Subscribe to Updates

    Get the latest creative news from FooBar about art, design and business.

    What's Hot

    ಮಂಗಳೂರಿನಲ್ಲಿ ಕನಕ ಜಯಂತಿ ಪ್ರಯುಕ್ತ ಏಕವ್ಯಕ್ತಿ ನಾಟಕ ಮತ್ತು ಯಕ್ಷಗಾನ ಪ್ರದರ್ಶನ | ನವೆಂಬರ್ 08

    November 5, 2025

    ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಅಮೋಘ ಯಕ್ಷಗಾನ ಬಯಲಾಟ | ನವೆಂಬರ್ 07

    November 5, 2025

    ಸಾಲಿಗ್ರಾಮದಲ್ಲಿ ದಿವಂಗತ ವೈಕುಂಠ ಹೆಬ್ಬಾರ್ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ

    November 5, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ -2026’ಕ್ಕೆ ರಾಷ್ಟ್ರೀಯ ರಂಗತಂಡಗಳ ನಾಟಕಗಳಿಗೆ ಆಹ್ವಾನ | ಕೊನೆಯ ದಿನಾಂಕ ನವೆಂಬರ್ 25
    Drama

    ‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ -2026’ಕ್ಕೆ ರಾಷ್ಟ್ರೀಯ ರಂಗತಂಡಗಳ ನಾಟಕಗಳಿಗೆ ಆಹ್ವಾನ | ಕೊನೆಯ ದಿನಾಂಕ ನವೆಂಬರ್ 25

    November 5, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮೈಸೂರು : ಕರ್ನಾಟಕ ಸರ್ಕಾರದ ‘ರಂಗಾಯಣ, ಮೈಸೂರು’ ಆಧುನಿಕ ರಂಗಭೂಮಿಯ ಪ್ರತಿಷ್ಠೆಯ ರಂಗಸಂಸ್ಥೆಯಾಗಿದೆ. ಈ ಸಂಸ್ಥೆಯ ಮಹತ್ವದ ಒಂದು ರಂಗ ಯೋಜನೆ ‘ಬಹುರೂಪಿ ಬಹುಭಾಷಾ ರಾಷ್ಟ್ರೀಯ ನಾಟಕೋತ್ಸವ’. ಈ ನಾಟಕೋತ್ಸವವನ್ನು ಪ್ರಸಕ್ತ ಸಾಲಿನಲ್ಲಿ 2026ರ ಜನವರಿ 12ರಿಂದ 18ರವರೆಗೆ ರಂಗಾಯಣದ ಆವರಣದಲ್ಲಿ ‘ಬಹುರೂಪಿ ಬಾಬಾ ಸಾಹೇಬ್’ ಎಂಬ ಶೀರ್ಷಿಕೆಯಡಿ ನಡೆಸಲು ಯೋಜಿಸಲಾಗಿದೆ. ಬಹುರೂಪಿ ಉತ್ಸವ ರಾಷ್ಟ್ರೀಯ ಮಟ್ಟದ ನಾಟಕೋತ್ಸವವಾಗಿದ್ದು, ಈ ಶೀರ್ಷಿಕೆಗೆ ಪೂರಕವಾದ ಅತ್ಯುತ್ತಮ ಗುಣಮಟ್ಟದ ರಂಗಪ್ರಯೋಗಗಳನ್ನು ಈ ಉತ್ಸವದಲ್ಲಿ ಪ್ರದರ್ಶಿಸಬೇಕೆಂಬುದು ರಂಗಾಯಣದ ಆಶಯ.

    ಈ ಹಿನ್ನೆಲೆಯಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಇವರ ಬದುಕು ಬರಹ ಹೋರಾಟಗಳನ್ನು ನೆನಪಿಸುವ ಧಮನಿತ/ಶೋಷಿತ ಸಮುದಾಯ ಕಥನಗಳ ನಾಟಕಗಳೂ ಸೇರಿದಂತೆ ಹಲವು ವೈವಿಧ್ಯಮಯ ನಾಟಕಗಳನ್ನು ಬಹುರೂಪಿಯಲ್ಲಿ ಆಯೋಜಿಸಲು ಕನ್ನಡ, ಇಂಗ್ಲೀಷ್ ಸೇರಿದಂತೆ ಭಾರತೀಯ ಇತರ ಭಾಷೆಗಳ ನಾಟಕಗಳನ್ನು ಆಹ್ವಾನಿಸಲಾಗಿದೆ ಮತ್ತು ‘ಮಕ್ಕಳ ಬಹುರೂಪಿ’ಗಾಗಿ ಮುಖ್ಯ ನಾಟಕಗಳೊಂದಿಗೆ ಮಕ್ಕಳಿಗಾಗಿ ಪ್ರದರ್ಶಿಸುವ ನಾಟಕಗಳನ್ನು ಆಹ್ವಾನಿಸುತ್ತಿದ್ದೇವೆ. ಈ ಉತ್ಸವದಲ್ಲಿ ಭಾಗವಹಿಸಲು ಇಚ್ಛೆಯುಳ್ಳ ರಂಗತಂಡಗಳು ರಂಗಾಯಣದ ವೆಬ್‌ ಸೈಟ್ rangayanamysore.karnataka.gov.in ನಲ್ಲಿ ಅರ್ಜಿಯನ್ನು ಡೌನ್‌ಲೋಡ್‌ ಮಾಡಿಕೊಂಡು ತಮ್ಮ ತಂಡ ಹಾಗೂ ನಾಟಕದ ವಿವರಗಳನ್ನು ಭರ್ತಿ ಮಾಡಿ, ನಾಟಕದ ಪೆನ್‌ಡ್ರೈವ್‌ನ್ನು ಲಗತ್ತಿಸಿ ದಿನಾಂಕ 25 ನವೆಂಬರ್ 2025ರೊಳಗಾಗಿ ರಂಗಾಯಣಕ್ಕೆ ತಲುಪುವಂತೆ ಕಳುಹಿಸಿಕೊಡಲು ಕೋರಿದೆ. ರಂಗಾಯಣದ ಇ-ಮೇಲ್ ವಿಳಾಸ [email protected] ಗೆ ನಾಟಕದ ಯೂಟ್ಯೂಬ್ ಲಿಂಕನ್ನೂ ಕಳುಹಿಸಬಹುದು. ಈ ಉತ್ಸವಕ್ಕೆ ಆಯ್ಕೆಯಾಗುವ ನಾಟಕ ತಂಡಗಳಿಗೆ ರಂಗಾಯಣದ ನಿಯಮಾನುಸಾರ ಗೌರವ ಸಂಭಾವನೆ, ಪ್ರಯಾಣ ವೆಚ್ಚ ಪಾವತಿಸಲಾಗುವುದು. ಸ್ಥಳೀಯ ಆತಿಥ್ಯ ವ್ಯವಸ್ಥೆಯನ್ನು ಮಾಡಲಾಗುವುದು. ಆಯ್ಕೆಯಾಗುವ ತಂಡಗಳಿಗೆ ಉಳಿದ ವಿವರಗಳನ್ನು ಪತ್ರದ ಮೂಲಕ ತಿಳಿಸಲಾಗುವುದು.

    baikady drama roovari theatre
    Share. Facebook Twitter Pinterest LinkedIn Tumblr WhatsApp Email
    Previous Articleಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ಶಿವರಾಮ ಕಾಸರಗೋಡು ಅಭಿನಂದನೆ
    Next Article ಸಾಲಿಗ್ರಾಮದಲ್ಲಿ ದಿವಂಗತ ವೈಕುಂಠ ಹೆಬ್ಬಾರ್ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ
    roovari

    Add Comment Cancel Reply


    Related Posts

    ಮಂಗಳೂರಿನಲ್ಲಿ ಕನಕ ಜಯಂತಿ ಪ್ರಯುಕ್ತ ಏಕವ್ಯಕ್ತಿ ನಾಟಕ ಮತ್ತು ಯಕ್ಷಗಾನ ಪ್ರದರ್ಶನ | ನವೆಂಬರ್ 08

    November 5, 2025

    ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಅಮೋಘ ಯಕ್ಷಗಾನ ಬಯಲಾಟ | ನವೆಂಬರ್ 07

    November 5, 2025

    ಸಾಲಿಗ್ರಾಮದಲ್ಲಿ ದಿವಂಗತ ವೈಕುಂಠ ಹೆಬ್ಬಾರ್ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ

    November 5, 2025

    ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ಶಿವರಾಮ ಕಾಸರಗೋಡು ಅಭಿನಂದನೆ

    November 5, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.