗಿಯೊಂದಿಗೆ ಸಣ್ಣದೊಂದು ಶ್ರುತಿ ಪೆಟ್ಟಿಗೆ, ತಾಳಗಳ ಜೊತೆ ವೇದಿಕೆಗೆ ಬಂದರೆ ಪ್ರೇಕ್ಷಕರಿಂದ ಕರತಾಡನ. ಭೀಷ್ಮ ಪರ್ವದ ಶ್ರೀಮನೋಹರ ಸ್ವಾಮಿ ಫ‌ರಾಕು, ಶ್ರೀಕೃಷ್ಣ ಸಂಧಾನದ ಅನೇಕ ಪದ್ಯಗಳು, ಜಾಂಬವತಿ ಕಲ್ಯಾಣದ ರಾಮ ರಾಘವ, ರಾಮ ನಿರ್ಯಾಣದ ಲಲನೆ ಜಾನಕಿ ಮೊದಲೆ ಪೋದಳು, ಲವಕುಶ, ಬ್ರಹ್ಮ ಕಪಾಲ, ರತ್ನಾವತಿ ಕಲ್ಯಾಣ, ಕಾರ್ತ್ಯವೀರಾರ್ಜುನ, ಚಂದ್ರಹಾಸ ಚರಿತ್ರೆ, ರಾಮಾಂಜನೇಯ ಸೇರಿದಂತೆ ಅನೇಕ ಪದ್ಯಗಳಿಗೆ ಇವರು ಜನಪ್ರಿಯರು.

    ಶುದ್ಧ ಸಾಂಪ್ರದಾಯಿಕ ಮಟ್ಟಿನಲ್ಲಿ ಶುದ್ಧ ಭಾವದಲ್ಲಿ, ಪದ್ಯದ ಶಬ್ಧ, ಬಂಧಕ್ಕೆ ಚ್ಯುತಿ ಬರದಂತೆ ಪದ್ಯ ಹೇಳುವ ಕರುನಾಡಿನ ಶ್ರೇಷ್ಠ ಭಾಗವತರು. ಓದಿದ್ದು ಎಸ್ಸೆಸ್ಸೆಲ್ಸಿ. ಆದರೂ ಕ್ಷೇತ್ರದಲ್ಲಿ ಮಾಡಿದ ಸಾಧನೆ ಸಣ್ಣದಲ್ಲ. ತಂದೆಯವರೂ ಇಡಗುಂಜಿ ಯಕ್ಷಗಾನ ಮೇಳದಲ್ಲಿ ವೇಷಧಾರಿಯಾಗಿದ್ದರ ಪರಿಣಾಮ ಎಂಬಂತೆ ಇವರನ್ನೂ ಅತ್ತ ಸೆಳೆದಿತ್ತು. ತಂದೆಯವರು ಹಾಗೂ ಅವರ ಒಡನಾಟದ ಕಲಾವಿದರು ಇವರಿಗೆ ಪ್ರೇರಣೆ ಆದರು.

    ಉತ್ತರ ಕನ್ನಡದ ಸಿದ್ದಾಪುರ ಪೇಟೆ ಸಮೀಪದ ಕೊಳಗಿ ಎಂಬ ಪುಟ್ಟ ಗ್ರಾಮದವರು. 1964ರ ಮಾರ್ಚ್‌ 29ರಂದು ಅನಂತ ಹೆಗಡೆ ಹಾಗೂ ಅರುಂಧತಿ ಹೆಗಡೆ ಅವರ ಪುತ್ರನಾಗಿ ಕೇಶವ ಹೆಗಡೆ ಕೊಳಗಿ ಜನಿಸಿದವರು. ಇಂದು ಮಂಜುಳಾ ಪತ್ನಿ, ಹರ್ಷಿತಾ ಮಗಳು, ಅಮ್ಮನೊಂದಿಗೆ ಕೊಳಗಿಯಲ್ಲಿ ವಾಸ್ತವ್ಯ ಮಾಡಿದವರು… ಯಕ್ಷಗಾನಕ್ಕೇ ಕಳೆದ ಮೂರು ದಶಕಗಳಿಂದ ನಿರಂತರ ಸೇವೆ ನೀಡುತ್ತಿದ್ದವರು.

    ಹೊಸತನಕ್ಕೆ ಬಾಗದೇ, ಹಳೆ ತನಕದ ಸೊಗಸು ಉಳಿಸಿಕೊಡುತ್ತಿರುವ ಗಾನ ಕೋಗಿಲೆ ಇವರು. ಪದ್ಯ ಕೇಳುತ್ತಿದ್ದರೆ ಕೇಳುತ್ತಲೇ ಇರಬೇಕು ಎನಿಸುವಷ್ಟು ಮಧುರ ಲಯದ ಕಂಠದವರು. ಯಾವುದೇ ಯಕ್ಷಗಾನೀಯ ಪದ್ಯ ನೀಡಿದರೂ ಅದನ್ನು ರಾಗಕ್ಕೆ ಜೋಡಿಸಿಕೊಡಬಲ್ಲವರು… ಭಾಗವತಿಕೆಯಲ್ಲಿ ಕೊಳಗಿ ಶೈಲಿಯನ್ನು ಕಟ್ಟಿಕೊಟ್ಟವರು. ಸದಾ ಯಕ್ಷಗಾನದ ಪದ್ಯಗಳ ಮೋಡ್‌ನ‌ಲ್ಲೇ ಇರೋ ಭಾಗವತರು.

    ಎಸ್ಸೆಸ್ಸೆಲ್ಸಿ ಶಿಕ್ಷಣ ಪೂರೈಸುವ ವೇಳೆಗೆ ಶಾಲೆಗೆ ಗೋಲಿ ಹೊಡೆದು ಹ‌ಂಗಾರಕಟ್ಟೆ ಯಕ್ಷಗಾನ ಕಲಾ ಕೇಂದ್ರದಲ್ಲಿ ಮೂರು ವರ್ಷ ಅಧ್ಯಯನ ಮಾಡಿದರು. ಯಕ್ಷಗಾನ ಕ್ಷೇತ್ರದಲ್ಲಿ ದೊಡ್ಡ ಗುರುಗಳು ಎಂದೇ ಹೆಸರಾಗಿದ್ದ ನಾರ್ಣಪ್ಪ ಉಪ್ಪೂರು ಹಾಗೂ ಕೆ.ಪಿ.ಹೆಗಡೆ ಅವರಲ್ಲಿ ಭಾಗವತಿಕೆ ಕಲಿತರು. ಮುಂದೆ ಕಮಲಶಿಲೆ, ಮುಲ್ಕಿ, ಪಂಚಲಿಂಗ, ಶಿರಸಿ, ಬಚ್ಚಗಾರ, ಸಾಲಿಗ್ರಾಮ, ಕೊಂಡದಕುಳಿ, ಯಾಜಿ ಯಕ್ಷಮಿತ್ರ ಮಂಡಳಿ, ವೀರಾಂಜನೇಯ ಮೇಳದಲ್ಲಿ ತಿರುಗಾಟ ಮಾಡಿ ಪ್ರಧಾನ ಭಾಗವತರಾಗಿದ್ದರು. ಮೂರು ದಶಕಗಳ ಹಿಂದೆ ತಾಳ ಹಿಡಿದ ಕೋಗಿಲೆ ಗುನು ಗುಡಿಸುತ್ತಲೇ ಇದೆ. ತನ್ನದೇ ಆದ ಅಸಂಖ್ಯ ಕಲಾಸಕ್ತರ ಬಳಗ ಕಟ್ಟಿಕೊಂಡಿದೆ. ಎಷ್ಟೋ ಮಂದಿ ಕೊಳಗಿ ಅವರ ಪದ್ಯಕ್ಕೆ ಕುಣಿಯಲು ಕಾತುರರಾಗಿರುತ್ತಾರೆ ಎಂದರೆ ಅಚ್ಚರಿಯಲ್ಲ.

    ದಿಗ್ಗಜ ಕಲಾವಿದರಿಗೆ ಭಾಗವತಿಕೆಯ ಹಿರಿಮೆ
    ಯಕ್ಷಗಾನದ ಹಿರಿಯ ಕಲಾವಿದರಾದ ದೇವರು ಹೆಗಡೆ, ಪಿ.ವಿ.ಹಾಸ್ಯಗಾರ, ಮಹಾಬಲ ಹೆಗಡೆ, ಶಂಭು ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ವಾಸುದೇವ ಸಾಮಗ, ಎಂ.ಎಲ್‌.ಸಾಮಗ, ಕೊಂಡದಕುಳಿ ರಾಮಚಂದ್ರ ಹೆಗಡೆ, ಕೃಷ್ಣ ಯಾಜಿ, ಗಣಪತಿ ಭಟ್ಟ ಕಣ್ಣಿ, ಗಣಪತಿ ಹೆಗಡೆ ತೋಟಿ, ವಿನಾಯಕ ಹೆಗಡೆ, ವಿ. ಉಮಾಕಾಂತ ಭಟ್ಟ ಸೇರಿದಂತೆ ಅನೇಕ ಹಿರಿಯ ಕಿರಿಯ ಕಲಾವಿದರನ್ನು ಕುಣಿಸಿದ್ದಾರೆ. ಮಕ್ಕಳಿಂದಲೂ ಹಿಡಿದು ದೊಡ್ಡವರ ತನಕವೂ ಪದ್ಯ ಹೇಳಿ ರಂಗದಲ್ಲಿ ಆಡಿಸಿದ್ದಾರೆ.

    ಯಕ್ಷಗಾನದ ಇಂದಿನ ಸ್ಥಿತಿ ಗತಿ:-
    ಸ್ವಲ್ಪ ಯೋಚನೆ ಮಾಡುವ ಸ್ಥಿತಿ ಇದೆ. ಕಾರಣ ಕಲಾವಿದರಲ್ಲಿ ಉತ್ತಮ ಪ್ರದರ್ಶನ ಕೊಡುವ ಸಾಮ್ಯತೆ ಕಡಿಮೆಯಾಗಿದೆ. ಸುಮಾರು ಕಲಾವಿದರು ಪ್ರಸಂಗದ ಪುಸ್ತಕವನ್ನು ಓದುವುದಿಲ್ಲ, ಮುದ್ರೆಗಳು, ಪಾತ್ರ ಚಿತ್ರಣದ ಕಲ್ಪನೆಯಿಲ್ಲ.

    ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
    ಪ್ರೇಕ್ಷಕರ ತಿಳಿಯುವಿಕೆಯ ಮಟ್ಟ ಕಡಿಮೆಯಾಗುತ್ತಾ ಬಂದಿದೆ. ಸುಧನ್ವ ಕುಣಿದಷ್ಟು, ಅರ್ಜುನ ಕುಣಿಯಬೇಕು. ಮೊದಲು, ತಪ್ಪಿದ್ದರೆ ಚೌಕಿಗೆ ಬಂದು ಹೇಳುವ ಅಭ್ಯಾಸವಿತ್ತು. ಈಗ ಏನಾದರೂ ಮಾಡಿಕೊಳ್ಳಿ ಎನ್ನುವ ಮನ ಸ್ಥಿತಿ ಎಲ್ಲರದಾಗಿದೆ.

    ಕೊಳಗಿ ಕೇಶವ ಹೆಗಡೆಯವರು ಕಳೆದ ಮೂರು ದಶಕಗಳಿಂದ ಕಮಲಶಿಲೆ, ಮುಲ್ಕಿ, ಪಂಚಲಿಂಗ, ಶಿರಸಿ, ಬಚ್ಚಗಾರ, ಸಾಲಿಗ್ರಾಮ, ಕೊಂಡದಕುಳಿ, ಯಾಜಿ ಯಕ್ಷಮಿತ್ರ ಮಂಡಳಿ, ವೀರಾಂಜನೇಯ ಮೇಳದಲ್ಲಿ ತಿರುಗಾಟ ಮಾಡಿದ ಬಡಗುತಿಟ್ಟಿನ ಮೇರು ಭಾಗವತರು.

    ದೇಶ-ವಿದೇಶಗಳಲ್ಲಿಯೂ ತಿರುಗಾಟ.
    ಶಿರಸಿ, ಶಿವಮೊಗ್ಗ, ಮಂಗಳೂರು, ಉಡುಪಿ, ಮೈಸೂರು, ಬೆಂಗಳೂರಲ್ಲದೇ ಮುಂಬಯಿ, ದೆಹಲಿ, ಪೂನಾ, ಚೆನ್ನೈ, ಕೇರಳ, ಅಮೇರಿಕಾ, ದುಬೈ, ಬೆಹರಿನ್‌, ಸಿಂಗಾಪುರಗಳಲ್ಲಿ ಪದ್ಯ ಹೇಳಿದ್ದಾರೆ. ಇವರ ಹಾಡಿನ ಸಿ.ಡಿ, ಯಕ್ಷಗಾನ ಪ್ರಸಂಗಗಳ ಡಿವಿಡಿಗಳೂ ಬಂದಿವೆ. ಅನಂತ ಹೆಗಡೆ ಕೊಳಗಿ ಯಕ್ಷ ಪ್ರತಿಷ್ಠಾನ ಕೂಡ ನಡೆಸುತ್ತಿದ್ದಾರೆ.

    ಕರಾವಳಿ ಕೋಗಿಲೆ, ಯಕ್ಷ ಬಸವ, ಗಾನ ಗಂಧರ್ವ, ಯಕ್ಷ ಸಂಗೀತ ಕಲಾಶ್ರೀ, ಕರಾವಳಿ ರತ್ನಾಕರ ಸೇರಿದಂತೆ ಅನೇಕ ಪುರಸ್ಕಾರಗಳು ಬಂದಿವೆ.

    ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

    • ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು.

    Share. Facebook Twitter Pinterest LinkedIn Tumblr WhatsApp Email
    Previous Articleಕುಂಜತ್ತೂರಿನಲ್ಲಿ ಚಿತ್ರಕಲೆ ಶಾಸ್ತ್ರೀಯ ಸಂಗೀತ ಹಾಗೂ ತುಳು ಕನ್ನಡ ಜನಪದ, ಭಕ್ತಿ ಹಾಗೂ ಭಾವ ಗೀತೆಗಳ ತರಗತಿ ಶುಭಾರಂಭ
    Next Article ‘ಶ್ವೇತಯಾನ-31’ರ ಕಾರ್ಯಕ್ರಮವಾಗಿ ಯಕ್ಷಗಾನ ಭಾಗವತಿಗೆ, ಚಂಡೆ, ಮದ್ದಳೆ, ಹೆಜ್ಜೆ ತರಗತಿಗಳ ಉದ್ಘಾಟನೆ
    roovari

    Add Comment Cancel Reply


    Related Posts

    ಶ್ರವಣರಂಗ ಸವಣೂರು ವತಿಯಿಂದ ಯಕ್ಷಸಾಧಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಯಕ್ಷಗಾನ ತಾಳಮದ್ದಳೆ

    May 29, 2025

    ಭಾಗವತ ಶ್ರೇಷ್ಠ ಕುರಿಯ ಗಣಪತಿ ಶಾಸ್ತ್ರಿಗಳಿಗೆ ಪ್ರತಿಷ್ಠಿತ ‘ಪಟ್ಲ ಪ್ರಶಸ್ತಿ 2025’ ಪ್ರದಾನ

    May 29, 2025

    ಸರಯೂ ಸಪ್ತಾಹದಲ್ಲಿ ರೊ. ಜೆ. ವಿ. ಶೆಟ್ಟರಿಗೆ ಸನ್ಮಾನ.

    May 29, 2025

    ಕೊಂಚಾಡಿಯ ನಾಗಕನ್ನಿಕಾದಲ್ಲಿ ‘ಯಕ್ಷ ಪಕ್ಷ’ ಸರಯೂ ರಜತ ಸಂಭ್ರಮದ ಸಮಾರೋಪ ಸಮಾರಂಭ

    May 29, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.