Subscribe to Updates

    Get the latest creative news from FooBar about art, design and business.

    What's Hot

    ವಿಶೇಷ ಲೇಖನ – ಶತಾಯುಷಿ, ಕನ್ನಡದ ಖ್ಯಾತ ಬರಹಗಾರ ಡಾ. ಎ. ಎನ್. ಮೂರ್ತಿರಾವ್

    June 16, 2025

    ಭರತಾಂಜಲಿಯಿಂದ ಕಣ್ಮನ ತಣಿಸಿದ ರಂಗಪ್ರವೇಶ…ಗುರು ನಮನ..

    June 16, 2025

    ಪುಸ್ತಕ ಬಹುಮಾನಕ್ಕಾಗಿ ಜಾನಪದ ಕೃತಿ ಆಹ್ವಾನ | ಕೊನೆಯ ದಿನಾಂಕ ಜೂನ್ 30

    June 16, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಉಡುಪಿಯ ಬಡಗುಪೇಟೆಯಲ್ಲಿ ‘ಜನಪದ’ ದೇಶೀಯ ಕಲೆಯ ಸರಣಿ ಕಾರ್ಯಾಗಾರ | ಜನವರಿ 27, 28 ಮತ್ತು 29ರಂದು
    Drawing

    ಉಡುಪಿಯ ಬಡಗುಪೇಟೆಯಲ್ಲಿ ‘ಜನಪದ’ ದೇಶೀಯ ಕಲೆಯ ಸರಣಿ ಕಾರ್ಯಾಗಾರ | ಜನವರಿ 27, 28 ಮತ್ತು 29ರಂದು

    January 25, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ : ಭಾವನಾ ಫೌಂಡೇಷನ್ (ರಿ.) ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ವತಿಯಿಂದ ಹಿರಿಯಡ್ಕದ ಸಂಸ್ಕೃತಿ ಸಿರಿ ಟ್ರಸ್ಟ್ ಹಾಗೂ ಆಭರಣ ಜುವೆಲ್ಲರ್ಸ್ ಸಹಯೋಗದಲ್ಲಿ ಆಯೋಜಿಸುವ ‘ಜನಪದ’ ದೇಶೀಯ ಕಲೆಯ ಸರಣಿ ಕಲಾ ಕಾರ್ಯಾಗಾರದ ಒಂಭತ್ತು ಮತ್ತು ಹತ್ತನೇ ಆವೃತ್ತಿಯು ದಿನಾಂಕ 27-01-2024 ಶನಿವಾರದಂದು ಅಪರಾಹ್ನ 2 ಗಂಟೆಗೆ ಬಡಗುಪೇಟೆಯ ‘ಹತ್ತು ಮೂರು ಇಪ್ಪಂತ್ತೆಂಟು ಗ್ಯಾಲರಿ’ಯಲ್ಲಿ ಪ್ರಾರಂಭವಾಗಲಿದೆ.

    ಈ ಕಾರ್ಯಾಗಾರವು ಕೇಂದ್ರ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರಾದ ಪ್ರೊ. ಮುರುಳೀಧರ ಉಪಾಧ್ಯ ಹಿರಿಯಡಕ ಇವರಿಂದ ಉದ್ಘಾಟನೆಗೊಳ್ಳಲಿದೆ. ಮುಖ್ಯ ಅತಿಥಿಗಳಾಗಿ ಈಶಾವಾಸ್ಯ ಪ್ರತಿಷ್ಠಾನದ ವಿಶ್ವಸ್ಥರಾದ ಶ್ರೀ ವಿನಯ್ ಬನ್ನಂಜೆ ಹಾಗೂ ಮಂಗಳೂರಿನ ಆರ್ಕಿಟೆಕ್ಟ್ ಶ್ರೀ ಪ್ರಮುಖ್ ರೈಯವರು ಭಾಗವಹಿಸಲಿದ್ದು, ಭಾವನಾ ಫೌಂಡೇಷನ್ ಇದರ ನಿರ್ದೇಶಕರಾದ ಹಾವಂಜೆ ಮಂಜುನಾಥ ರಾವ್‌ರವರು ಉಪಸ್ಥಿತರಿರಲಿದ್ದಾರೆ.

    ಈ ದೇಶೀಯ ಕಲೆಯ ಸರಣಿ ಕಲಾ ಕಾರ್ಯಾಗಾರದ ಭಾಗವಾಗಿ ಮೈಸೂರು ಹಾಗೂ ಗಂಜೀಫಾ ಚಿತ್ರಕಲೆಯನ್ನು ಈ ಬಾರಿ ಪರಿಚಯಿಸುತ್ತಿದ್ದು, ಯುವ ಕಲಾವಿದರಾದ ಶಶಾಂಕ್ ಭಾರಧ್ವಾಜ್ ರವರು ಈ ಕಾರ್ಯಾಗಾರವನ್ನು ನಡೆಸಿಕೊಡಲಿದ್ದಾರೆ. ದಿನಾಂಕ 27-01-2024 ಶನಿವಾರ ಮತ್ತು ದಿನಾಂಕ 28-01-2024 ಭಾನುವಾರ ಮೈಸೂರು ಚಿತ್ರಶೈಲಿ ಹಾಗೂ ದಿನಾಂಕ 29-01-2024 ಸೋಮವಾರ ಗಂಜೀಫಾ ಕಲೆಯ ಕಾರ್ಯಾಗಾರವು ನಡೆಯಲಿದೆ.

    ಇದೇ ಸಂದರ್ಭದಲ್ಲಿ “ಗಿಲ್ಡೆಡ್ ಡಿವೈನಿಟಿ” ಎನ್ನುವ ಶೀರ್ಷಿಕೆಯಡಿಯಲ್ಲಿ ಶಶಾಂಕ್ ಭಾರಧ್ವಾಜ್ ಇವರ ಕಲಾಕೃತಿಗಳ ಕಲಾ ಪ್ರದರ್ಶನವು ಅನಾವರಣಗೊಳ್ಳಲಿದೆ. ಕಲಾಪ್ರದರ್ಶನದಲ್ಲಿ ಭಾರತೀಯ ಸಾಂಪ್ರದಾಯಿಕ ಮೈಸೂರು ಕಲಾಶೈಲಿಯಲ್ಲಿ ಅರಳಿರುವ ಕೃಷ್ಣ, ಶ್ರೀರಾಮ, ವಿಠ್ಠಲ, ವಿಷ್ಣು, ಲಕ್ಷ್ಮಿ, ಗಣೇಶ ಮೊದಲಾದ ಹದಿನೈದು ಕಲಾಕೃತಿಗಳು ಪ್ರದರ್ಶನದಲ್ಲಿರಲಿದ್ದು, 30ನೇ ಜನವರಿಯ ತನಕ ಅಪರಾಹ್ನ 3ರಿಂದ 7ರವರೆಗೆ ಬಡಗುಪೇಟೆಯ ಗ್ಯಾಲರಿಯಲ್ಲಿ ಸಾರ್ವಜನಿಕ ವೀಕ್ಷಣೆಗೆ ತೆರೆದಿರಲಿದೆ. ಹೆಚ್ಚಿನ ಮಾಹಿತಿ ಮತ್ತು ಕಾರ್ಯಾಗಾರದ ನೋಂದಣಿಗಾಗಿ ಜನಾರ್ದನ ಹಾವಂಜೆ (9845650544)ಯವರನ್ನು ಸಂಪರ್ಕಿಸಬಹುದು.

     

     

    Share. Facebook Twitter Pinterest LinkedIn Tumblr WhatsApp Email
    Previous Articleಪುರಭವನದಲ್ಲಿ ಭರತಾಂಜಲಿಯಿಂದ ‘ನೃತ್ಯಾಮೃತಂ 2024’ | ಜನವರಿ 27
    Next Article ಧಾರವಾಡದಲ್ಲಿ ಡಾ. ದ.ರಾ. ಬೇಂದ್ರೆ ಅವರ 128ನೆಯ ಜನ್ಮ ದಿನಾಚರಣೆ ಹಾಗೂ ‘ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
    roovari

    Add Comment Cancel Reply


    Related Posts

    ಕಲಾಂಗಣದಲ್ಲಿ ಮಕ್ಕಳ ಕಥಾನುವಾದ ಕಾರ್ಯಾಗಾರ | ಜೂನ್ 28 ಮತ್ತು 29 

    June 13, 2025

    ಬಿ.ಸಿ. ರೋಡಿನಲ್ಲಿ ‘ತುಳುವೆರೆನ ತುಳುನಾಡ ಸಂತೆ’ ತುಳು ಸಾಹಿತ್ಯ ಸಾಂಸ್ಕೃತಿಕ ರಂಗ | ಜೂನ್ 20, 21 ಮತ್ತು 22

    June 13, 2025

    ಮೈಸೂರಿನಲ್ಲಿ ಪ್ರೇರಣಾ ಕಲಾ ಕಾರ್ಯಾಗಾರ | ಜೂನ್ 28

    June 12, 2025

    ಬೆಂಗಳೂರಿನಲ್ಲಿ ‘ಅಭಿನಯ ಕಾರ್ಯಾಗಾರ’ | ಜೂನ್ 20ರಿಂದ 29

    June 12, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.