Subscribe to Updates

    Get the latest creative news from FooBar about art, design and business.

    What's Hot

    ಮಂಗಳೂರಿನ ಕುದ್ಮುಲ್‌ ರಂಗರಾವ್‌ ಪುರಭವನದಲ್ಲಿ ‘ಸನಾತನ ನೃತ್ಯೋತ್ಸವ’

    December 30, 2025

    ನೃತ್ಯ ವಿಮರ್ಶೆ | ವಿಭಿನ್ನ ನೃತ್ತಪ್ರಯೋಗಗಳಿಗೆ ಸಾಕ್ಷಿಯಾದ ‘ನೃತ್ಯವಾಹಿನಿ’

    December 30, 2025

    ‘ಕಲಾ ಪರ್ವ’ದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರಸ್ತುತಿ

    December 30, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಂತ್ರಮುಗ್ಧಗೊಳಿಸಿದ ‘ಜ್ಞಾನ ನೃತ್ಯ ವಂದನಮ್’
    Bharathanatya

    ಮಂತ್ರಮುಗ್ಧಗೊಳಿಸಿದ ‘ಜ್ಞಾನ ನೃತ್ಯ ವಂದನಮ್’

    December 10, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಾಲಯದ ಸಂತೋಷಿ ಕಲಾಮಂಟಪದಲ್ಲಿ ದಿನಾಂಕ 29 ಡಿಸೆಂಬರ್ 2025ರಂದು ವಿದುಷಿ ಜ್ಞಾನ ಐತಾಳ್ ಇವರ ‘ಜ್ಞಾನ ನೃತ್ಯ ವಂದನಂ’ ಗುರು ವಂದನ ಕಾರ್ಯಕ್ರಮ ಸಂಪನ್ನಗೊಂಡಿತು.

    ಶಿವನನ್ನು ಸ್ತುತಿಸುವ ಪುಷ್ಪಾಂಜಲಿಯೊಂದಿಗೆ ನೃತ್ಯ ಕಾರ್ಯಕ್ರಮ ಪ್ರಾರಂಭಗೊಂಡಿತು. ಅಷ್ಟದಿಕ್ಷಾಲಕರಿಗೆ, ಗುರುಗಳಿಗೆ ಹಾಗೂ ಪ್ರೇಕ್ಷಕರಿಗೆ ವಂದಿಸುವ ನೃತ್ಯವಿದು. ಎರಡನೆಯದಾಗಿ ‘ಯಮನಲ್ಲಿ ಕಾಣನೆಂದು ಹೇಳಬೇಡ… ಯಮನೇ ಶ್ರೀ ರಾಮನು ಸಂದೇಹ ಬೇಡ..’ ಎನ್ನುವ ಪುರಂದರ ದಾಸರ ರಚನೆಯ ಶಿವರಂಜಿನಿ ರಾಗ ಆದಿ ತಾಳದ ನೃತ್ಯ ಕಲಾರಸಿಕರನ್ನು ಭಾವಪರವಶರಾಗಿಸಿತು. ರಾಮ ರಾವಣನಿಗೆ, ನರಹರಿ ಹಿರಣ್ಯಕಶಿಪುವಿಗೆ, ಕಂಸನಿಗೆ ಕೃಷ್ಣನು ಹೇಗೆ ಯಮನಾದ ಎನ್ನುವ ಕಥನವನ್ನು ನೃತ್ಯದ ಮೂಲಕ ವಿಹಂಗಮವಾಗಿ ನಾಟ್ಯರೂಪದಲ್ಲಿ ವೇದಿಕೆಯ ಮೇಲೆ ಕಟ್ಟಿ ತೊಟ್ಟ ಜ್ಞಾನಳ ಹಾವ-ಭಾವ ಪ್ರೇಕ್ಷಕರನ್ನು ಮಂತ್ರಮುಗ್ಧರಾಗಿಸಿತು.

    ಪದವರ್ಣದಲ್ಲಿ ಕೈಲಾಸವಾಸಿ ಶಿವನ ಮನ್ಮಥ ದಹನ, ತಾಂಡವ ನೃತ್ಯ, ಬೇಡರ ವೇಷದಲ್ಲಿ ಬಂದ ಅರ್ಜುನನಿಗೆ ಪಾಶುಪತಾಸ್ತ್ರ ನೀಡುವ ಪ್ರಸಂಗ ವೀಕ್ಷಕರ ಕಣ್ಮನ ತಣಿಸಿತು. ಶಿವ ತಾಂಡವ ನೃತ್ಯದಲ್ಲಿ ಶಿವನ ಗೆಜ್ಜೆಯ ಶಬ್ದ ಆತನ ಕಣ್ಣಿನ ಚಲನೆಗಳನ್ನು ನವರಸಗಳನ್ನು ತನ್ನ ನಾಟ್ಯ ವೈಭವದ ಮೂಲಕ ಹೃದಯಂಗಮವಾಗಿ ಕಟ್ಟಿಕೊಟ್ಟಳು. ಶಿವ ವರ್ಣನೆಯ ನಾಟ್ಯ ದೃಶ್ಯ ಅವಿಸ್ಮರಣೀಯ, ಅಮೋಘ, ಅನುಪಮ.

    ಆನಂತರದಲ್ಲಿ ಆದಿ ತಾಳದಲ್ಲಿ ಅಗಸ್ಯರ ರಚನೆಯ ‘ಶ್ರೀ ಚಕ್ರ ರಾಜ ಸಿಂಹಾನನೇಶ್ವರಿ’ ಎನ್ನುವ ಪಾರ್ವತಿ ದೇವಿಯನ್ನು ಸ್ತುತಿಸುವ ನೃತ್ಯ ನಡೆಯಿತು. ಐದನೆಯದಾಗಿ ಜಯ ದೇವ ವಿರಚಿತ ಆದಿ ತಾಳ ದರ್ಬಾರಿ ರಾಗದಲ್ಲಿ ‘ಸಾ…ವಿರಹೇ’ ಎನ್ನುವ ಹರಿವಿರಹದಿಂದ ನೊಂದಿರುವ ರಾಧೆಯ ವಿಯೋಗವನ್ನು ಕೃಷ್ಣನಿಗೆ ಮನಮುಟ್ಟುವಂತೆ ತಿಳಿಸುವ ಆಹ್ಲಾದಕರ ನೃತ್ಯಸುಧೆ ಹರಿಯಿತು. ಕೋಪದಲ್ಲಿ ಕುಳಿತಿರುವ ಪತಿಯ ಮನವನ್ನು ಪರಿಪರಿಯಾಗಿ ಒಲಿಸುವ ಮಾತನಾಡಬಾರದೇನೋ.. ಎನ್ನುವ ಜಾವಳಿ ನೃತ್ಯದ ತಂಪು ಕಂಪು ಪ್ರವಹಿಸಿತು. ಕೊನೆಯಲ್ಲಿ ಉಲ್ಲಾಸಭರಿತ ಲಯಪೂರ್ಣ ರಚನೆಯ ತಿಲ್ಲಾನ ವೀಕ್ಷಕರನ್ನು ಸಂತಸಗೊಳಿಸಿತು. ತಿಲ್ಲಾನ ಬಳಿಕ ನೃತ್ಯ ಯಾತ್ರೆ ಶಾಂತ ಸಮಾಪ್ತಿ, ನಾದೋ ಪಾಸನೆಯ ಅಂತಿಮ ಪ್ರಾರ್ಥನೆ ಎನಿಸಿದ ದೇವತೆಗಳಿಗೆ, ಗುರುಗಳಿಗೆ ಹಾಗೂ ಪ್ರೇಕ್ಷಕರಿಗೆ ಕೃತಜ್ಞತೆ ಅರ್ಪಣೆಯ ಮಂಗಳಂ ಮೂಲಕ ನೃತ್ಯ ಕಾರ್ಯಕ್ರಮ ಕೊನೆಗೊಂಡಿತು.

    ಜ್ಞಾನಳ ಲಾಲಿತ್ಯಪೂರ್ಣ ನೃತ್ಯಕ್ಕೆ ಸಾಥ್ ನೀಡಿದ ವಿದ್ವಾನ್ ಉಣ್ಣಿಕೃಷ್ಣನ್ ವೀಣಾಲಯಂ ನೀಲೇಶ್ವರ ಇವರ ಮೋಹಕ ಸಂಗೀತ, ಕಾರ್ತಿಕ್ ವ್ಯಧಾತ್ರಿ ಇವರ ಮೃದಂಗ ಹಾಗೂ ವಿದ್ವಾನ್ ನಿತೀಶ್ ಅಮ್ಮಣ್ಣಾಯರ ಕೊಳಲು ವಾದನ ಕಾರ್ಯಕ್ರಮದ ಮೆರುಗು ಹೆಚ್ಚಿಸಿತು. ಸುನಿಲ್ ಉಚ್ಚಿಲ ಹಾಗೂ ನಯನ ಇವರ ಮನೆಸಳೆಯುವ ವೇಷಭೂಷಣ, ಮನು ಮುರಳೀಧರ ಇವರ ಮೇಕಪ್ ಕಾರ್ಯಕ್ರಮ ಕಳೆಗಟ್ಟುವಂತೆ ಮಾಡಿತು. ಒಟ್ಟಿನಲ್ಲಿ ಈ ನೃತ್ಯ ಕಾರ್ಯಕ್ರಮ ಕಲೋಪಾಕಾಸಕರ ಸ್ಮರಣೆಯಲ್ಲಿ ದೀರ್ಘಕಾಲ ಉಳಿಯುವ ಸವಿಸಂಜೆಯಾಯಿತು.

    ಬಿ.ಸಿ. ನಾವಡ

    baikady bharatanatyam dance Music roovari
    Share. Facebook Twitter Pinterest LinkedIn Tumblr WhatsApp Email
    Previous Articleಉಪ್ಪಿನಕುದ್ರು ‘ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ –2026’ಗೆ ಆರ್ಗೋಡು ಮೋಹನದಾಸ್ ಶೆಣೈ ಆಯ್ಕೆ
    Next Article ಮನೋಹರ ಗ್ರಂಥ ಮಾಲಾದಲ್ಲಿ ‘ಆರ್ಯ ನೆನಪು’ ಕಾರ್ಯಕ್ರಮ
    roovari

    Add Comment Cancel Reply


    Related Posts

    ಮಂಗಳೂರಿನ ಕುದ್ಮುಲ್‌ ರಂಗರಾವ್‌ ಪುರಭವನದಲ್ಲಿ ‘ಸನಾತನ ನೃತ್ಯೋತ್ಸವ’

    December 30, 2025

    ನೃತ್ಯ ವಿಮರ್ಶೆ | ವಿಭಿನ್ನ ನೃತ್ತಪ್ರಯೋಗಗಳಿಗೆ ಸಾಕ್ಷಿಯಾದ ‘ನೃತ್ಯವಾಹಿನಿ’

    December 30, 2025

    ‘ಕಲಾ ಪರ್ವ’ದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರಸ್ತುತಿ

    December 30, 2025

    ವಿಶ್ವ ಕೊಂಕಣಿ ಕೇಂದ್ರದಲ್ಲಿ ವಿದ್ಯಾರ್ಥಿವೇತನ ವಿತರಣೆ ಹಾಗೂ ‘ವಿಕಾಸ-2025’ ಕೌಶಲ್ಯ ತರಬೇತಿ

    December 30, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.