Subscribe to Updates

    Get the latest creative news from FooBar about art, design and business.

    What's Hot

    ಕರ್ನಾಟಕ ಲೇಖಕಿಯರ ಸಂಘದ 2025ನೆಯ ಸಾಲಿನ ಪುಸ್ತಕ ಬಹುಮಾನಕ್ಕೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಫೆಬ್ರುವರಿ 10

    January 14, 2026

    ಮಂಗಳೂರಿನ ಪುರಭವನದಲ್ಲಿ ‘ಅನುಪಮ’ ಮಾಸಿಕದ ರಜತ ಮಹೋತ್ಸಹ ವರ್ಷಾಚರಣೆ | ಜನವರಿ 15

    January 14, 2026

    ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಶ್ರೀಮತಿ ಜಲಜಾ ಶೇಖರ್ ಆಯ್ಕೆ

    January 13, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪತ್ರಕರ್ತ ಧನಂಜಯ ಮೂಡುಬಿದಿರೆ ಇವರೆಗೆ ದ. ಕ. ಜಿಲ್ಲಾ ಕ. ಸಾ. ಪ ದಿಂದ ಗೌರವ ಸನ್ಮಾನ
    Literature

    ಪತ್ರಕರ್ತ ಧನಂಜಯ ಮೂಡುಬಿದಿರೆ ಇವರೆಗೆ ದ. ಕ. ಜಿಲ್ಲಾ ಕ. ಸಾ. ಪ ದಿಂದ ಗೌರವ ಸನ್ಮಾನ

    February 20, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥೆಯು ಮಂಗಳೂರು ವಿಶ್ವವಿದ್ಯಾನಿಲಯ ಕೊಣಾಜೆಯ ಮಂಗಳ ಸಭಾಂಗಣದಲ್ಲಿ ದಿನಾಂಕ 21 ಮತ್ತು 22 ಫೆಬ್ರವರಿ 2025ರಂದು ನಡೆಯಲಿರುವ 27ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ ಧನಂಜಯ ಮೂಡುಬಿದಿರೆ ಇವರನ್ನು ಸನ್ಮಾನಿಸಲಿದೆ.
    ಬಿ. ಎಸ್‌. ಸಿ. ಪದವಿ ಹಾಗೂ ಫ್ರೆಂಚ್ ಪ್ರೈಮರಿ ಪದವಿ ಗಳಿಸಿರುವ ಧನಂಜಯ ಮೂಡುಬಿದಿರ 37 ವರ್ಷಗಳ ಕಾಲ ‘ಹೊಸದಿಗಂತ’, ‘ಮುಂಗಾರು’, ‘ಕನ್ನಡ ಜನಾಂತರಂಗ’, ‘ಜನ ಈದಿನ’ ಮತ್ತು ‘ಉದಯವಾಣಿ’ ಪತ್ರಿಕೆಗಳಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಕೊಪ್ಪಳ ಮತ್ತು ಮಂಡ್ಯದಲ್ಲಿ 90ರ ದಶಕದಲ್ಲಿ ನಡೆದಿದ್ದ ಅ. ಭಾ. ಕನ್ನಡ ಸಾಹಿತ್ಯ ಸಮ್ಮೇಳನ, ಮೂಡುಬಿದಿರೆಯಲ್ಲಿ ನಡೆದಿದ್ದ 71ನೇ ಅ. ಭಾ. ಕ. ಸಾಹಿತ್ಯ ಸಮ್ಮೇಳನ, ಬೆಳಗಾವಿ, ಮಂಗಳೂರು ಮೊದಲಾದೆಡೆ ನಡೆದಿದ್ದ ಅ. ಭಾ. ಕ. ಸಾ. ಸಮ್ಮೇಳನಗಳಲ್ಲಿ ಭಾಗಿಯಾಗಿ ಸಮಗ್ರ ವರದಿ ಪ್ರಕಟಿಸಿದ್ದಾರೆ.
    ಸಾಹಿತ್ಯದಲ್ಲೂ ಆಸಕ್ತಿ ಹೊಂದಿರುವ ಇವರ ಬರವಣಿಗೆಯ ಕವನ, ಕಥೆ, ಹಾಸ್ಯ, ವ್ಯಕ್ತಿ/ಸ್ಥಳ ಪರಿಚಯ, ರಂಗ ವಿಮರ್ಶೆ, ಕಲಾವಿದರ ಸಂದರ್ಶನ, ಪರಿಚಯ ಇತ್ಯಾದಿ ಹಲವಾರು ಪತ್ರಿಕೆಗಳಲ್ಲಿ ಪ್ರಕತಗೊಂಡಿವೆ. ‘ಸಾಕ್ರೆಟೀಸನ ಉರುಳು’ ಎಂದ ಪುಟ್ಟ ನಾಟಕ ಕೃತಿ ರಚಿಸಿರುವ ಇವರು ನವಸಾಕ್ಷರರಿಗಾಗಿ `ತುಳು ನಾಡ ಸಿರಿ’ ಎಂಬ ಪುಟ್ಟ ಕೃತ, ಆಧುನಿಕ ಆಹಾರ ಪದ್ಧತಿಯ ಅಪಾಯಗಳ ಕುರಿತಾದ ‘ಆಹಾರ-ಪೂರಕ, ಮಾರಕ’ ಕೃತಿಗಳನ್ನು ರಚಿಸಿದ್ದಾರೆ. ಬೇಲಾಡಿ, ಎಡಪದವು ಮೊದಲಾದೆಡೆ ನಡೆದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಸ್ವರಚಿತ ಕವನ ವಾಚನ ಮಾಡಿದ್ದಾರೆ.
    ಇವರ ಪತ್ರಿಕಾ ರಂಗದ ಸೇವೆಗಾಗಿ ‘ರಾಜ್ಯಮಟ್ಟದ ಹೂಗಾರ್ ಮಾಧ್ಯಮ ಪ್ರಶಸ್ತಿ’ ಜೋತಗೆ ಮೂಡುಬಿದಿರೆ, ಕಾರ್ಕಳ, ಹೆಬ್ರಿ ಮೊದಲಾದೆಡೆ ವಿವಿಧ ಸಂಘಸಂಸ್ಥೆಗಳಿಂದ ಪತ್ರ ಸಹಿತ ಸಮ್ಮಾನ ಸಂದಿವೆ.

    kannada Literature
    Share. Facebook Twitter Pinterest LinkedIn Tumblr WhatsApp Email
    Previous Articleಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನಲ್ಲಿ ಭಾಷಾಂತರಕಾರರ ಸಮಾವೇಶ ಹಾಗೂ ಪುಸ್ತಕ ಬಿಡುಗಡೆ
    Next Article ವಿಶೇಷ ಲೇಖನ – ಕರ್ನಾಟಕದ ಖ್ಯಾತ ರಂಗ ಕರ್ಮಿ ಕೆ. ವಿ. ಸುಬ್ಬಣ್ಣ
    roovari

    Add Comment Cancel Reply


    Related Posts

    ಕರ್ನಾಟಕ ಲೇಖಕಿಯರ ಸಂಘದ 2025ನೆಯ ಸಾಲಿನ ಪುಸ್ತಕ ಬಹುಮಾನಕ್ಕೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಫೆಬ್ರುವರಿ 10

    January 14, 2026

    ಮಂಗಳೂರಿನ ಪುರಭವನದಲ್ಲಿ ‘ಅನುಪಮ’ ಮಾಸಿಕದ ರಜತ ಮಹೋತ್ಸಹ ವರ್ಷಾಚರಣೆ | ಜನವರಿ 15

    January 14, 2026

    ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಶ್ರೀಮತಿ ಜಲಜಾ ಶೇಖರ್ ಆಯ್ಕೆ

    January 13, 2026

    ಪುಸ್ತಕ ವಿಮರ್ಶೆ | ಮಾಲತಿ ಪಟ್ಟಣಶೆಟ್ಟಿಯವರ ‘ಹೂ ದಂಡಿ’

    January 13, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.