ಬೆಂಗಳೂರು : ವಿಶ್ವ ಕನ್ನಡ ಜಾನಪದ ಪರಿಷತ್ ಬೆಂಗಳೂರು ಇದರ ವತಿಯಿಂದ ರಾಷ್ಟ್ರೀಯ ಗುಮ್ಮಟ ಉತ್ಸವವು ದಿನಾಂಕ 22 ಜೂನ್ 2025ರಂದು ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಆ ಪ್ರಯುಕ್ತ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕನ್ನಡ ನಾಡು ನುಡಿ ಸಾಹಿತ್ಯ, ಸಂಸ್ಕೃತಿ, ನೆಲ ಜಲ ಹಾಗೂ ಎಲ್ಲ ಪ್ರಕಾರದ ಕಲೆ, ಸಮಾಜ ಸೇವೆ, ಯುವ ಸಂಘಟನೆ, ಆರಕ್ಷಕ, ಕಾನೂನು, ವೈದ್ಯಕೀಯ, ಶಿಕ್ಷಣ, ರಾಜಕೀಯ, ಉದ್ಯಮಿ, ಮಹಿಳಾ ಶಕ್ತಿ, ಗುತ್ತಿಗೆದಾರ, ಮಾಧ್ಯಮ, ಆಡಳಿತ, ಸರ್ಕಾರಿ ಸೇವೆ, ಕಾರ್ಮಿಕ ಸೇವೆ, ಪ್ರತಿಭಾ ವಿದ್ಯಾರ್ಥಿಗಳು ಮುಂತಾದ ಕ್ಷೇತ್ರಗಳಲ್ಲಿ ಸಾಧನೆಗೈದ ಆಸಕ್ತ ಸಾಧಕರು ತಮ್ಮ ಸ್ವ-ವಿವರವನ್ನು ದಿನಾಂಕ 10 ಜೂನ್ 2025ರೊಳಗಾಗಿ 9945161855 ವಾಟ್ಸಪ್ ನಂಬರಗೆ ಕಳುಹಿಸಲು ಕೋರಲಾಗಿದೆ.