Subscribe to Updates

    Get the latest creative news from FooBar about art, design and business.

    What's Hot

    ಬೆಳ್ತಂಗಡಿಯ ಪೆರಿಂಜೆ ಎಸ್.ಡಿ.ಎಂ. ಪ್ರೌಢ ಶಾಲೆಯಲ್ಲಿ ಗಮಕ ವಾಚನ

    August 25, 2025

    ಶಕ್ತಿನಗರದ ಕಲಾಂಗಣದಲ್ಲಿ ಕೊಂಕಣಿ ಮಾನ್ಯತಾ ದಿನಾಚರಣೆ- 2025 ಆಚರಣೆ

    August 25, 2025

    ಅಭೂತಪೂರ್ವ ಕಾರ್ಯಕ್ರಮ ‘ಶ್ರಾವಣದ ಕವಿ ಬೇಂದ್ರೆ’

    August 25, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಜನಪದರು ರಂಗಮಂದಿರದಲ್ಲಿ ‘ಜನಪದರು ಸಾಂಸ್ಕೃತಿಕ ವೇದಿಕೆ’ಯ ಅಮೃತ ಮಹೋತ್ಸವ
    Drama

    ಜನಪದರು ರಂಗಮಂದಿರದಲ್ಲಿ ‘ಜನಪದರು ಸಾಂಸ್ಕೃತಿಕ ವೇದಿಕೆ’ಯ ಅಮೃತ ಮಹೋತ್ಸವ

    October 18, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಕರ್ನಾಟಕದ ಕ್ರಿಯಾಶೀಲ ರಂಗ ತಂಡಗಳಲ್ಲಿ ಜನಪದರು ಈಗ ತನ್ನ ಪ್ರತಿ ತಿಂಗಳ ಎರಡನೇ ಶನಿವಾರದ ನಾಟಕ ಪ್ರದರ್ಶನ ಸರಣಿ “ರಂಗ ಮಾಲೆ -75” ಅಮೃತ ಮಹೋತ್ಸವ ತಿಂಗಳು. ಈ ಕಾರಣಕ್ಕೆ ದಿನಾಂಕ 14-10-2023ರಿಂದ ಮೂರು ದಿನಗಳ ರಂಗ ಸಂಭ್ರಮ ಆಯೋಜನೆ ಮಾಡಿದ್ದು, ಉದ್ಘಾಟನೆ ಮಾಡಿದ ನಾಡಿನ ಸಾಂಸ್ಕೃತಿಕ ರಾಯಭಾರಿ ಸಾಣಿ ಹಳ್ಳಿಯ ಶ್ರೀ ಮಠದ ಪೂಜ್ಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ “ಜನಪದರು ರಂಗ ಮಂದಿರ ನೋಡಿ ಮಹಾಸಂತಸವಾಗಿದೆ. ನಾನು ರಾಷ್ಟ್ರದ ಹಲವಾರು ರಂಗ ಮಂದಿರ ನೋಡಿದ್ದು, ಆಧುನಿಕ ರಿವಾ ಲಿಂಗ್ ಹೈಡ್ರಾಲಿಕ್ ಅಲ್ಲದೆ ಸುಸಜ್ಜಿತ ಧ್ವನಿ ಬೆಳಕುಗಳು ಹೊಂದಿದೆ. ಶ್ರೇಷ್ಠ ಆಸನ ಹಾಗೂ ಹವಾ ನಿಯಂತ್ರಿತ ಸೌಲಭ್ಯ ಕೇವಲ ಜನರ ಸಹಕಾರದಿಂದ ಮಾಡಿದ ಈ ಘನ ಕಾರ್ಯ ಅಧ್ಯಕ್ಷ ಪಾಪಣ್ಣ ಕಾಟಂ ನಲ್ಲೂರು ಮತ್ತು ತಂಡ ಅಭಿನಂದನಾರ್ಹರು. ಇದರೊಂದಿಗೆ ನಮ್ಮ ಶಿವಸಂಚಾರ ಹಾಗೂ ಇತರೇ ರಂಗ ತಂಡಗಳ ನಾಟಕ ನಿಮಗೆ ತಲುಪಿಸಲು ಹಾಗೆ, ದಾಸೋಹದ ಅರಿವು ಮಾಡಿಸಿದ್ದಾರೆ. ಅವರ ತಂಡ ಸಹ ಉತ್ತಮವಾಗಿದೆ ಇದಕ್ಕೆ ಸ್ಥಳೀಯ ನಾಗರೀಕರು ತಮ್ಮ ಸಂಪಾದನೆಯ ಸ್ವಲ್ಪ ದಾನ ನೀಡಿ ಸಾಂಸ್ಕೃತಿಕ-ಸಾಹಿತ್ಯ ಸೇವೆ ಸಲ್ಲಿಸಿ” ಎ೦ದು ಕರೆ ನೀಡಿದರು.

    ಇದೇ ವೇಳೆ ಸಿದ್ದೇಶ್ವರ ನನಸುಮನೆಯವರ ರಂಗಕೃತಿ ‘ಮಾತೆ ಮಹತ್ವ’ ಬಿಡುಗಡೆ ಮಾಡಿ, ಇಂದಿನ ಪೀಳೆಗೆ ಯುವಜನರು ಸಹ ನೋಡಲೇಬೇಕಾದ ನಾಟಕ ಎಂದರು. ಇದೇ ಸಂದರ್ಭದಲ್ಲಿ ನಾಟಕಕಾರ ಸಿದ್ದೇಶ್ವರ, ನಿವೃತ್ತ ಅಭಿಯಂತರು ಶ್ರೀ ರಾಜಶೇಖರ್ ಹಾಗೂ ತಾ.ಪಂ. ಇ.ಓ. ಶ್ರೀ ಮಂಜುನಾಥ್ ಇವರನ್ನು ಸನ್ಮಾನಿಸಿ ಗೌರವಿಸಿದರು. ಮಾಜಿ ಸಚಿವರಾದ ಶ್ರೀ ಅರವಿಂದ ಲಿಂಬಾವಳಿಯವರು ರಂಗ ಕಾರ್ಯಕ್ಕೆ ಸಹಕರಿಸಿದ ವೇಣು ಜ್ಯೋತಿಪುರ, ಬಿ.ಜಿ. ರಾಜೇಶ್, ಗ್ರಾ.ಪಂ. ಅಧ್ಯಕ್ಷ ಗುರುರಾಜ, ಅಮರಾವತಿ, ಬೊಮ್ಮೇನಹಳ್ಳಿ ಮನಿರಾಜ್ ಗೌಡ, ಲಿ೦ಗರಾಜ ಅರಸ, ರವಿ ಕನ್ನಮಂಗಲ, ಬಿ.ಚನ್ನಪ್ಪ ಇತರರನ್ನು ಹಾಗೂ ನಾಟಕ ಪ್ರದರ್ಶನ ತಂಡವನ್ನು ಗೌರವಿಸಿದರು. ‘ಮಾತೆ ಮಹತ್ವ’ ನಾಟಕ ಪ್ರೇಕ್ಷಕರನ್ನು ಮಂತ್ರ ಮುಗ್ಧರನ್ನಾಗಿಸಿತು. ವೇದಿಕೆ ಅಧ್ಯಕ್ಷ ಪಾಪಣ್ಣ ಕಾಟಂ ನಲ್ಲೂರು ತಮ್ಮ ರಂಗ ಕೈಂಕರ್ಯಕ್ಕೆ ಸಹಕರಿಸಿದ ಮಹನೀಯರ, ಸಂಘ ಸಂಸ್ಥೆಗಳ ಮತ್ತು ಪತ್ರಕರ್ತರ ಸಹಾಯಕ್ಕೆ ಕೃತಜ್ಞತೆ ಸಲ್ಲಿಸಿದರು. ಪದಾಧಿಕಾರಿಗಳಾದ ಜಗದೀಶ್ ಕೆಂಗನಾಳ, ರಾಮಕೃಷ್ಣ ಬೆಳತ್ತೂರು, ಎಂ. ಸುರೇಶ್, ಚಲಪತಿ ಶಿವಕುಮಾರ, ಮಮತ, ಮಹೇಶ ಇವರು ಉಪಸ್ಥಿತರಿದ್ದರು.

    Share. Facebook Twitter Pinterest LinkedIn Tumblr WhatsApp Email
    Previous Articleಪೊರ್ಕೋಡಿಯ ಶ್ರೀ ಸೋಮನಾಥೇಶ್ವರ ಯಕ್ಷನಿಧಿ (ರಿ) ಸಂಸ್ಥೆಯ ‘ದಶಮಾನೋತ್ಸವ ಸಂಭ್ರಮ’
    Next Article ಸೋಣಂಗೇರಿಯ ನಡುಮನೆಯಲ್ಲಿ ‘ಸೋನ ನೆನಪು’
    roovari

    Add Comment Cancel Reply


    Related Posts

    ಧ್ವನಿ ಫೌಂಡೇಷನ್ ವತಿಯಿಂದ ಮಕ್ಕಳಿಗಾಗಿ ವಾರಾಂತ್ಯ ತರಗತಿಗಳು

    August 25, 2025

    ನಾಟಕ ವಿಮರ್ಶೆ | ‘ಕುಹೂ’ ಹಳಿಗಳ ಮೇಲೊಂದು ಕಥಾನಕ

    August 23, 2025

    ನಟಮಿತ್ರರು ತಂಡದಿಂದ ‘ಆ ಊರು ಈ ಊರು’ ವಿಶಿಷ್ಟ ಕಥಾ ಹಂದರದ ನಾಟಕ ಪ್ರದರ್ಶನ | ಆಗಸ್ಟ್ 24 ಮತ್ತು 25

    August 22, 2025

    ಸೋಮೇಶ್ವರದ ಆನಂದಾಶ್ರಮ ಪ್ರೌಢ ಶಾಲೆಯಲ್ಲಿ ‘ಡೆನ್ನ ಡೆನ್ನಾನ – ಪದ ಪನ್ಕನ’ | ಆಗಸ್ಟ್ 22

    August 21, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.