Subscribe to Updates

    Get the latest creative news from FooBar about art, design and business.

    What's Hot

    “ಪ್ರತಿಯೊಬ್ಬ ವ್ಯಕ್ತಿಯ ಒಳಗೊಬ್ಬ ಕಲಾವಿದನಿರ್ತಾನೆ” – ಕಾಸರಗೋಡು ಚಿನ್ನಾ

    June 2, 2025

    ಕರ್ನಾಟಕ ಅರೆಭಾಷೆ ಸಾಹಿತ್ಯ ಅಕಾಡೆಮಿಯಿಂದ ಅರೆಭಾಷೆ ಕಥೆ ಬರೆಯುವ ಕಾರ್ಯಾಗಾರ

    June 2, 2025

    ‘ಬಾಳ ಹಾದಿಯಲಿ ಬೆಳ್ಳಿ ಚುಕ್ಕಿ’ ಕಾದಂಬರಿಗೆ ಇಂಡಿಯನ್ ಐಕಾನ್ ಅವಾರ್ಡ್

    June 2, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಂಗಳೂರಿನ ಸಂತ ಅಲೋಶಿಯಸ್ ಪ್ರೌಢ ಶಾಲೆಯಲ್ಲಿ ‘ಜೀವ -ಭಾವ-ಯಾನ’ ಕಾರ್ಯಕ್ರಮ
    Literature

    ಮಂಗಳೂರಿನ ಸಂತ ಅಲೋಶಿಯಸ್ ಪ್ರೌಢ ಶಾಲೆಯಲ್ಲಿ ‘ಜೀವ -ಭಾವ-ಯಾನ’ ಕಾರ್ಯಕ್ರಮ

    September 28, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಮಂಗಳೂರಿನ ಲೇಖಕಿಯರ ವಾಚಕಿಯರ ಸಂಘದ ಹಿರಿಯ ಸದಸ್ಯೆ ಬಿ. ಎಂ. ರೋಹಿಣಿಯವರ ಮಾತೃಶ್ರೀಯವರಾದ ದೇವಕಿಯಮ್ಮನವರ ಸ್ಮರಣಾರ್ಥ ಆಯೋಜಿಸಿದ ದತ್ತಿನಿಧಿ ಕಾರ್ಯಕ್ರಮ ‘ಜೀವ -ಭಾವ-ಯಾನ’ ದಿನಾಂಕ 13 ಸೆಪ್ಟೆಂಬರ್ 2024ರ ಶುಕ್ರವಾರದಂದು ಮಂಗಳೂರಿನ ಸಂತ ಅಲೋಶಿಯಸ್ ಪ್ರೌಢ ಶಾಲಾ ಸಭಾಂಗಣದಲ್ಲಿ ನಡೆಯಿತು.


    ವಿದ್ಯಾರ್ಥಿ ಆಯುಷ್ ಪ್ರೇಂ ಹಾಡಿದ ಕುವೆಂಪು ಅವರ ‘ಮುಚ್ಚುಮರೆಯಿಲ್ಲದೆಯೇ’ ಆಶಯಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಶಾಲೆಯ ಕನ್ನಡ ಅಧ್ಯಾಪಿಕೆ ಕ್ರಿಸ್ ಎವರ್ಟ್ ಡಿಸೋಜ ಅವರು ಅತಿಥಿಗಳನ್ನು ಸ್ವಾಗತಿಸಿದರು.
    ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಲೆಯ ಮುಖ್ಯೋಪಾಧ್ಯಾಯರಾದ ಫಾ. ಜಾನ್ಸನ್ ಪಿಂಟೋ ಎಸ್. ಜೆ. ಮಾತನಾಡಿ
    ‘’ಜೀವನ ಅಂದರೆ ಬರಿಯ ವಿದ್ಯೆ ಮತ್ತು ನೌಕರಿಯಲ್ಲ. ಓದು ಹಾಗೂ ಜ್ಞಾನದ ಮೂಲ. ಓದಿನ ಜೊತೆ ಬರೆಯುವ ಹವ್ಯಾಸ ಬೆಳೆಸಿಕೊಂಡರೆ ವೈಚಾರಿಕತೆ ಹೆಚ್ಚುತ್ತದೆ.” ಎಂದು ವಿದ್ಯಾರ್ಥಿಗಳಿಗೆ ಓದಿನ ಮಹತ್ವವನ್ನು ತಿಳಿಸಿದರು.


    ಪ್ರಾಸ್ತಾವಿಕ ಮಾತನಾಡಿದ ದತ್ತಿನಿಧಿಯ ಪೋಷಕರಾದ ಬಿ. ಎಂ. ರೋಹಿಣಿ “ಪ್ರತಿಯೊಬ್ಬನ ಮನಸಿನೊಳಗೆ ರಾಕ್ಷಸನಿದ್ದಾನೆ ಹಾಗೂ ದೇವತೆಯರೂ ಇದ್ದಾರೆ. ಹೃದಯದೊಳಗಿನ ದೇವತೆಯನ್ನು ಜಾಗೃತವಾಗಿರಿಸಿ ರಾಕ್ಷಸನನ್ನು ತುಳಿಯಬೇಕಾದರೆ ಸಾಹಿತ್ಯ, ಮತ್ತು ಇತರ ಕಲೆಗಳನ್ನು ಪ್ರೀತಿಸಿ. ದೀಪದ ಒಂದು ಬತ್ತಿ ಬೆಳಗದಿದ್ದರೆ ಆ ಭಾಗ ಕತ್ತಲಾಗುತ್ತದೆ.” ಎಂದು ವಿದ್ಯಾರ್ಥಿಗಳಿಗೆ ಹಿತನುಡಗಳನ್ನಾಡಿದರು.


    ಮುಖ್ಯ ಅತಿಥಿಯಾಗಿ ಭಾಗವಹಿಸಿದ ರಫಿಕ್ ಮಾಸ್ಟರ್ (ಪ್ರೇರಣಾ ತಜ್ಞರು) ಮಾತನಾಡಿ “ಅಕ್ಷರದಿಂದ ಅಧಿಕಾರ ಸಿಗುತ್ತದೆ. ಸಂಸ್ಕಾರದಿಂದ ಯೋಗ್ಯತೆ ಸಿಗುತ್ತದೆ.‌” ಎಂದು ವಿದ್ಯೆಯೊಂದಿಗೆ ಉತ್ತಮ ಸಂಸ್ಕಾರದ ಅವಶ್ಯಕತೆಯನ್ನು ವಿವರಿಸಿದರು. ಉತ್ತಮ ಆಶಯಗಳೊಂದಿಗೆ ತಮ್ಮ ಗುರಿಯತ್ತ ಗಮನವೀಯುವ ಅಗತ್ಯವನ್ನು ವಿವಿಧ ಉದಾಹರಣೆಗಳೊಂದಿಗೆ ಮನದಟ್ಟು ಮಾಡಿಸಿದರು. ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗಿಯಾದರು.


    ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕ. ಲೇ. ವಾ. ಸಂಘದ ಅಧ್ಯಕ್ಷೆ ಶಕುಂತಳಾ ಟಿ. ಶೆಟ್ಟಿ ತಮ್ಮ ನುಡಿಗಳಲ್ಲಿ ತಾವು ಕಂಡ ಬಾಲ ಕಾರ್ಮಿಕನ ಮಾತೃಭಕ್ತಿಯನ್ನು ಉದಾಹರಿಸಿ ವಿದ್ಯೆಯೊಂದಿಗೆ ಆದರ್ಶ ಗುಣಗಳನ್ನು ಮೈಗೂಡಿಸುವ ಅಗತ್ಯವನ್ನು ವಿವರಿಸಿದರು.
    ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ‘ಹೆಣ್ಣು – ನಾ ಕಂಡಂತೆ‘ ಎನ್ನುವ ವಿಷಯದ ಮೇಲೆ ಪ್ರಬಂಧ ಸ್ಪರ್ಧೆ ನಡೆಸಲಾಗಿತ್ತು. ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಕುಮಾರಿ ಯುಕ್ತಿ, ದ್ವಿತೀಯ ಬಹುಮಾನವನ್ನು ಕುಮಾರಿ ಸ್ನೇಹಾ ಹಾಗೂ ತೃತೀಯ ಬಹುಮಾನವನ್ನು ಪೂರ್ಣೇಶ್ ಕುಮಾರ್ ಗಳಿಸಿದರು. ವಿಜೇತರಿಗೆ ಬಹುಮಾನವಾಗಿ ಪ್ರಶಸ್ತಿ ಪತ್ರದೊಂದಿಗೆ ಪುಸ್ತಕ ಮತ್ತು ನಗದು ಬಹುಮಾನವನ್ನು ವಿತರಿಸಲಾಯಿತು. ಕ. ಲೇ.ವಾ.ದ ಸದಸ್ಯೆಯೂ ಆಗಿರುವ ಶಾಲಾ ಅಧ್ಯಾಪಕಿ ಫೆಲ್ಸಿ ಲೋಬೋ ಕಾರ್ಯಕ್ರಮವನ್ನು ನಿರ್ವಹಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಸಿಂಗಾಪುರದ ರಂಗ ತರಬೇತಿಗೆ ಮನೀಷ್ ಆಯ್ಕೆ
    Next Article ವಿಟ್ಲದಲ್ಲಿ ಮಕ್ಕಳಿಗಾಗಿ ‘ಆರ್ಟ್ ಕ್ಯಾಂಪ್’ | ಕೊನೆಯ ದಿನಾಂಕ ಅಕ್ಟೋಬರ್ 4
    roovari

    Comments are closed.

    Related Posts

    ಕರ್ನಾಟಕ ಅರೆಭಾಷೆ ಸಾಹಿತ್ಯ ಅಕಾಡೆಮಿಯಿಂದ ಅರೆಭಾಷೆ ಕಥೆ ಬರೆಯುವ ಕಾರ್ಯಾಗಾರ

    June 2, 2025

    ‘ಬಾಳ ಹಾದಿಯಲಿ ಬೆಳ್ಳಿ ಚುಕ್ಕಿ’ ಕಾದಂಬರಿಗೆ ಇಂಡಿಯನ್ ಐಕಾನ್ ಅವಾರ್ಡ್

    June 2, 2025

    ಕ.ಸಾ.ಪ.ದಿಂದ ಸ್ಮರಣ ಸಂಚಿಕೆ ಬಿಡುಗಡೆ ಹಾಗೂ ‘ಎದೆಯ ಹಣತೆ’ ಕೃತಿ ಕುರಿತು ಚರ್ಚೆ

    June 2, 2025

    ಕಾಸರಗೋಡಿನಲ್ಲಿ ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈ ಜನ್ಮದಿನೋತ್ಸವ ಸಂಭ್ರಮ | ಜೂನ್ 08

    June 2, 2025

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.